ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಮತೂಕ ವ್ಯಕ್ತಿತ್ವಕ್ಕೆ ಶಾರೀರಿಕ ಕ್ರೀಡೆಗಳು ಸಹಕಾರಿ : ಡಾ.ಕೋಡಿರಂಗಪ್ಪ

ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸು ಎಂಬ ಮಾತಿನಂತೆ ಸದೃಢ, ಸ್ವಾಸ್ಥ್ಯ ಶರೀರದಲ್ಲಿ ಮಾತ್ರ ಮನಸ್ಸು, ಚಿಂತನೆ ಹಾಗೂ ಜ್ಞಾನೇಂದ್ರೀಯಗಳು ಕ್ರಿಯಾತ್ಮಕವಾಗಿ ವಿಕಸನವಾಗಲು ಸಾಧ್ಯ ಎಂಬ ನಂಬಿಕೆ ಇದೆ. ಬಾಲ್ಯದಿಂದ ಹದಿಹರೆಯದವರೆಗೆ ವಿವಿಧ ರೀತಿಯ ಶೈಕ್ಷಣಿಕ ಹಿನ್ನೆಲೆಯುಳ್ಳ ಮಕ್ಕಳು ಕ್ರೀಡೆ ಹಾಗೂ ಪಂದ್ಯಾವಳಿಗಳಲ್ಲಿ ಭಾಗಿಗಳಾಗುವುದರಿಂದ ಶಾರೀರಿಕ ವಿಕಸನ, ತನ್ಮೂಲಕ ಮಾನವ ಅಂತರ ಸಂಬಂಧಗಳು ಮೂಡುತ್ತವೆ.

ಸಮತೂಕ ವ್ಯಕ್ತಿತ್ವಕ್ಕೆ ಶಾರೀರಿಕ ಕ್ರೀಡೆಗಳು ಸಹಕಾರಿ : ಡಾ.ಕೋಡಿರಂಗಪ್ಪ

Profile Ashok Nayak Jul 20, 2025 12:01 AM

ಚಿಕ್ಕಬಳ್ಳಾಪುರ : ದೈಹಿಕ ಶಿಕ್ಷಣ ಚಟುವಟಿಕೆಗಳು ಶಾರೀರಿಕ ಅಂಗಾಗಗಳನ್ನು ಬಲಗೊಳಿಸುವ ಜೊತೆಗೆ ಮಾನಸಿಕ ಹಾಗೂ ಭಾವನ್ಮಾಕ ವಿಕಾಸಕ್ಕೆ ಪೂರಕವಾಗಿದ್ದು, ಅವು ಸಮತೂಕ ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗುತ್ತವೆಂದು ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ|| ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಶಾಲಾ ಶಿಕ್ಷಣ ಪರೀಕ್ಷಾ ಮಂಡಳಿಯು ಆಯೋಜಿಸಿದ್ದ ಬೆಂಗಳೂರು ದಕ್ಷಿಣ ವಲಯದ ೧೪ರ ಒಳಗಿನ ಮತ್ತು  ೧೭ರ ಒಳಗಿನ ವಯೋಮಾನದವರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ  ಮಾತನಾಡುತ್ತಾ  ಶಾರೀರಿಕ ಸದೃಢತೆ, ಜ್ಞಾನೇಂದ್ರಿಯಗಳ ಪಟುತ್ವ ಮತ್ತು ಸಮನ್ವಯತೆಯನ್ನು ಸಾಧಿಸದೆ ಪರಿಪೂರ್ಣ ಶಿಕ್ಷಣ ಅಸಾಧ್ಯ. ಆದ್ಧರಿಂದ, ಬೌದ್ಧಿಕ ಚಟುವಟಿಕೆಗಳ ಜೊತೆ ದೈಹಿಕ ಚಟುವಟಿಕೆಗಳು ಮಹತ್ವ ವೆನಿಸುತ್ತವೆ.

ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸು ಎಂಬ ಮಾತಿನಂತೆ ಸದೃಢ, ಸ್ವಾಸ್ಥ್ಯ ಶರೀರದಲ್ಲಿ ಮಾತ್ರ ಮನಸ್ಸು, ಚಿಂತನೆ ಹಾಗೂ ಜ್ಞಾನೇಂದ್ರೀಯಗಳು ಕ್ರಿಯಾತ್ಮಕವಾಗಿ ವಿಕಸನವಾಗಲು ಸಾಧ್ಯ ಎಂಬ ನಂಬಿಕೆ ಇದೆ. ಬಾಲ್ಯದಿಂದ ಹದಿಹರೆಯದವರೆಗೆ ವಿವಿಧ ರೀತಿಯ ಶೈಕ್ಷಣಿಕ ಹಿನ್ನೆಲೆಯುಳ್ಳ ಮಕ್ಕಳು ಕ್ರೀಡೆ ಹಾಗೂ ಪಂದ್ಯಾವಳಿಗಳಲ್ಲಿ ಭಾಗಿಗಳಾಗುವುದರಿಂದ ಶಾರೀರಿಕ ವಿಕಸನ, ತನ್ಮೂಲಕ ಮಾನವ ಅಂತರ ಸಂಬಂಧಗಳು ಮೂಡುತ್ತವೆ. ಕಬಡ್ಡಿ, ಫುಟ್‌ಬಾಲ್‌ನಂತಹ ಅಥ್ಲೆಟ್ಸ್ ಶಾರೀರಿಕ ಸದೃಢತೆಗೆ ನೆರವಾಗುತ್ತವೆ. ಜೊತೆಗೆ, ಕ್ರೀಡೆಗಳು ಭಾವೈಕ್ಯತೆ ಮೂಡಿಸುವ ಯೋಗ್ಯ ಸಾಧನ ಗಳಾಗಿದ್ದು ಶಾಲಾ ಹಂತದಿಂದಲೇ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ಕ್ರೀಡಾಕ್ಷೇತ್ರದ ಸಾಧನೆಯು ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗಗಳಿಸಲು ದಾರಿ ತೋರುತ್ತವೆ. ಆದ್ದರಿಂದ ಪ್ರತಿ ಶಾಲೆಯ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾ ಅವಕಾಶಗಳನ್ನು ಕಲ್ಪಿಸಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕ್ರೀಡಾಸಂಹಿತೆ ಪ್ರಸ್ತುತಪಡಿಸಿ ಮಾತನಾಡಿದ ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಂಶುಪಾಲ ಡಾ|| ನವೀನ್ ಸೈಮನ್ ಕಬಡ್ಡಿ ಪಂದ್ಯಾವಳಿಗೆ ತಂಡಗಳಿಗೆ ಪಂದ್ಯದ ನಿಯಮಾವಳಿಗಳನ್ನು ತಿಳಿಸಿ, ಶಾಲೆಗಳಿಗೆ ಅಭಿನಂದನೆಗಳನ್ನು ಹೇಳಿದರು. ಸ್ಥಳೀಯ ಆರಕ್ಷಕ ಹೆಡ್ ಕಾನ್‌ ಸ್ಟೇಬಲ್ ಶ್ರೀನಿವಾಸ್‌ರವರು ಸ್ಪರ್ಧಾಳುಗಳಿಗೆ ಸುರಕ್ಷತೆಯ ನಿಯಮಗಳನ್ನು ತಿಳಿಸಿದರು. ಪಂದ್ಯಾವಳಿಯನ್ನು ನಡೆಸಿಕೊಟ್ಟ ವಿವಿಧ ಶಾಲೆಗಳ ದೈಹಿಕ ಶಿಕ್ಷಕರಾದ ಶಶಿಧರ್, ವೆಂಕಟೇಶ್, ಮುರಳಿ, ಮಂಜುನಾಥ್, ಮನೋಹರ್ ಹಾಗೂ ಶಾಂತಾ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ರಾದ ರಾಜೇಶ್ ಮತ್ತು ಸಂದೇಶ್‌ರವರ ಶ್ರಮವನ್ನು ಸ್ಮರಿಸಿದರು.

೧೪ರ ಒಳಗಿನ ಬಾಲಕಿಯರ ಕಬಡ್ಡಿ ಪಂದ್ಯಾವಳಿಗಳಲ್ಲಿ ಶಾಂತಾ ವಿದ್ಯಾನಿಕೇತನ ಪ್ರಥಮ ಮತ್ತು ಬಿ.ಜಿ.ಎಸ್. ವರ್ಲ್ಡ್ ಶಾಲೆಯು ದ್ವಿತೀಯ ಸ್ಥಾನ, ೧೪ರ ಒಳಗಿನ ಬಾಲಕರಲ್ಲಿ ಕ್ರಮವಾಗಿ ಬಿ.ಜಿ.ಎಸ್, ಶಾಂತಾ, ಮತ್ತು ಆಷ್ಲೆ ಇಂಟರ್‌ನ್ಯಾಷನಲ್ ಶಾಲೆಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ. ೧೭ರ ಒಳಗಿನ ತಂಡಗಳಲ್ಲಿ ಬಾಲಕರ ತಂಡಗಳಲ್ಲಿ ಕ್ರಮವಾಗಿ ಕೆ.ವಿ. ಆಂಗ್ಲ ಶಾಲೆ, ಬಿ.ಜಿ.ಎಸ್. ಶಾಲೆ ಮತ್ತು ಶಾಂತಾ ವಿದ್ಯಾನಿಕೇತನ ತಂಡಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನೂ, ೧೭ರ ಒಳಗಿನ ಬಾಲಕಿಯರ ತಂಡಗಳಲ್ಲಿ ಕೆ.ವಿ. ಆಂಗ್ಲ ಶಾಲೆ, ಶಾಂತಾ ವಿದ್ಯಾ ನಿಕೇತನ ಮತ್ತು ಬಿ.ಜಿ.ಎಸ್. ಶಾಲೆ ಜಯಗೊಳಿಸಿದ್ದು, ಪ್ರಾದೇಶಿಕ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತದೆ. ಜಯಗಳಿಸಿದ ತಂಡಗಳನ್ನು ಶಾಂತಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಅಭಿನಂದನೆಗಳನ್ನು ತಿಳಿಸಿದೆ.

ಕಾರ್ಯಕ್ರಮದಲ್ಲಿ ವಲಯ ಕಬ್ಬಡ್ಡಿ ಪಂದ್ಯಾವಳಿಯ ಸಂಘಟಕರಾದ ಶಾಂತಾ ವಿದ್ಯಾನಿಕೇತನ ಪ್ರಾಂಶುಪಾಲ ಡಾ|| ಪ್ರಸಾದ್, ಶ್ರೀನಿವಾಸ್, ವೆಂಕಟೇಶ್, ಶಶಿಧರ್, ಸಿರೀಷ, ಕಛೇರಿ ವ್ಯವಸ್ಥಾಪಕ ಶರವಣ, ರಾಧಾ, ಸನಾ, ರೇಷ್ಮ ಹಾಗೂ ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.