ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadguru Jaggi Vasudev: ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದೇ ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶವಾಗಿದೆ : ಸದ್ಗುರು ಜಗ್ಗಿ ವಾಸುದೇವ್ ಅಭಿಮತ

“ನಾವು ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾ ಮನೋಭಾವ ವುಳ್ಳವರನ್ನಾಗಿಸಲು, ಮತ್ತು ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು  ಬಯಸುತ್ತೇವೆ”, ಎಂದು ಸದ್ಗುರು ಜಗ್ಗಿವಾಸುದೇವ್  ಭಾನುವಾರ ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ರೀಡೋ ತ್ಸವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದೆ

ಕ್ರೀಡೆಗಳ ಹಳ್ಳಿಗಳಿಗೆ ಮರಳುವಿಕೆ: ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶ

ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದು, ಆಮೂಲಕ ಹಳ್ಳಿಗರನ್ನು ಸಂತೋಷಿಗಳನ್ನಾಗಿ ಮಾಡಿ ಗ್ರಾಮೀಣ ಜೀವನವನ್ನು ಸುಗಮಗೊಳಿಸುವುದು ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶವಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು. -

Ashok Nayak Ashok Nayak Sep 7, 2025 10:53 PM

ಚಿಕ್ಕಬಳ್ಳಾಪುರ : ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದು, ಆಮೂಲಕ ಹಳ್ಳಿಗರನ್ನು ಸಂತೋಷಿ ಗಳನ್ನಾಗಿ ಮಾಡಿ ಗ್ರಾಮೀಣ ಜೀವನವನ್ನು ಸುಗಮಗೊಳಿಸುವುದು ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶವಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ತಾಲೂಕಿನ ಆವಲಗುರ್ಕಿ ಬಳಿಯ ಈಶ ಧ್ಯಾನ ಕೇಂದ್ರದ ಆವರಣದಲ್ಲಿ ಕರ್ನಾಟಕದ ಪ್ರಾದೇಶಿಕ ಪಂದ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

“ನಾವು ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾ ಮನೋಭಾವ ವುಳ್ಳವರನ್ನಾಗಿಸಲು, ಮತ್ತು ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು  ಬಯಸುತ್ತೇವೆ”, ಎಂದು ಸದ್ಗುರು ಜಗ್ಗಿವಾಸುದೇವ್  ಭಾನುವಾರ ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ರೀಡೋತ್ಸವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಮಾದಕ ವ್ಯಸನದಿಂದ ಹೊರ ಬರುವಂತೆ ಸಾರ್ವಜನಿಕರಲ್ಲಿ ಮನವಿ: ಇ.ಒ ಎಂ. ನಾಗಮಣಿ

ಈಶ ಗ್ರಾಮೋತ್ಸವವು ಗ್ರಾಮೀಣ ಭಾರತದಲ್ಲಿ ಮಾನವ ಚೈತನ್ಯವನ್ನು ಹೆಚ್ಚಿಸುವ ಕುರಿತಾಗಿದೆ. ಅಲ್ಲಿನ ಪರಿಸ್ಥಿತಿಗಳು ಹೇಗಿವೆಯೆಂದರೆ ಸಂಪ್ರದಾಯಿಕ ಮನರಂಜನೆ ಮತ್ತು ಸಕ್ರಿಯ ಭಾಗ ವಹಿಸುವಿಕೆಯ ಅಂಶಗಳು ಕಣ್ಮರೆಯಾಗಿವೆ. ಅಲ್ಲಿದ್ದ ಜಾನಪದ ಸಂಗೀತ ಮತ್ತು ಇತರ ವೈವಿಧ್ಯತೆ ಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ನಾವು ಕ್ರೀಡೆಯನ್ನು ಮತ್ತೆ ತರಲು ಮತ್ತು (ಗ್ರಾಮಸ್ಥ ರನ್ನು) ಕ್ರೀಡಾಮನೋಭಾವವುಳ್ಳವರನ್ನಾಗಿ ಮಾಡಲು ಬಯಸುತ್ತೇವೆ, ಇದರಿಂದಾಗಿ ಅವರ ಜೀವನದ ಭಾರವು ಹಗುರವಾಗಿ ಹೊರುವಂತಾಗುತ್ತದೆ.”, ಎಂದು ಸದ್ಗುರುಗಳು ಇಂದು ಸದ್ಗುರು ಸನ್ನಿಧಿ, ಬೆಂಗಳೂರಿನಲ್ಲಿ ನಡೆದ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ ಕರ್ನಾಟಕ ವಿಭಾಗೀಯ ಫೈನಲ್ನಲ್ಲಿ ಹೇಳಿದರು.

ಇದೀಗ ೧೭ನೆಯ ಆವೃತ್ತಿಯಲ್ಲಿ, ಈಶ ಗ್ರಾಮೋತ್ಸವವು ಗ್ರಾಮೀಣ ಚೈತನ್ಯದ ಆಚರಣೆಯಾಗಿದ್ದು, ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಹೊರಬಂದು ಕ್ರೀಡೆಗಳ ಆಚರಣಾತ್ಮಕ ಮತ್ತು ಕ್ರೀಡಾಮನೋಭಾವದ ಶಕ್ತಿಯನ್ನು ಅನುಭವಿಸಲು ಅವಕಾಶ ನೀಡುತ್ತದೆ. ಆಟಗಾರರು ಕ್ಲಸ್ಟರ್, ವಿಭಾಗೀಯ ಹಂತಗಳಲ್ಲಿ ಸ್ಪರ್ಧಿಸಿದ ನಂತರ ಸೆ.೨೧, ೨೦೨೫ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿಯಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಪುರುಷರ ವಾಲಿಬಾಲ್ ಆಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ಗ್ರಾಮದ ಇಬ್ಬನಿ ತಂಡವು ಚಿಕ್ಕಬಳ್ಳಾಪುರ ಗ್ರಾಮೀಣ ಭಾಗದ ಮರಸನಹಳ್ಳಿ ಪಂಚಾಯಿತಿಯ ಅಪ್ಪು ಬಾಯ್ಸ್ ತಂಡವನ್ನು ಸೋಲಿಸಿ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಹಿಳೆಯರ ಥ್ರೋಬಾಲ್‌ನಲ್ಲಿ, ಕೊಡಗಿನ ಮರಗೋಡು ಗ್ರಾಮದ ಬ್ಲ್ಯಾಕ್ ಪ್ಯಾಂಥರ್ಸ್ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬಡಗನೂರು ಗ್ರಾಮದ ಶಾಸ್ತರ ಪಡುಮಲೆ(ಕುಡ್ಲ ಸ್ಟೆçöÊ್ರಕರ್ಸ್) ತಂಡವನ್ನು ಜಯಿಸಿ ವಿಭಾಗೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಜೇತರಿಗೆ ತಲಾ ?೧೨,೦೦೦ ನಗದು ಬಹುಮಾನ ನೀಡಲಾಯಿತು, ಹಾಗೂ ರನ್ನರಪ್ಗಳಿಗೆ ಅವರ ಸಾಧನೆಯ ಗುರುತಿಸುವಿಕೆ ಯಾಗಿ ತಲಾ ೮,೦೦೦ ನೀಡಲಾಯಿತು.

ಭಾನುವಾರ ನಡೆದ ಪ್ರಾದೇಶಿಕ ಫೈನಲ್‌ನಲ್ಲಿ, ೧೮ ಪುರುಷರ ವಾಲಿಬಾಲ್ ತಂಡಗಳು ಮತ್ತು ೧೪ ಮಹಿಳೆಯರ ಥ್ರೋಬಾಲ್ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದವು. ಈ ವರ್ಷ ಕರ್ನಾಟಕದ ೧೮ ಜಿಲ್ಲೆಗಳಿಂದ ೭೨೦೦ ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧಿಸಿ ವಿಭಾಗೀಯ ಮಟ್ಟವನ್ನು ಪ್ರವೇಶಿಸುವ ಮೂಲಕ ದಾಖಲೆಯ ಭಾಗವಹಿಸುವಿಕೆಗೆ ಸಾಕ್ಷಿಯಾದವು.

ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಅವರ ಉಪಸ್ಥಿತಿಯು ಪ್ರಾದೇಶಿಕ ಫೈನಲ್ ದಿನದ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ಪಂದ್ಯಗಳು ಚೈತನ್ಯಭರಿತವಾಗಿ ಪ್ರೇಕ್ಷಕರನ್ನು ಆಕರ್ಷಿಸಿದವು. ಕ್ರೀಡೆ, ಸಂಸ್ಕೃತಿ ಮತ್ತು ಸಮುದಾ ಯ ಚೇತನದ ರೋಮಾಂಚಕ ಆಚರಣೆಯಲ್ಲಿ ಗ್ರಾಮಗಳು ಮುಖಾಮುಖಿಯಾಗುತ್ತಿದ್ದಂತೆ ಪ್ರೇಕ್ಷಕರು ಹರ್ಷೋತ್ಸಾಹದಿಂದ ಹುರಿದುಂಬಿಸಿದರು. ಇಬ್ಬರು ಮುಖ್ಯ ಅತಿಥಿಗಳು ವಾಲಿಬಾಲ್ ಮತ್ತು ಥ್ರೋಬಾಲ್ ಅಂಗಳದಲ್ಲಿ ಆಟಗಾರರೊಂದಿಗೆ ಕಣಕ್ಕಿಳಿಯುವ ಮೂಲಕ ಕ್ರೀಡೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ನಂತರ ವಿಜೇತರನ್ನು ಅಭಿನಂದಿಸಿ ಫೈನಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು.

೨೦೦೪ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವವು ವೃತ್ತಿಪರ ಆಟಗಾರರಿಗಾಗಿ ಅಲ್ಲದೇ, ರೈತರು, ಮೀನುಗಾರರು, ದಿನಗೂಲಿ ಕೆಲಸಗಾರರು, ಗೃಹಿಣಿಯರು ಮತ್ತು ಶಾಲಾ ಮಕ್ಕಳು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಮೈದಾನಕ್ಕಿಳಿಯುವಂತೆ ಪ್ರೋತ್ಸಾಹಿಸಿದೆ. ತಂಡಗಳನ್ನು ಅದೇ ಗ್ರಾಮ ಪಂಚಾಯಿತಿಯ ಆಟಗಾರರೊಂದಿಗೆ ಮಾತ್ರ ರಚಿಸಬಹುದು, ಇದು ಸಮುದಾಯ ಗಳನ್ನು ಒಂದುಗೂಡಿಸುತ್ತದೆ ಮತ್ತು ಸ್ಥಳೀಯರ ಹೆಮ್ಮೆಯ ಸಂಭ್ರಮಾಚರಣೆಗೆ ಕಾರಣ ವಾಗಿರುವುದನ್ನು ಕಾಣಬಹುದು.

ರಾಷ್ಟ್ರೀಯ ಮಟ್ಟದಲ್ಲಿ, ೨೦೨೫ ರ ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರ ಪ್ರದೇಶ,ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಒಡಿಶಾದಾದ್ಯಂತ ೩೫,೦೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ವ್ಯಾಪಿಸಿದೆ. ಈ ವರ್ಷ ೫೦,೦೦೦ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ೫೦,೦೦೦ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು ೬,೦೦೦ಕ್ಕೂ ಹೆಚ್ಚು ತಂಡಗಳನ್ನು ಪ್ರತಿನಿಧಿಸು ತ್ತಿದ್ದಾರೆ.

ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತಿರುವ ಈಶ ಔಟ್ರೀಚ್‌ನ್ನು ಭಾರತ ಸರ್ಕಾರದ ಯುವಕ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ‘ನ್ಯಾಷನಲ್ ಸ್ಪೋರ್ಟ್ಸ್ ಪ್ರಮೋಷನ್ ಆರ್ಗ ನೈಸೇಷನ್’ ಎಂದು ಗುರುತಿಸಿದೆ. ೨೦೧೮ರಲ್ಲಿ, ಈ ಉಪಕ್ರಮವು ಬೇರುಮಟ್ಟದಲ್ಲಿ ಕ್ರೀಡೆಗೆ ಅದರ ಅಸಾಧಾರಣ ಕೊಡುಗೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರವನ್ನು ಪಡೆದಿರುವುದುದನ್ನು ಇಲ್ಲಿ ಸ್ಮರಿಸಬಹುದು.