ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದ ಬಳಿ ನಡೆದಿರುವ ಘಟನೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದ 17 ವರ್ಷದ ರಾಧಮ್ಮ ಹಾಗೂ 14 ವರ್ಷದ ಸಾಹಿತಿ ಎಂಬ ಮೃತ ಬಾಲಕಿಯರೇ ಮೃತ ದುರ್ದೈವಿ ಗಳಾಗಿದ್ದಾರೆ. ಬಿರು ಬೇಸಿಗೆ ತಾಳಲಾರದೆ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ಮೇಲೆ ಬರಲಾಗದೆ ದಾರುಣ ಸಾವು ಕಂಡಿದ್ದಾರೆ. ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Chikkaballapur News: ದಲಿತಪರ ಸಂಘಟನೆಗಳಿಂದ ಡಾ.ಬಾಬು ಜಗಜೀವನ್ರಾಮ್ ಜಯಂತಿ ಆಚರಣೆ
ಕೃಷಿ ಹೊಂಡದ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚೇಳೂರು ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.