ಯಕ್ಷಗಾನದಿಂದ ಸನಾತನ ಸಂಸ್ಕೃತಿ ಪ್ರಸಾರ: ರಾಮಚಂದ್ರ
ಯಕ್ಷಗಾನ ಕಲೆಯ ಮೂಲಕ ನಮ್ಮ ಸನಾತನ ಸಂಸ್ಕೃತಿ ಪ್ರಸರಣಗೊಳ್ಳುತ್ತದೆ ಹಾಗೂ ರಾಮಾಯಣ, ಮಹಾಭಾರತದ ಕಥಾನಕಗಳ ಮೌಲ್ಯಗಳು ನಮ್ಮ ಜನಜೀವನವನ್ನು ತಲುಪುತ್ತವೆ ಎಂದು ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಎಂ.ಎ. ಅಭಿಪ್ರಾಯಪಟ್ಟರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಯಕ್ಷಗಾನ ಕಲೆಯ ಮೂಲಕ ನಮ್ಮ ಸನಾತನ ಸಂಸ್ಕೃತಿ ಪ್ರಸರಣಗೊಳ್ಳುತ್ತದೆ ಹಾಗೂ ರಾಮಾಯಣ, ಮಹಾಭಾರತದ ಕಥಾನಕಗಳ ಮೌಲ್ಯಗಳು ನಮ್ಮ ಜನಜೀವನವನ್ನು ತಲುಪುತ್ತವೆ ಎಂದು ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಎಂ.ಎ. ಅಭಿಪ್ರಾಯಪಟ್ಟರು. ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ಮಕ್ಕಳ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಲೆಯನ್ನು ಪೋಷಿಸಿ ಉಳಿಸುವುದರಿಂದ ಸಂಸ್ಕೃತಿ ಉಳಿಯುತ್ತದೆ ಹಾಗೂ ನಮ್ಮ ಸಂಸ್ಕಾರವೂ ಹೆಚ್ಚುತ್ತದೆ ಎಂದು ರಾಮಚಂದ್ರ ಎಂ.ಎ. ಹೇಳಿದರು.
ಯಕ್ಷಗಾನದಲ್ಲಿ ಮೇರು ಪ್ರತಿಭೆಗಳು ಮೆರೆದುಹೋಗಿದ್ದಾರೆ, ಮೆರೆಯುತ್ತಿದ್ದಾರೆ. ಅವರೆಲ್ಲರೂ ಈ ಬಾಲಕಲಾವಿದರ ಮೂಲಕ ಮತ್ತೆ ಕಾಣಿಸಿಕೊಂಡಂತೆ ತೋರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಗಿರಿನಗರ ರಾಮಾಶ್ರಮದ ರಾಮಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ, ಕಾರ್ಯದರ್ಶಿ ವಾದಿರಾಜ ಸಾಮಗ, ಸಿರಿಗನ್ನಡ ವೇದಿಕೆಯ ಉಮೇಶ್ ಅವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಬಾಲಕಲಾವಿದರಿಂದ ʼವೀರ ವೃಷಸೇನ" ಮತ್ತು ಸಮುದ್ರಮಥನ ಎಂಬ ಯಕ್ಷಗಾನ ಪ್ರಸಂಗಗಳನ್ನು ಬಾಲಕಲಾವಿದರು ನಡೆಸಿಕೊಟ್ಟರು. ಈ ಪ್ರಸಂಗಗಳನ್ನು ಕರ್ನಾಟಕ ಕಲಾದರ್ಶಿನಿಯ ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ನಿರ್ದೇಶಿಸಿದ್ದರು.
ಈ ಸುದ್ದಿಯನ್ನೂ ಓದಿ | CPCB Recruitment 2025: ಸೆಂಟ್ರಲ್ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್ನಲ್ಲಿದೆ 69 ಹುದ್ದೆ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಬಹುದು
ಮುಮ್ಮೇಳದಲ್ಲಿ ಬಾಲಕಲಾವಿದರಾದ ಶ್ರೇಯಸ್ ಸರಳಾಯ, ಆಭಿಶ್ರೀ ಶ್ರೀಹರ್ಷ, ಧೃತಿ ಅಮ್ಮೆಂಬಳ, ಸೃಷ್ಟಿ ಚೇತನ್ ಜಯಂತ್, ಕೃಷ್ಣ ಭಟ್, ಸಾಯಿ ಸದ್ಗುಣ್ ಶೆಟ್ಟಿ, ಸಾಯಿ ಪ್ರಣಾಮ್ ಶೆಟ್ಟಿ, ಶ್ರೇಷ್ಠ ಚೇತನ್ ಜಯಂತ್, ಕೃತಿ ಅಮ್ಮೆಂಬಳ, ಆಯುಷ್ ಎಸ್, ಇಶಾನಿ ಎಸ್, ಶ್ರೀವತ್ಸ ಸರಳಾಯ, ಅಗಸ್ತ್ಯ ಎಸ್. ರಾವ್, ಬಿ.ಎಸ್. ಶ್ರವಣ್ ಕಾರಂತ್, ಸಚಿತ್ ಭಟ್ ಪಾತ್ರಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಚಂದ್ರ ಆಚಾರ್ಯ, ಮೃದಂಗದಲ್ಲಿ ನರಸೀಹ ಆಚಾರ್ ಮತ್ತು ಗೌತಮ್ ಸಾಸ್ತಾನ್, ಚಂಡೆ ವಾದಕರಾಗಿ ಸುಬ್ರಹ್ಮಣ್ಯ ಎಂ. ಭಾಗವಹಿಸಿದ್ದರು. ಡಾ. ಸುಪ್ರೀತಾ ಗೌತಮ್, ಭಾರ್ಗವಿ ಶ್ರೀ ಹರ್ಷ ಕಾರ್ಯಕ್ರಮದ ನಿರೂಪಿಸಿದರು. ಗೌತಮ ಸಾಸ್ತಾನ ನಿರ್ವಹಿಸಿದರು.