ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Body Found: ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕನ ಶವ ಪತ್ತೆ, ಜತೆಗಿದ್ದ ಯುವತಿ ನಾಪತ್ತೆ

Bengaluru: ಯುವಕ ತಕ್ಷಿತ್ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ತಕ್ಷಿತ್ ಹಾಗೂ ಯುವತಿ ಪಣಂಬೂರಿನ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಅಂತ ಹೇಳಿ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ಗುರುವಾರ ಯುವತಿ ರೂಂ ಚೆಕೌಟ್‌ ಮಾಡಿದ್ದರೆ, ಶನಿವಾರ ಯುವಕನ ಶವ ಪತ್ತೆಯಾಗಿದೆ.

ಬೆಂಗಳೂರು: ಬೆಂಗಳೂರಿನ (Bengaluru) ಮಡಿವಾಳದ ಲಾಡ್ಜ್ ಒಂದರಲ್ಲಿ ದಕ್ಷಿಣ ಕನ್ನಡದ (Dakshina Kannada) ಪುತ್ತೂರಿನ​​ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಲಾಡ್ಜ್‌ ಕೋಣೆಯಲ್ಲಿ ಆತನ ಶವ ದೊರೆತಿದೆ. ಪುತ್ತೂರು ಮೂಲದ 20 ವರ್ಷ ತಕ್ಷಿತ್ (20) ಮೃತ ಯುವಕನಾಗಿದ್ದು, ಈತ ಒಬ್ಬಳು ಯುವತಿ ಜೊತೆ ಲಾಡ್ಜ್​​ನಲ್ಲಿದ್ದ. ಅಕ್ಟೋಬರ್​ 17ರ ರಾತ್ರಿ ತಕ್ಷಿತ್ ಶವವಾಗಿ (Body Found) ಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಯುವತಿ ನಾಪತ್ತೆಯಾಗಿದ್ದಾಳೆ.

8 ದಿನಗಳ ಹಿಂದೆಯೇ ಈತ ಬೆಂಗಳೂರಿಗೆ ಬಂದಿದ್ದು, ಯುವತಿ ಜೊತೆ ಇದೇ ರೂಮ್​ನಲ್ಲಿದ್ದ. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಎಂದು ತಕ್ಷಿತ್​ ಬೆಂಗಳೂರಿಗೆ ಬಂದಿದ್ದ ಎನ್ನಲಾಗ್ತಿದೆ. ಅಕ್ಟೋಬರ್ 9ರಂದು ಲಾಡ್ಜ್‌ನಲ್ಲಿ ತಕ್ಷಿತ್​ ರೂಮ್​ ಮಾಡಿದ್ದಾನೆ. ವಿರಾಜಪೇಟೆಯ ಯುವತಿ ಜೊತೆ ಬಂದಿದ್ದು, ಇಬ್ಬರೂ 8 ದಿನಗಳ ಕಾಲ ಲಾಡ್ಜ್​ನಲ್ಲೇ ಇದ್ದರು.

ಯುವಕ ತಕ್ಷಿತ್ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ತಕ್ಷಿತ್ ಹಾಗೂ ಯುವತಿ ಪಣಂಬೂರಿನ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಅಂತ ಹೇಳಿ ಬೆಂಗಳೂರಿಗೆ ಬಂದಿದ್ದಾರೆ. ಪುಡ್ ಡೆಲಿವರಿ ಬಾಯ್‌ನಿಂದ ಊಟ ತರಿಸಿಕೊಂಡಿದ್ದ ಜೋಡಿಗೆ ಊಟ ತಿಂದ ಬಳಿಕ ಫುಡ್ ಪಾಯ್ಸನ್​ ಆಗಿತ್ತಂತೆ. ಬಳಿಕ ಇಬ್ಬರೂ ಪಕ್ಕದ ಮೆಡಿಕಲ್ ಶಾಪ್​ಗೆ ಹೋಗಿ ಮಾತ್ರೆ ತಂದಿದ್ದಾರೆ. ಸ್ಪಲ್ಪ ಚೇತರಿಕೆ ಕಂಡ ಬಳಿಕ, ಗುರುವಾರ ಮಧ್ಯಾಹ್ನ ಯುವತಿ ಚೆಕ್ ಔಟ್ ಆಗಿದ್ದಾಳೆ.

ಇದನ್ನೂ ಓದಿ: Chikkaballapur News ಆರೋಪಿಯ ಶವಯಾತ್ರೆ ನಡೆಸಿದ ಆರ್‌ಪಿಐ ಮತ್ತು ಸಮತ ಸೈನಿಕ ದಳ ಕಾರ್ಯಕರ್ತರು

ನಿನ್ನೆ ತಡರಾತ್ರಿ ಸಿಬ್ಬಂದಿ ರೂಮಿನ ಬಾಗಿಲು ತಟ್ಟಿದ್ದಾನೆ. ಆದರೆ ತಕ್ಷಿತ್​ನ ರೂಮಿಂದ ಯಾವುದೇ ರೆಸ್ಫಾನ್ಸ್ ಬಂದಿಲ್ಲ. ಮಾಸ್ಟರ್ ಕೀ ಬಳಸಿ ರೂಂ ಬಾಗಿಲು ತೆರೆದಾಗ ಬೆಡ್ ಮೇಲೆ ತಕ್ಷಿತ್ ಮೃತದೇಹ ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿ ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಲಾಡ್ಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುಡಿಆರ್ ಪ್ರಕರಣ ದಾಖಲಾಗಿದ್ದು, ಲಾಡ್ಜ್ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹರೀಶ್‌ ಕೇರ

View all posts by this author