ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌

Girish Mattennavar: ನನಗೆ ಮಗಳು ಇಲ್ಲ. ಆದರೆ ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ. ಆಸ್ತಿ ವಿಷಯದಲ್ಲಿ ನನಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದಾಗ ಗಿರೀಶ್‌ ಮಟ್ಟೆಣ್ಣವರ್‌ ನನ್ನನ್ನು ಭೇಟಿಯಾಗಿ ಮಗಳು ಕಾಣೆಯಾಗಿದ್ದಾಳೆ ಎಂದು ಕಥೆ ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದರು. ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲೂ ನಾನು ಕೆಲವು ದಿನ ಇದ್ದೆ ಎಂದು ಸುಜಾತ ಭಟ್ ತಿಳಿಸಿದ್ದಾರೆ.

ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌

ಹರೀಶ್‌ ಕೇರ ಹರೀಶ್‌ ಕೇರ Aug 22, 2025 10:24 PM

ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತ ಭಟ್‌ ಎಂಬ ಮಹಿಳೆ ನುಡಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾಡಿನಾದ್ಯಂತ ಸುದ್ದಿಯಲ್ಲಿರುವ ಸುಜಾತ ಭಟ್ ಅವರು ಯುಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದರ ವಿವರಗಳನ್ನು ಹೇಳಿದ್ದಾರೆ.

ಇನ್‌ಸೈಟ್‌ರಷ್‌ (insightrush) ಎಂಬ ಚಾನೆಲ್‌ ಜೊತೆಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ಸುಜಾತ ಭಟ್‌, ನನಗೆ ಮಗಳು ಇಲ್ಲ. ಆದರೆ ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ. ಆಸ್ತಿ ವಿಷಯದಲ್ಲಿ ನನಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದಾಗ ಗಿರೀಶ್‌ ಮಟ್ಟೆಣ್ಣವರ್‌ ನನ್ನನ್ನು ಭೇಟಿಯಾಗಿ ಮಗಳು ಕಾಣೆಯಾಗಿದ್ದಾಳೆ ಎಂದು ಕಥೆ ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದರು. ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲೂ ನಾನು ಕೆಲವು ದಿನ ಇದ್ದೆ ಎಂದು ತಿಳಿಸಿದ್ದಾರೆ.

ನನ್ನ ಕುಟುಂಬದ ದೇವರನ್ನು ಬೇರೊಂದು ಸಮುದಾಯಕ್ಕೆ ನೀಡಿದ್ದು ನನಗೆ ನೋವು ತಂದಿತ್ತು. ಆಸ್ತಿಯಲ್ಲಿ ನನ್ನ ಹಕ್ಕನ್ನು ಪಡೆಯಲು ಈ ದಾರಿ ಹಿಡಿಯಬೇಕಾಯಿತು. ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಮತ್ತು ನನ್ನ ತೇಜೋವಧೆಗೆ ಕಾರಣವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ, ಗಿರೀಶ್‌ ಮಟ್ಟೆಣ್ಣವರ್‌ ಹಾಗೂ ಜಯಂತ್‌ ಟಿ. ಎಂಬವರು ಸೇರಿಕೊಂಡು ಇದನ್ನು ಮಾಡಿಸಿದರು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ನಾನು ಆಸ್ತಿ ಸಲುವಾಗಿ ಆ ರೀತಿಯ ಸುಳ್ಳು ಹೇಳಬೇಕಾದ ಸನ್ನಿವೇಶ ಬಂತು. ನನ್ನ ತಾತನ ಆಸ್ತಿಯನ್ನು ನನ್ನ ಗಮನಕ್ಕೆ ತಾರದೇ ನೀಡಲಾಗಿದೆ. ನನಗೂ ಕೂಡ ಆಸ್ತಿಯಲ್ಲಿ ಹಕ್ಕು ಇದೆ. ಇದಲ್ಲದೇ ನನ್ನ ಸಹಿ ಕೂಡ ಪಡೆಯದೆ, ಆಸ್ತಿಯನ್ನು ನೀಡುವಾಗ ನನ್ನ ಗಮನಕ್ಕೂ ತರಲಿಲ್ಲ. ಅ ಸಿಟ್ಟಿನಿಂದ ಅವರು ಹೇಳಿದ ಹಾಗೆ ನಾನು ಮಾಡಿದೆ. ನಾನು ನಾಡಿನ ಜನತೆಯ ಮುಂದೆ ಕೈಜೋಡಿಸಿ ಪ್ರಾರ್ಥಿಸುತ್ತೇನೆ, ನನ್ನನ್ನು ಕ್ಷಮಿಸಿ. ನಾನು ಧರ್ಮಸ್ಥಳ ಕ್ಷೇತ್ರದ ವಿರುದ್ಧವಾಗಲೀ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯಾಗಲೀ ಮಾತನಾಡಿಲ್ಲ. ಧರ್ಮಸ್ಥಳದ ಭಕ್ತರ ಭಾವನೆಗೆ ನೋವುಂಟುಮಾಡುವ ಉದ್ದೇಶ ನನಗೆ ಇಲ್ಲ ಎಂದು ಅವರು ಕೇಳಿಕೊಂಡಿದ್ದಾರೆ.



ಈ ಬಗ್ಗೆ ಸ್ಪಷ್ಟನೆ ನೀಡಲು ಗಿರೀಶ್‌ ಮಟ್ಟೆಣ್ಣವರ್‌ ಇನ್ನೂ ಮಾಧ್ಯಮಗಳಿಗೆ ದೊರೆತಿಲ್ಲ. ಇಂದು ಬೆಳಗ್ಗೆ ಬ್ರಹ್ಮಾವರ ಠಾಣೆಯ ಮುಂದೆ ʼನನ್ನನ್ನೂ ಬಂಧಿಸಿʼ ಎಂದು ಹೈಡ್ರಾಮಾ ಮಾಡಿದ್ದ ಮಟ್ಟೆಣ್ಣವರ್‌, ಇದೀಗ ಮೀಡಿಯಾಗಳ ಮುಂದಿನಿಂದ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ತಿಮರೋಡಿ, ಗಿರೀಶ್‌, ಸಮೀರ್‌, ಸುಜಾತ ಭಟ್ ಮೇಲೆ ಸ್ನೇಹಮಯಿ ಕೃಷ್ಣ ದೂರು