ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ

ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ. ಹಾಗೆಯೇ ಸುತ್ತೂರು ಜಾತ್ರೆ ಅತ್ಯಂತ ಜನಪ್ರಿಯ ಉತ್ಸವ. ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಬಲು ಸೊಬಗು ಎನ್ನುವುದು ಅಕ್ಷ ರಶಃ ಸತ್ಯ. ಜನಸಾಗರವೇ ಹರಿದು ಬರುವ ಸುತ್ತೂರು ಜಾತ್ರೆಯಲ್ಲಿ ಆರೇಳು ದಿನಗಳ ಕಾಲ ಕಲೆ, ಸಂಸ್ಕೃತಿ, ಕೃಷಿ, ಧಾರ್ಮಿಕ, ಹೀಗೇ ಹತ್ತಾರು ವಿಶೇಷತೆಗಳು ಎಲ್ಲರನ್ನೂ ಬೆರಗು ಗೊಳಿಸುತ್ತವೆ

mysore Image
Profile Ashok Nayak Jan 30, 2025 12:20 PM

ಮೈಸೂರು: ಶ್ರೀ ಸುತ್ತೂರು ಜಾತ್ರಾ ಮಹೋತ್ಸವ ಈ ನೆಲದ ಶ್ರೀಮಂತ ಪರಂಪರೆ ಹಾಗೂ ಸಾಂಸ್ಕೃ ತಿಕ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹಾಹಬ್ಬ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭಿಪ್ರಾಯಪಟ್ಟರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೊಂದಿಗೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡು ಪತ್ರಿಕಾ ಹೇಳಿಕೆ ಮೂಲಕ ಬಣ್ಣಿಸಿದ್ದಾರೆ. ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ.

ಇದನ್ನೂ ಓದಿ: Mysore News: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ: ಡಾ.ಪಿ.ಶಿವರಾಜು

ಹಾಗೆಯೇ ಸುತ್ತೂರು ಜಾತ್ರೆ ಅತ್ಯಂತ ಜನಪ್ರಿಯ ಉತ್ಸವ. ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಬಲು ಸೊಬಗು ಎನ್ನು ವುದು ಅಕ್ಷರಷಃ ಸತ್ಯ. ಜನಸಾಗರವೇ ಹರಿದು ಬರುವ ಸುತ್ತೂರು ಜಾತ್ರೆ ಯಲ್ಲಿ ಆರೇಳು ದಿನಗಳ ಕಾಲ ಕಲೆ, ಸಂಸ್ಕೃತಿ, ಕೃಷಿ, ಧಾರ್ಮಿಕ, ಹೀಗೇ ಹತ್ತಾರು ವಿಶೇಷತೆಗಳು ಎಲ್ಲರನ್ನೂ ಬೆರಗುಗೊಳಿಸು ತ್ತವೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸುತ್ತೂರು ಜಾತ್ರೆಯನ್ನು ಪರಂಪರಾಗತವಾಗಿ ಮುಂದುವರೆಸಿಕೊಂಡು ಬರುವ ಜೊತೆಗೆ ಮತ್ತಷ್ಟು ವೈಭವೋಪಿತಗೊಳಿಸುತ್ತಿದ್ದಾರೆ. ಭವ್ಯ ರಥೋ ತ್ಸವ, ಮಾದರಿ ಕೃಷಿ, ಕೊಂಡೋತ್ಸವ, ಲಕ್ಷದೀಪೋತ್ಸವ, ತೆಪ್ಪೋತ್ಸವ, ಅನ್ನ ಬ್ರಹ್ಮೋತ್ಸವದಂತಹ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಜಾತ್ರಾ ಮಹೋತ್ಸವ ಸೀಮಿತವಾಗಿಲ್ಲ.

ಜಾತ್ಯಾತೀತ ಸಾಮೂಹಿಕ ವಿವಾಹ, ದನಗಳ ಜಾತ್ರೆ, ದೇಸೀ ಆಟಗಳನ್ನೊಳಗೊಂಡ ಕ್ರೀಡಾ ಚಟು ವಟಿಕೆಗಳು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೂರೆಗೊಳ್ಳುತ್ತವೆ.

ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನೂ ಮಾಡುವ ಮೂಲಕ ಸ್ವಯಂ ಉದ್ಯೋಗಕ್ಕೂ ಪ್ರೋತ್ಸಾಹ ಕಲ್ಪಿಸಿರುವುದು ವಿಶೇಷವಾಗಿದೆ.

ಸರ್ಕಾರ ಸಹಕಾರ ನೀಡಲಿ: ಪಾರಂಪರಿಕ, ಐತಿಹಾಸಿಕ, ಧಾರ್ಮಿಕ, ವೈಭವೋಪಿತವಾದ ಸುತ್ತೂರು ಜಾತ್ರಾ ಮಹೋತ್ಸವ ಸಂಸ್ಕೃತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹಾ ಸೇವೆಯನ್ನು ಸಾಕಾರಗೊಳಿಸುತ್ತಿದೆ. ಉತ್ತರ ಭಾರತದ ಮಹಾಕುಂಭ ಮೇಳದಂತೆ ಸುತ್ತೂರು ಜಾತ್ರೆ ಗೂ ದೇಶದೆಲ್ಲೆಡೆಯಿಂದ ಜನಸಾಗರ ಹರಿದುಬರಬೇಕು. ಈ ಮೂಲಕ ಇಲ್ಲಿನ ಸಂಸ್ಕೃತಿ, ಪರಂಪರೆಯನ್ನು ಪಸರಿಸುವುದರ ಜೊತೆಗೆ ಮೈಸೂರು ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆ ತಂತಾಗುತ್ತದೆ. ಈ ನಿಟ್ಟಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸರ್ಕಾರ ಸಹಕಾರ ನೀಡ ಬೇಕು ಎಂದು ಸಂದೇಶ್ ಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?