ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur University: ತುಮಕೂರು ವಿವಿಯ ಜ್ಞಾನಸಿರಿ ಕ್ಯಾಂಪಸ್ ಪರಿಸರಕ್ಕೆ ಮನಸೋತ ವಿದ್ಯಾರ್ಥಿಗಳು

Tumkur News: ತುಮಕೂರಿನ ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ‘ಜ್ಞಾನಸಿರಿ’ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಗರ ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಜ್ಞಾನಸಿರಿ ಕ್ಯಾಂಪಸ್‌ಗೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಪ್ರಶಾಂತ ಪರಿಸರದಲ್ಲಿ ನೆಲೆಸಿರುವ ಈ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇದೆ.

ತುಮಕೂರು ವಿವಿಯ ಜ್ಞಾನಸಿರಿ ಕ್ಯಾಂಪಸ್ ಪರಿಸರಕ್ಕೆ ಮನಸೋತ ವಿದ್ಯಾರ್ಥಿಗಳು

Profile Siddalinga Swamy Jun 13, 2025 9:36 PM

ತುಮಕೂರು: ಎಲ್ಲೆಲ್ಲೂ ವಿದ್ಯಾರ್ಥಿಗಳ ದಂಡು... ಸುತ್ತೆಲ್ಲ ಹಸಿರು ಗಿಡಮರ. ಆಗಾಗ ತುಂತುರು ಮಳೆ. ವಿಜ್ಞಾನ ಕೇಂದ್ರದ ಆವರಣದಲ್ಲಿ ಕುತೂಹಲದ ಕಣ್ಣುಗಳು. ತುಂಬಿ ತುಳುಕಿದ ಶೈಕ್ಷಣಿಕ ಭವನ. ವಿದ್ಯಾರ್ಥಿನಿಲಯ, ಕಲಾಭವನಗಳಲ್ಲಿ ಚುರುಕಿನ ಓಡಾಟ. ವಾವ್, ಎಷ್ಟೊಂದು ಸುಂದರ ವಾತಾವರಣ. ಎಲ್ಲರ ಬಾಯಲ್ಲೂ ಅದೇ ಉದ್ಗಾರ... ಇದು ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾಲಯದ (Tumkur University) ನೂತನ ಕ್ಯಾಂಪಸ್ ‘ಜ್ಞಾನಸಿರಿ’ಯಲ್ಲಿ ಕಂಡುಬಂದ ದೃಶ್ಯ. ನೂತನ ಕ್ಯಾಂಪಸ್‌ನ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಗರ ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಜ್ಞಾನಸಿರಿಗೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಇದೊಂದು ಅದ್ಭುತ ಅನುಭವ. ಪ್ರಶಾಂತ ಪರಿಸರದಲ್ಲಿ ನೆಲೆಸಿರುವ ಈ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇದೆ. ಎಲ್ಲ ಕಾಮಗಾರಿಗಳು ಬೇಗನೆ ಪೂರ್ಣಗೊಳ್ಳಲಿ. ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಹೊಸದಾಗಿ ನೂರಾರು ಗಿಡಗಳನ್ನು ನೆಟ್ಟಿರುವುದು ನೋಡಿ ಸಂತೋಷವಾಯಿತು. ಕಲಿಕೆಗೆ ಇದು ಆದರ್ಶ ಪರಿಸರದಂತಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹಾಗೂ ಧನಾತ್ಮಕ ಮನೋಭಾವ ಇಲ್ಲಿ ಖಂಡಿತ ಮೂಡುತ್ತದೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ಜ್ಞಾನಸಿರಿ ಕ್ಯಾಂಪಸ್‌ನ ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಡಾ. ಸುರೇಶ್ ಮಾತನಾಡಿ, ಹೊಸ ಕ್ಯಾಂಪಸ್ ಹಂತಹಂತವಾಗಿ ಬೆಳೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಇದೊಂದು ಜಾಗತಿಕ ಗುಣಮಟ್ಟದ ಮಾದರಿ ವಿವಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿ ನಿಲಯಗಳು, ಸುಸಜ್ಜಿತ ಪ್ರಯೋಗಾಲಯಗಳು ನಿರ್ಮಾಣಗೊಂಡಿವೆ. ಇಪ್ಪತ್ತಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಇದನ್ನೊಂದು ಸುಸಜ್ಜಿತ ಕ್ಯಾಂಪಸ್ ಆಗಿ ಬೆಳೆಸಲು ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅವರು ಅಪಾರ ಕಾಳಜಿ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Federal Bank Recruitment 2025: ಫೆಡರಲ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎಚ್.ಕೆ. ಶಿವಲಿಂಗಸ್ವಾಮಿ ಮಾತನಾಡಿ, ವಿಜ್ಞಾನ ವಿಭಾಗಗಳಿಗೆ ಈ ಹಸಿರು ಕ್ಯಾಂಪಸ್ ಬಹುವಾಗಿ ಒಪ್ಪುತ್ತದೆ. ವಿಶ್ವವಿದ್ಯಾಲಯಕ್ಕೆ ಇಂತಹದೊಂದು ಕ್ಯಾಂಪಸ್‌ನ ಅಗತ್ಯವಿತ್ತು ಎಂದು ಹೇಳಿದರು.