Sirsi News: ಪತ್ರಕರ್ತೆ ವಿನುತಾ ಹೆಗಡೆ, ಕೃಷಿಕ ಕೃಷ್ಣ ಭಟ್ ರಿಗೆ ಗೌರವ ಸನ್ಮಾನ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭಾಗಿನಕಟ್ಟಾ ಗ್ರಾಮದಲ್ಲಿಂದು ಆತ್ಮ ಯೋಜನೆ, ತೋಟಗಾರಿಕಾ ಇಲಾಖೆ, ಶ್ರೀದೇವಿ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ರೈತ ಕ್ಷೇತ್ರೊತ್ಸವ ಹಾಗೂ ಕೃಷಿ ಪಾಠ ಸೇರಿದಂತೆ ಮಾಧ್ಯಮ ಪ್ರಶಸ್ತಿ ವಿಜೇತೆ ವಿನುತಾ ಹೆಗಡೆಗೆ ಅಭಿನಂದನಾ ಸನ್ಮಾನ ಹಾಗೂ ಕೃಷಿಕ ಕೃಷ್ಣ ಭಟ್ ಅವರಿಗೆ ಗೌರವ ಸನ್ಮಾನ ನಡೆಯಿತು.
-
Ashok Nayak
Sep 17, 2025 1:56 PM
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭಾಗಿನಕಟ್ಟಾ ಗ್ರಾಮದಲ್ಲಿಂದು ಆತ್ಮ ಯೋಜನೆ, ತೋಟಗಾರಿಕಾ ಇಲಾಖೆ, ಶ್ರೀದೇವಿ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ರೈತ ಕ್ಷೇತ್ರೊತ್ಸವ ಹಾಗೂ ಕೃಷಿ ಪಾಠ ಸೇರಿದಂತೆ ಮಾಧ್ಯಮ ಪ್ರಶಸ್ತಿ ವಿಜೇತೆ ವಿನುತಾ ಹೆಗಡೆಗೆ ಅಭಿನಂದನಾ ಸನ್ಮಾನ ಹಾಗೂ ಕೃಷಿಕ ಕೃಷ್ಣ ಭಟ್ ಅವರಿಗೆ ಗೌರವ ಸನ್ಮಾನ ನಡೆಯಿತು.
ಇದನ್ನೂ ಓದಿ: Sirsi News: ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ, ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಆಯ್ಕೆ
ತೋಟಗಾರಿಕಾ ಇಲಾಖೆಯ ಸತೀಶ್ ಹೆಗಡೆ, ಗಣೇಶ ಭಟ್, ಗ್ರಾಮ ಪಂಚಾಯಿತಿಯ ಭಗೀರಥ ನಯ್ಕ, ಗಂಗಾ ಕೋಮಾರ, ನಾಗರಾಜ ನಾಯ್ಕ, ಶ್ರೀದೇವಿ ಕಂಪನಿಯ ಸುಬ್ರಹ್ಮಣ್ಯ ಶಿ. ಗೌಂವ್ಕರ ಗಜಾನನ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿ ಪಾಠಕ್ಕಾಗಿ ಆಗಮಿಸಿದಿದ್ದ ಅನೇಕ ಕೃಷಿ ಆಸಕ್ತರಿಗೆ ಕೃಷಿ ಪಾಡೋಪಕರಣ ನೀಡಿ ಪ್ತೋತ್ಸಾಹಿಸಲಾಯಿತು