ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Vishweshwar Hegde Kageri: ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತರ ಕನ್ನಡ ಜಿಲ್ಲೆ ಎರಡು ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದೆ. ಅದರ ಮಧ್ಯದಲ್ಲಿ ಸಾಗರವನ್ನು ಜಿಲ್ಲೆಯನ್ನಾಗಿ ಮಾಡಿ ಅದಕ್ಕೆ ಸಿದ್ದಾಪುರ ಹಾಗೂ ಬನವಾಸಿಯನ್ನು ಸೇರಿಸುತ್ತೇವೆ ಎಂಬ ಹೇಳಿಕೆ ಜನರ ಮಧ್ಯದಲ್ಲಿ ಗೊಂದಲ ಮೂಡಿಸುವುದಕ್ಕೆ ಹೇಳಿರುವುದಾಗಿ ಕಾಣುತ್ತದೆ. ಇದರಲ್ಲಿ ಯಾವುದೇ ಸತ್ಯಾ ಸತ್ಯತೆಗಳು ಇವೆ ಎಂದು ಭಾವಿಸುವುದಿಲ್ಲ

ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ

-

Ashok Nayak Ashok Nayak Sep 13, 2025 6:45 PM

ಶಿರಸಿ: ಉತ್ತರ ಕನ್ನಡ ಜಿಲ್ಲೆ ಈಗ ಯಾವ ಭೌಗೋಳಿಕ ಪ್ರದೇಶವನ್ನು ಹೊಂದಿಕೊಂಡಿದೆಯೋ ಅದೇ ರೀತಿಯಲ್ಲಿ ಮುಂದುವರೆಯುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(MP Vishweshwar Hegde Kageri) ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಎರಡು ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದೆ. ಅದರ ಮಧ್ಯದಲ್ಲಿ ಸಾಗರವನ್ನು ಜಿಲ್ಲೆಯನ್ನಾಗಿ ಮಾಡಿ ಅದಕ್ಕೆ ಸಿದ್ದಾಪುರ ಹಾಗೂ ಬನವಾಸಿಯನ್ನು ಸೇರಿಸುತ್ತೇವೆ ಎಂಬ ಹೇಳಿಕೆ ಜನರ ಮಧ್ಯದಲ್ಲಿ ಗೊಂದಲ ಮೂಡಿಸುವುದಕ್ಕೆ ಹೇಳಿರುವುದಾಗಿ ಕಾಣುತ್ತದೆ. ಇದರಲ್ಲಿ ಯಾವುದೇ ಸತ್ಯಾಸತ್ಯತೆಗಳು ಇವೆ ಎಂದು ಭಾವಿಸುವುದಿಲ್ಲ.

ಇದನ್ನೂ ಓದಿ: Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಶಿರಸಿ ಜಿಲ್ಲೆಯಾಗಬೇಕು ಎಂಬ ಬೇಡಿಕೆಗಳು ಕಾಲಕಾಲಕ್ಕೆ ವ್ಯಕ್ತವಾಗುತ್ತಿದೆ. ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ಸಾಗರವನ್ನು ಉತ್ತರ ಕನ್ನಡಕ್ಕೆ ಅಥವಾ ಸಿದ್ದಾಪುರವನ್ನು ಸಾಗರಕ್ಕೆ ಸೇರಿಸುವುದು ಏಕಪಕ್ಷೀಯವಾಗಿ ಹೇಳಿಕೊಳ್ಳಬಹುದೇ ವಿನಃ ಯಾವುದೇ ಚರ್ಚೆ ಸಮಾ ಲೋಚನೆಗಳು ನಡೆದಿಲ್ಲ. ಹಾಗಾಗಿ, ಇಂತಹ ಹೇಳಿಕೆಗಳಿಂದ ಜನರು ಗೊಂದಲಕ್ಕೀಡಾಗಬಾರದು ಎಂದರು.

ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಶಿರಸಿ ಕುಮಟಾ ಹಾಗೂ ಶಿರಸಿ ಹುಬ್ಬಳ್ಳಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು.