ಶಿರಸಿ: ದೇಶದ ಏಕತೆ, ಸಮಗ್ರತೆ, ರಕ್ಷಣೆಯ ವಿಷಯದಲ್ಲಿ ರಾಜಕೀಯ ಬೇಡ. ಈಗಾಗಲೇ ನಮ್ಮ ಸೇನೆ ಸಮಗ್ರವಾಗಿ ಉಗ್ರರ ಸದೆ ಬಡಿಯಲು ಕಾರ್ಯನಿರ್ವಹಿಸಿದ್ದು, ದೇಶದ ವಿಷಯದಲ್ಲಿ ಪ್ರಧಾನಿ ಯವರ ದಿಟ್ಟ ನಡೆ ಶ್ಲಾಘನೀಯ. ಅಲ್ಲದೇ ಕಾಂಗ್ರೆಸ್ ನಾಯಕರೂ ಸಹ ಇದನ್ನು ಬೆಂಬಲಿಸಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು.
ಇದನ್ನೂ ಓದಿ: Sirsi News: ಮೇ 10, 11ರಂದು ಎರಡು ದಿನಗಳ ಕಾಲ 16ನೇ ವರ್ಷದ ಕೃಷಿ ಜಯಂತಿ, ಶ್ರೀ ಲಕ್ಷಿನೃಸಿಂಹ ರಥೋತ್ಸವ
ಅವರಿಂದು ಶಿರಸಿಯ ದೀನ ದಯಾಳ್ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಕ್ತಾರ ಸದಾನಂದ ಭಟ್, ಬಿಜೆಪಿ ಮುಖಂಡರಾದ ಆನಂದ ಸಾಲೇರ, ಗುರು ಪ್ರಸಾದ ಹೆಗಡೆ, ಆರ್ ಡಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು