ಇಂಡಿ: ಏ.11, 2026ರಂದು ಶನಿವಾರ ಇಂಡಿ ತಾಲೂಕಿನ ನಾದ ಗ್ರಾಮದ ಹಾಗೂ ಸಿಂದಗಿ ತಾಲೂಕಾ ತಾಂಬಾ ಗ್ರಾಮದಲ್ಲಿ ಸಿದ್ದಸಿರಿ ಬಹುರಾಜ್ಯ ಬಹು ಉದ್ದೇಶ ಸಹಕಾರಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳಲ್ಲಿದೆ ಎಂದು ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ ತಿಳಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ಇವಾಗಲೇ 8 ಸ್ವಂತ ಕಟ್ಟಡಗಳು ಹೊಂದಿವೆ ತಾಲೂಕಿನಲ್ಲಿ 15 ಶಾಖೆಗಳು ಹೊಂದಿವೆ, ಒಟ್ಟು 484 ಕೋಟಿ 88 ಲಕ್ಷ ಠೇವಣಿ ಹೊಂದಿದೆ. ಹಾಗೂ ಸಿದ್ದ ಸಿರಿ ಎಲ್ಲಾ ಶಾಖೆಗಳ ಒಳಗೊಂಡು 5 ಸಾವಿರದಾ 2 ನೂರಾ 20 ಕೋಟಿ 25 ಲಕ್ಷ ಇರುತ್ತದೆ.
ಇದನ್ನೂ ಓದಿ: Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು
ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆ ಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ , ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.
20 ವರ್ಷಗಳಿಂದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವದಕ್ಕೆ ಮಾಜಿ ಕೆಂದ್ರ ಸಚಿವರಾದ ಮಾನ್ಯ ಶ್ರೀಬಸವನಗೌಡ ಪಾಟೀಲ ಯತ್ನಾಳ ಅವರ ನೈತೃತ್ವದಲ್ಲಿ ಬೆಳೆಸುವುದಕ್ಕಾಗಿ ಮೂಲ ಕಾರಣಕರ್ತ ರಾಗಿದ್ದಾರೆ. ಇವರ ನೈತೃತ್ವದಲ್ಲಿ ಕನಿಷ್ಠ 5 ಸಾವಿರ ಜನರಿಗೆ ಉದ್ಯೋಗ ಸೃಷ್ಠಿ ಮಾಡಿದ್ದಾರೆ ಎಂದು ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಶ್ರೀಜಗದೀಶ ಕ್ಷತ್ರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.