#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagappa Harijan Murder: ಕೋರ್ಟ್‌ ಆವರಣದಲ್ಲೇ ಮೂರು ಗುಂಡು ಬಿದ್ದರೂ ಬದುಕುಳಿದಿದ್ದ ಭೀಮಾ ತೀರದ ಬಾಗಪ್ಪ ಹರಿಜನ!

ಮೂಲತಃ ಬಾಗಪ್ಪ ಹರಿಜನ (Bhagappa Harijan) ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದವನಾಗಿದ್ದಾನೆ. ಮೊದಲಿನಿಂದಲೂ ಭೀಮಾತೀರದ ಹಂತಕರ ನಂಟಿನಲ್ಲೇ ಬೆಳೆದ ಬಾಗಪ್ಪ ಸಹ ಅದೇ ಹಾದಿ ಹಿಡಿದು ಹಂತಕ ಚಂದಪ್ಪನ ಸಹಚರನಾಗಿದ್ದ. ಚಂದಪ್ಪನ ಜೊತೆಗೆ ಸೇರಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಈತನ ಮೇಲಿತ್ತು.

ಕೋರ್ಟ್‌ ಆವರಣದಲ್ಲೇ ಮೂರು ಗುಂಡು ಬಿದ್ದರೂ ಬದುಕುಳಿದಿದ್ದ ಬಾಗಪ್ಪ ಹರಿಜನ!

ಹಂತಕ ಬಾಗಪ್ಪ ಹರಿಜನ

ಹರೀಶ್‌ ಕೇರ ಹರೀಶ್‌ ಕೇರ Feb 12, 2025 9:05 AM

ವಿಜಯಪುರ: ಭೀಮಾತೀರದ (Bhima River) ಹಂತಕ (Killer), ರೌಡಿಶೀಟರ್, ಕುಖ್ಯಾತ ಎನಿಸಿಕೊಂಡಿದ್ದ ಬಾಗಪ್ಪ ಹರಿಜನನ(50) ಭೀಕರ (Bhagappa Harijan murder Case) ಕೊಲೆಯಾಗಿದೆ. ನಗರದ (Vijyapura news) ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕಳೆದ ಹಲವು ದಶಕಗಳಿಂದ ಭೀಮಾತೀರದ ಹಂತಕರ ಹೆಸರಿನಲ್ಲಿ ಸಂಚಲನ ಸೃಷ್ಠಿಸಿದ್ದ ಬಾಗಪ್ಪ ಹರಿಜನ ಇಂದು ಬೀದಿ ಹೆಣವಾಗಿದ್ದಾನೆ. ಹಲವಾರು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪನ ಮೇಲೆ ಮಂಗಳವಾರ ರಾತ್ರಿ ಅಟ್ಯಾಕ್ ನಡೆದಿದ್ದು, ಆತನ ಮುಖ, ಕೈ, ದೇಹವನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೊಲೆ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಇಡಿ ವಿಜಯಪುರ ಸ್ಥಬ್ದವಾಗಿದೆ.

ಹಂತಕ ಬಾಗಪ್ಪನ ಹಿನ್ನೆಲೆ :

ಮೂಲತಃ ಬಾಗಪ್ಪ ಹರಿಜನ ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದವನಾಗಿದ್ದಾನೆ. ಮೊದಲಿನಿಂದಲೂ ಭೀಮಾತೀರದ ಹಂತಕರ ನಂಟಿನಲ್ಲೇ ಬೆಳೆದ ಬಾಗಪ್ಪ ಸಹ ಅದೇ ಹಾದಿ ಹಿಡಿದು ಹಂತಕ ಚಂದಪ್ಪನ ಸಹಚರನಾಗಿದ್ದ. ಚಂದಪ್ಪನ ಜೊತೆಗೆ ಸೇರಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಈತನ ಮೇಲಿತ್ತು.

ಬಾಗಪ್ಪನ ಮೇಲಿದ್ದ 10 ಪ್ರಕರಣಗಳು

ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಗುಂಡು ಹಾರಿಸಿದ ಪ್ರಕರಣ, ಬೆದರಿಕೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಬಾಗಪ್ಪ ಹರಿಜನನ ಮೇಲೆ ಒಟ್ಟು ಹತ್ತು ಪ್ರಕರಣಗಳಿವೆ.

- ಕುಖ್ಯಾತ ಹಂತಕ ಚಂದಪ್ಪ ಹರಿಜನನ ಜೊತೆಗೆ ಸಹಚರನಾಗಿ ಬೆಳೆದಿದ್ದ ಬಾಗಪ್ಪ ಚಂದಪ್ಪನ ಕಾಲಾ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

- ಚಂದಪ್ಪ ಹರಿಜನನ ಸಂಬಂಧಿ ಮುತ್ತುರಾಜನನ್ನು ಕೊಲೆ ಮಾಡಿದ ಆರೋಪ.

- 2020 ಜುಲೈ 19ರಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಮೂರು ಕೇಜಿ ಚಿನ್ನ ಅಥವಾ 5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಆರೋಪ.

- 1997ರಲ್ಲಿ ಬಾಗಪ್ಪ ಚಡಚಣ ಠಾಣೆ ವ್ಯಾಪ್ತಿ ನಡೆದಿದ್ದ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

- 1998ರಲ್ಲಿ ಆಳಂದ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆಗಳು ಹಾಗೂ ಅಪಹರಣ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.

- 1999ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯೊಂದರಲ್ಲಿ ಈತನ ಹೆಸರು ತಳುಕು ಹಾಕಿಕೊಂಡಿತ್ತು.

- 2000ರಲ್ಲಿ ಪೊಲೀಸರ ಮೇಲೆ ಫೈರಿಂಗ್, ಬ್ಯಾಡಗಿಹಾಳದಲ್ಲಿ ನಡೆದ ಕೊಲೆ, ಆಳಂದ ಠಾಣೆ ವ್ಯಾಪ್ತಿ ಕೊಲೆ, ಬಸವಕಲ್ಯಾಣ ಠಾಣೆ ವ್ಯಾಪ್ತಿ ಕೊಲೆ ಯತ್ನ ಆರೋಪ.

- 2001ರಲ್ಲಿ ಆಲಮೇಲ ಠಾಣೆ ವ್ಯಾಪ್ತಿ ಕೊಲೆ, ಸಾಕ್ಷಿಗಳ ಮೇಲೆ ಗುಂಡು ಹಾರಿಸಿದ್ದ ಆರೋಪ.

- 2003ರಲ್ಲಿ ಅಪ್ಜಲಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ.

2017ರಲ್ಲಿ ಈತನ ಮೇಲೆ ಗುಂಡಿನ ದಾಳಿ

ಹಂತಕ ಬಾಗಪ್ಪ ಹರಿಜನನ ಮೇಲೆ 2017 ಆಗಸ್ಟ್ 8ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ಬೆಳಗ್ಗೆ 10.40ಕ್ಕೆ ಗುಂಡಿನ ದಾಳಿ ನಡೆದಿತ್ತು. ಭೀಮಾತೀರದ ಹಂತಕ ಚಂದಪ್ಪ ಹರಿಜನ 2000ರಲ್ಲಿ ಪೊಲೀಸ್ ಎನಕೌಂಟರ್‌ ಗೆ ಬಲಿಯಾದ ಬಳಿಕ 14 ವರ್ಷಗಳ ನಂತರ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆಯಾಗಿತ್ತು. ಇದರಲ್ಲಿ ಬಾಗಪ್ಪ ಭಾಗಿಯಾಗಿದ್ದ ಎನ್ನಲಾಗಿತ್ತು. ಹೀಗೆ ಬಿಟ್ಟರೆ ಬಾಗಪ್ಪ ನಮ್ಮನ್ಯಾರನ್ನೂ ಉಳಿಸೋದಿಲ್ಲ ಎಂದುಕೊಂಡ ಚಂದಪ್ಪನ ಅಣ್ಣನ ಮಗನಾದ ಭೀಮಶ್ಯಾ ಹರಿಜನ ತನ್ನ ಪರಿಚಯಸ್ಥರಿಗೆ ಸುಪಾರಿ ನೀಡಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಸುಪಾರಿ ಪಡೆದಿದ್ದ ಪೀರಪ್ಪ ಹಡಪದ ಎಂಬಾತ ಬಾಗಪ್ಪನ ಮೇಲೆ ಕೋರ್ಟ್ ಆವರಣದಲ್ಲೇ ಮೂರು ಸುತ್ತು ಗುಂಡು ಹಾರಿಸಿದ್ದರೂ ಬಾಗಪ್ಪ ಚಿಕಿತ್ಸೆ ಪಡೆದು ಬದುಕುಳಿದಿದ್ದ. ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳಿದ್ದರು.

ಇದನ್ನೂ ಓದಿ: Bhagappa Harijan Murder: ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ ಕೊಚ್ಚಿ ಕೊಲೆ