ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayapura News: ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯಾಲಯಗಳು ಕೂಡಾ ಗುಣಮಟ್ಟದಾಗಿಲ್ಲ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ ಮುಷ್ಕರ ಯಾವುದೇ ಬೇಡಿಕೆ ಈಡೇರಿಸದೆ ಇರುವ ಕಾರಣ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಮೂಲಸೌಲಭ್ಯಗಳು ಒದಗಿಸಬೇಕು ಎಂದು ಸಾಕಷ್ಟು ಬಾರಿ ಸರ ಕಾರಕ್ಕೆ ಮನವಿ ಸಲ್ಲಿಸಿ ದರೂ ಕೂಡಾ ಪ್ರಯೋಜನ ಆಗಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯಾಲಯಗಳು ಕೂಡಾ ಗುಣಮಟ್ಟದಾಗಿಲ್ಲ

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಬೇಡಿಕೆಗಳು ಇಡೇರಿಸಬೇಕು ಎಂದು ಪ್ರತಿಭಟನೆ ನಡೆಸಿದರು.

Profile Ashok Nayak Feb 16, 2025 6:52 PM

ಇಂಡಿ: ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಇತ್ಯರ್ಥವಾಗದೆ ಇರುವ ಹಿನ್ನಲೆಯಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ ಮುಷ್ಕರ ಯಾವುದೇ ಬೇಡಿಕೆ ಈಡೇರಿಸದೆ ಇರುವ ಕಾರಣ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಸಾಕಷ್ಟು ಬಾರಿ ಸರ ಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಪ್ರಯೋಜನ ಆಗಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯಾಲಯಗಳು ಕೂಡಾ ಗುಣಮಟ್ಟದಾಗಿಲ್ಲ.

ಇದನ್ನೂ ಓದಿ: Vijayapura News: ಶ್ರೀಸಿದ್ದೇಶ್ವರ ಶ್ರೀಗಳು ಈ ಭಾಗದ ಜನರಿಗೆ ಹೃದಯ ಶ್ರೀಮಂತಿಕೆ ನೀಡಿದ್ದಾರೆ: ಶಾಸಕ ಯಶವಂತರಾಯಗೌಡ ಪಾಟೀಲ

ಕನಿಷ್ಠ ಮಟ್ಟದ ಸೌಲಭ್ಯ ಒದಗಿಸುತ್ತದೆ ಎಂಬ ಭರವಸೆ ಇದ್ದರೂ ಕೂಡಾ ಸರಕಾರ ಕ್ಯಾರೆ ಎನ್ನು ತ್ತಿಲ್ಲ. ನಮ್ಮ ಬೇಡಿಕೆಗಳಾದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ. ಉತ್ತಮ ಗುಣ ಮಟ್ಟದ ಟೇಬಲ್, ಖುರ್ಚಿ, ಟ್ರೇಜರಿ, ಗುಣಮಟ್ಟದ ಮೋಬಾಯಿಲ್ (೧೨\೨೫೬ ಜಿ.ಬಿ) ಸಿಯುಜಿ ಸಿಮ್ ಹಾಗೂ ಡೇಟಾ, ಗೂಗಲ್ ಕ್ರೋಮ ,ಬುಕ್ಕ ಲ್ಯಾಪ್ ಟಾಪ್, ಪ್ರೀಂಟರ್ ಮತ್ತು ಸ್ಕಾನರ್ ಗ್ರಾಮದ ಅಡಳಿತ ಅಧಿಕಾರಿಗಳ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ ಇತರೆ ಎಲ್ಲಾ ಸೌಲಭ್ಯ ಗಳು ಒದಗಿಸಬೇಕುಎಂದು ತಾಲೂಕಾ ಅಧ್ಯಕ್ಷ ವಾಯ್.ಎಲ್ ಪೂಜಾರಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ವಾಯ.ಎಲ್ ಪೂಜಾರಿ, ಎಸ್.ಎಸ್ ಪೂಜಾರಿ, ಸಿದ್ದು ಮೋದಿ, ಪ್ರಕಾಶ ಚೌಡಿಹಾಳ, ಎಂ.ಆರ್ ರಾಠೋಡ, ವಿದ್ಯಾ ಸರಸಂಬಿ, ಜಿ.ಎಂ ಬಿರಾದಾರ, ಸುರೇಶ ಬಿರಾದಾರ, ಕವೀತಾ ಜೀರಂಕಲಗಿ, ಈರಮ್ಮಾ ಜೋಗುರ, ಚೌದರಿ ನದಾಫ, ಬಸವರಾಜ ಅವುಜಿ, ಸಿದ್ದು ಲಾಳಸಂಗಿ, ಕವಿತಾ ಹಚಡದ ಸೇರಿದಂತೆ ಅನೇಕರು ಇದ್ದರು.