Mysore News: ನಾವೆಲ್ಲರೂ ಸಮಾನರು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು: ಡಾ.ಪಿ.ಶಿವರಾಜು
ಸಾವಿರ ವರ್ಷಗಳ ಕಾಲ ಹಿಂದೆ ಇದ್ದವರನ್ನು ನಾವು ನೆನೆಸಿಕೊಂಡು ಅವರ ಜಯಂತಿಯನ್ನು ಆಚರಣೆ ಮಾಡುತ್ತಾ ಇದ್ದೇವೆ ಎಂದರೆ ಅವರು ಹುಟ್ಟಿರುತ್ತಾರೆ ಅವರಿಗೆ ಸಾವು ಇರುವುದಿಲ್ಲ ಎಂದು ನಾವು ಅರಿಯಬೇಕು. ಅಂತವರ ಜಯಂತಿಯನ್ನು ನಾವು ಹುಟ್ಟು ಹಬ್ಬವಾಗಿ ಆಚರಿಸು ವವರ ಸಾಲಿನಲ್ಲಿ ರೇಣುಕಾಚಾರ್ಯರು ಸೇರಿದ್ದಾರೆ


ಮೈಸೂರು: ಅರ್ಥಪೂರ್ಣವಾಗಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿದ್ದು ನಾವೆಲ್ಲರೂ ಸಮಾನರು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮಲ್ಲಿ ಬರಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ಅವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು. ರೇಣುಕಾಚಾರ್ಯ ಜಯಂತಿಯನ್ನು ನಾವೆಲ್ಲರೂ ಸಹ ಆಚರಿಸುತ್ತಾ ಬರು ತ್ತಿದ್ದೇವೆ. ಇವರು ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಹಾಗೂ ಮತ್ತೆ ನಮ್ಮ ಮನೆಗಳಲ್ಲಿಯೂ ಸಹ ಇವರನ್ನು ಆಚರಿಸುತ್ತೇವೆ. ಇಂದು ಸರ್ಕಾರಿ ಕಾರ್ಯಕ್ರಮವಾಗಿಯೂ ಅರ್ಥಪೂರ್ಣವಾಗಿಯೂ ಕೂಡಾ ಆಯೋಜನೆ ಮಾಡಿ ಆಚರಣೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Mysuru News: ಮೈಸೂರಿನಲ್ಲಿ ಮಾ.27 ರಂದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಉಚಿತ ತರಬೇತಿ
ನಾವು ಯಾವುದೇ ಜಯಂತಿಯನ್ನು ಆಚರಣೆ ಮಾಡಬೇಕಾದರೆ ಅದರ ಮೂಲ ಉದ್ದೇಶ ಮತ್ತು ಅದರ ಆಶಯಗಳನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ ಎಂದರು.
ಸಾವಿರ ವರ್ಷಗಳ ಕಾಲ ಹಿಂದೆ ಇದ್ದವರನ್ನು ನಾವು ನೆನೆಸಿಕೊಂಡು ಅವರ ಜಯಂತಿಯನ್ನು ಆಚರಣೆ ಮಾಡುತ್ತಾ ಇದ್ದೇವೆ ಎಂದರೆ ಅವರು ಹುಟ್ಟಿರುತ್ತಾರೆ ಅವರಿಗೆ ಸಾವು ಇರುವುದಿಲ್ಲ ಎಂದು ನಾವು ಅರಿಯಬೇಕು. ಅಂತವರ ಜಯಂತಿಯನ್ನು ನಾವು ಹುಟ್ಟು ಹಬ್ಬವಾಗಿ ಆಚರಿಸು ವವರ ಸಾಲಿನಲ್ಲಿ ರೇಣುಕಾಚಾರ್ಯರು ಸೇರಿದ್ದಾರೆ. ಯಾರಿಗೆ ಹುಟ್ಟು, ಸಾವು ಇಲ್ಲವೋ ಅಂತಹ ಮಹಾ ಚರಿತ್ರೆಗಳನ್ನು ಜಯಂತಿಯಾಗಿ, ಹುಟ್ಟುಹಬ್ಬವಾಗಿ ನಾವು ಆಚರಣೆ ಮಾಡುತ್ತೇವೆ ಎಂದರು.

ಇಡೀ ಸಮಾಜಕ್ಕೆ ಬೆಳಕಾದವರು ವಿಶ್ವಗುರು ರೇಣುಕಾಚಾರ್ಯರು. ವೀರಶೈವ ಪರಂಪರೆಯಲ್ಲಿ ಮಹಾನ್ ಚೇತನರಾಗಿ ಎಂದೆoದಿಗೂ ನಮಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಯಾವುದೇ ಜಾತಿ, ಪಂಗಡ ಎಂಬುದು ಕೇಳಿ ಪಡೆದದಲ್ಲ. ಇದು ನಮ್ಮ ಆಯ್ಕೆಯಲ್ಲ, ನಾವು ನಮ್ಮ ತಂದೆ ತಾಯಿಯ ಹೊಟ್ಟೆಯಲ್ಲಿಯೇ ಜನಿಸಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದಿರುವು ದಿಲ್ಲ. ನಾವು ಗಂಡಾಗಿ ಅಥವಾ ಹೆಣ್ಣಾಗಿ ಇದೆ ಊರಿನಲ್ಲಿ ಜನಿಸಬೇಕು ಎಂದುಕೊoಡು ನಾವು ಬಂದಿರುವುದಿಲ್ಲ ನಮ್ಮ ಜಾತಿ ನಮ್ಮ ಕುಟುಂಬ ಎಲ್ಲವೂ ಸಹ ಪ್ರಕೃತಿಯ ಆಯ್ಕೆ ಯಾಗಿರುತ್ತದೆ ಎಂದು ತಿಳಿಸಿದರು.
ನಮ್ಮ ಆಯ್ಕೆ ಅಲ್ಲದಿದ್ದರೂ ಪ್ರಕೃತಿಯ ವಿಸ್ಮಯ ನಮಗೆ ಕೊಟ್ಟಿರುವಂತಹ ಕೊಡುಗೆ ಶ್ರೇಷ್ಠ. ನಮ್ಮ ದೇಹವೇ ದೇವಾಲಯದ ರೀತಿ. ನಮ್ಮ ಆತ್ಮವೇ ದೇವರು ಎಂದು ನಾವು ಹೇಗೆ ಜೀವನ ಮಾಡುತ್ತೆವೋ ಹಾಗೆಯೇ ಅವರವರ ಜಾತಿಗಳು ಎಲ್ಲಾ ಧರ್ಮಗಳು ಅವರವರದೇ ರೀತಿಯಲ್ಲಿ ಇರುತ್ತದೆ ಎಂದರು.
ಯಾವುದೇ ಜಾತಿ ಧರ್ಮ ಎಂಬುದು ಉಳಿಯುವುದಿಲ್ಲ ನಾವೆಲ್ಲರೂ ಸಮಾನರು ಇದನ್ನೇ ನಮಗೆ ರೇಣುಕಾ ಚಾರ್ಯರು ಸಹ ಹೇಳಿದ್ದಾರೆ. ಸಹಬಾಳ್ವೆಯಿಂದ ಸಾಮರಸ್ಯವಾಗಿ ಜ್ಞಾನವನ್ನು ಬೆಳೆಸಿ ಕೊಳ್ಳಬೇಕು ಹಾಗೂ ಬದುಕಬೇಕು ಎಂದು ಸಾರಿದ್ದಾರೆ ಅವರು ಏನೆಲ್ಲಾ ಹೇಳಿದ್ದಾರೆ ಅವನಲ್ಲ ಪಾಲನೆ ಮಾಡುವುದರಿಂದ ಅವರ ಜಯಂತಿಯನ್ನು ಆಚರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದರು.
ಬಸವಣ್ಣ ನವರ ನಮಗೆ ಹೇಳಿದ್ದಾರೆ ನಮಗಿಂತ ಯಾರು ಕೀಳಲ್ಲ ಎಂದು ಅವರು ಹೇಳಿರುವು ದರಲ್ಲಿ ಯಾವುದೇ ತಪ್ಪಿಲ್ಲ ನಾವು ಚಿಕ್ಕವರು ಎಂದು ಭಾವಿಸುವುದು ತಪ್ಪಲ್ಲ ಅಲ್ಲಿ ನಾವು ಪ್ರಕೃತಿಗೆ ತಲೆಬಾಗಿರುತ್ತೇವೆ. ಎಲ್ಲಿ ನಾವು ಪ್ರಕೃತಿಗೆ ತಲೆ ಬಾಗುತ್ತೇವೆ ಅಲ್ಲಿ ಪ್ರಕೃತಿಯೇ ನಮ್ಮನ್ನು ಬೆಳೆಸುತ್ತದೆ ಎಂದು ಹೇಳಿದರು.
ರೇಣುಕಾಚಾರ್ಯರು ನಮಗೆ ಸಮಾನತೆ, ಸಹಬಾಳ್ವೆ, ಜ್ಞಾನವನ್ನು ನೀಡಿದ್ದಾರೆ. ನಾವು ಚೆನ್ನಾಗಿದ್ದು ಸಮಾಜವನ್ನು ಚೆನ್ನಾಗಿ ಇಡುವುದರ ಮೂಲಕ ನಮ್ಮ ಮಕ್ಕಳಿಗೆ ಆದರ್ಶವಾಗಿ ಬದುಕಬೇಕು, ನಾವು ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದಾಗ ಮುಂದಿನ ಪೀಳಿಗೆ ಮಾದರಿಯಾಗಿ ಒಂದು ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಅದರಿಂದ ರೇಣುಕಾಚಾರ್ಯರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ.ಆರ್.ಎಂ. ಷಡಕ್ಷರಯ್ಯ ಅವರು ಮಾತನಾಡಿ ಕರ್ನಾಟಕ ರಾಜ್ಯ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುತ್ತಾ ಇರುವುದು ಬಹಳ ಸಂತೋಷಕರವಾದ ವಿಷಯವಾಗಿದೆ ಎಂದರು.
ಚರಿತ್ರೆಯಲ್ಲಿ ವೀರಶೈವರ ಧರ್ಮವನ್ನು ಸ್ಥಾಪಿಸಿದವರು. ವೀರಶೈವ ಧರ್ಮವನ್ನು ಪ್ರಚಾರ ಮಾಡಲು ಇಡೀ ಜಗತ್ತನ್ನೇ ಸುತ್ತಿದ್ದಾರೆ. ಅವರ ತತ್ವಗಳು ಸಿದ್ಧಾಂತಗಳು ಬಸವಣ್ಣನ ತತ್ವಗಳನ್ನು ಹೋಲುವಂತದ್ದು ಬಸವಣ್ಣ ಮತ್ತು ರೇಣುಕಾಚಾರ್ಯರ ತತ್ವಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಾಗೆ ಎಂದು ಹೇಳಿದರು.
ರೇಣುಕಾ ಚರ್ಯರು ನಮಗೆ ಕೊಟ್ಟಿರುವಂತಹ ಕೊಡುಗೆ, ಮತ್ತು ಆದರ್ಶಗಳು ಅಪಾರವಾದದ್ದು, ಅದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾ ಪೌರರಾದ ಸುನಂದಾ ಪಾಲನೇತ್ರ, ಶ್ರೀ ಭಾರತೀಯ ಅಗಸ್ತ್ಯ ಮಹರ್ಷಿ ಸಂಶೋಧನ ಸಂಸ್ಥೆಯ ಹಿರಿಯ ವಕೀಲರಾದ ಮೈಸೂರು ನಿರ್ದೇಶಕರಾದ ಓಂ.ಶ್ಯಾಂ ಭಟ್, ರೇಣುಕಾಚಾರ್ಯ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಪ್ರಕಾಶ್ ಕುಮಾರ್, ಉಪಾಧ್ಯಕ್ಷ ರಾದ ಜ್ಞಾನ ಶಂಕರ್, ಕಂಡೇಶ್ ಕಾಶಿ ವಿಶ್ವನಾಥ ಶೆಟ್ಟಿ, ಖಜಾಂಜಿ ಎನ್.ಜಿ ಗಿರೀಶ್ ಉಪಸ್ಥಿತರಿ ದ್ದರು.