ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BR Patil: ಸಿಎಂ ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳು ಮಾಡಲು ಪ್ರಯತ್ನ: ಬಿಆರ್‌ ಪಾಟೀಲ್

ʼನಾನು ಆಡಿದ ಮಾತುಗಳನ್ನು ತಿರುಚಿ ವರದಿ ಮಾಡಲಾಗುತ್ತಿದೆ. ಕೆಆರ್‌ ಪೇಟೆಯಲ್ಲಿ ಮಿತ್ರರ ಜೊತೆ ಮಾತನಾಡುವಾಗ ಅವರ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದೆ. ಅವರು ಲಕ್ಕಿ ಲಾಟರಿಯಲ್ಲಿ ಗೆದ್ದು ಸಿಎಂ ಆದರು ಅಂತ ಹೇಳಿದ್ದೆʼ ಎಂದು ಶಾಸಕ ಬಿಆರ್‌ ಪಾಟೀಲ್‌ (BR Patil) ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳು ಮಾಡಲು ಪ್ರಯತ್ನ: ಬಿಆರ್‌ ಪಾಟೀಲ್

ಬಿಆರ್‌ ಪಾಟೀಲ

ಹರೀಶ್‌ ಕೇರ ಹರೀಶ್‌ ಕೇರ Jul 2, 2025 9:30 AM

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುರಿತು ಟೀಕಿಸಿ ಮಾತನಾಡಿದ ವಿಡಿಯೋ ವೈರಲ್‌ (Viral video) ಆದ ಬಳಿಕ, ಆಳಂದ ಶಾಸಕ ಬಿ.ಆರ್.ಪಾಟೀಲ್ (BR Patil) ಇದೀಗ ಉಲ್ಟಾ ಹೊಡೆದಿದ್ದಾರೆ. ʼನನ್ನ ಮಾತುಗಳನ್ನು ಮಾಧ್ಯಮಗಳಲ್ಲಿ ತಿರುಚಿ ತೋರಿಸಲಾಗುತ್ತಿದೆ. ಇದು ನನ್ನ ಮತ್ತು ಸಿದ್ದರಾಮಯ್ಯನವರ ಸಂಬಂಧವನ್ನು ಹಾಳು ಮಾಡಲು ಉದ್ದೇಶಿಸಿ ಹೀಗೆ ಮಾಡಲಾಗುತ್ತಿದೆʼ ಎಂದು ಅವರು ಆರೋಪಿಸಿದ್ದಾರೆ.

ʼನಾನು ಆಡಿದ ಮಾತುಗಳನ್ನು ತಿರುಚಿ ವರದಿ ಮಾಡಲಾಗುತ್ತಿದೆ. ಕೆಆರ್‌ ಪೇಟೆಯಲ್ಲಿ ಮಿತ್ರರ ಜೊತೆ ಮಾತನಾಡುವಾಗ ಅವರ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದೆ. ಅವರು ಲಕ್ಕಿ ಲಾಟರಿಯಲ್ಲಿ ಗೆದ್ದು ಸಿಎಂ ಆದರು ಅಂತ ಹೇಳಿದ್ದೆ. ನಾನು ಅವರಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದೇನೆ ಎಂದು ಹೇಳಿರುವುದು ಸಂಪೂರ್ಣ ತಪ್ಪು. ಸೋನಿಯಾ ಗಾಂಧಿ ಭೇಟಿ ಮಾಡುವಾಗ ನಾನೂ ಹೋಗಿದ್ದೆ. ಸೋನಿಯಾ ಗಾಂಧಿ ಭೇಟಿ ಬೇಡ ಅನ್ನುತ್ತಿದ್ದರು. ನಾನೇ ಒತ್ತಾಯಿಸಿದಾಗ ಅವರು ಹೋದರುʼ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಮಾಸ್‌ ಲೀಡರ್.‌ ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ಆತ್ಮೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಉದ್ದೇಶಫೂರ್ವಕ ಪ್ರಯತ್ನಿಸ್ತಾ ಇದ್ದಾರೆ. ನಾವು 9 ಜನ ಶಾಸಕರು ಅವರ ನೇತೃತ್ವದಲ್ಲಿ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದೀವಿ. ಕಾಂಗ್ರೆಸ್‌ ಕೂಡ ಅವರ ಜನಬೆಂಬಲವನ್ನು ನೋಡಿ ಅವರನ್ನು ಮುಖ್ಯಮಂತ್ರಿ ಮಾಡಿತು ಹೊರತಾಗಿ ನಾವು ಹೇಳಿದ್ದು ಎಂದು ಮಾಡಿಲ್ಲʼ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮೊದಲು ಏನೆಂದಿದ್ದರು?

ಈ ಹಿಂದೆ ವೈರಲ್‌ ಆಗಿದ್ದ ವಿಡಿಯೋ ಒಂದರಲ್ಲಿ ಶಾಸಕ ಬಿಆರ್‌ ಪಾಟೀಲ್‌, ʼಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನು ನಾನೇ. ಆದರೆ ಅವನ ಗ್ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗಿಬಿಟ್ಟ. ನನಗೆ ಗಾಡೂ ಇಲ್ಲ, ಫಾದರೂ ಇಲ್ಲʼ ಎಂದು ಹೇಳಿದ್ದರು. ಈಗ ಈ ವಿಡಿಯೋದಲ್ಲಿ ಆಡಿದ ಮಾತುಗಳನ್ನು ಅವರು ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: DK Shivakumar: ಬಿ.ಆರ್. ಪಾಟೀಲ್ ಯಾವ ಉದ್ದೇಶದಲ್ಲಿ ಹೇಳಿದ್ದಾರೋ ಅದು ಸರಿ ಇಲ್ಲ, ನಾನಿದನ್ನು ಖಂಡಿಸುತ್ತೇನೆ: ಡಿ.ಕೆ.ಶಿವಕುಮಾರ್