ಚಿಂತಾಮಣಿ: ರೈತರಿಗೆ ಸದಸ್ಯತ್ವ ನೀಡದೆ ಏಕಪಕ್ಷ ಧೋರಣೆ ನಡೆಸಿ ಚುನಾವಣೆ ನಡೆಸು ತ್ತಿರುವುದಾಗಿ ವಕೀಲ ದಯಾನಂದ,ನಾರಾಯಣ್ ಮೂರ್ತಿ, ರವಿ, ಮಣಿಕಂಠಚಾರಿ ಮೊದಲಾದವರು ಆರೋಪ ಮಾಡಿದ್ದಾರೆ. ತಾಲ್ಲೂಕಿನ ಹಿರೇಕಟ್ಟಿಗೆನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡ ಳಿಯ ಚುನಾವಣೆ ಭಾನುವಾರ ನಡೆಯು ತ್ತಿದ್ದು ಚುನಾವಣಾ ಅಧಿಕಾರಿ ಏಕಪಕ್ಷೀಯವಾಗಿ ಚುನಾವಣೆ ನಡೆಸುತ್ತಿದ್ದಾರೆ ಆದರೆ ಮತದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: Chikkaballapur News: ಕೇಂದ್ರ ರಾಜ್ಯ ಸರಕಾರಗಳು ಮಾರಕ ನೀತಿಗಳ ಮೂಲಕ ಕೃಷಿ ಕ್ಷೇತ್ರವನ್ನು ದಿವಾಳಿಯಾಗಿಸಲಾಗುತ್ತಿದೆ
ಚುನಾವಣೆಗೂ ಪೂರ್ವದಲ್ಲಿ ಈ ಬಗ್ಗೆ ರೈತರಿಗೆ,ಹಾಗೂ ಸ್ಥಳೀಯರಿಗೆ, ಸಮರ್ಪಕವಾದ ಮಾಹಿತಿ ತಿಳಿಸದೆ ಮತ್ತು ಬಹಿರಂಗವಾಗಿ ಪ್ರಚಾರ ಪಡಿಸದೆ,ಚುನಾವಣೆಯನ್ನು ಘೋಷಣೆ ಮಾಡಿರುವುದು ಕಾನೂನು ಬಾಹಿರವಾಗಿದೆ .ಈ ಕುರಿತು ಕಾನೂನು ಹೋರಾಟ ಮಾಡುವು ದಾಗಿ ಅವರು ವಿವರಿಸಿದರು.
ಸಂಘದ ಚುನಾವಣೆ ರೈತರಿಗೆ ಮಾಹಿತಿ ನೀಡಿ ಚುನಾವಣೆ ನಡೆಸಬೇಕಾಗಿತ್ತು. ಆದರೆ ಮಾಹಿ ತಿಯೇ ನೀಡದೆ ಚುನಾವಣೆ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೀಣಾ ಕೃಷ್ಣ ಗೌಡ,ಮಂಜುನಾಥ್ ಶಿಲ್ಪ,ಮುನಿ ವೆಂಕಟಪ್ಪ,ಆಂಜನಪ್ಪ, ಶ್ರೀನಿವಾಸ್ ರೆಡ್ಡಿ,ನಾಗರಾಜ್, ಇದ್ದರು.