Bangalore: ಕ್ರಿಯಾಯೋಗವು ಮಾನವನ ವಿಕಸನಕ್ಕೆ ಒಂದು ಪರಿಣಾಮಕಾರಿ ವೈಜ್ಞಾನಿಕ ವಿಜ್ಞಾನವಾಗಿದೆ - ಸ್ವಾಮಿ ಚಿದಾನಂದಗಿರಿ
ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗಕ್ಕಾಗಿ ಹಿಮಾಲಯದ ಅಮರ ಗುರುಗಳಾದ ಮಹಾವತಾರ ಬಾಬಾಜಿ ಕ್ರಿಯಾ ಯೋಗವನ್ನು ಮತ್ತೆ ಹೇಗೆ ಬಳಕೆಗೆ ತಂದರು ಎಂಬುದನ್ನು ಸ್ವಾಮಿ ಚಿದಾನಂದಗಿರಿ ಅರಮನೆ ಮೈದಾನದಲ್ಲಿ ನಡೆದ ತಮ್ಮ ಆಧ್ಯಾತ್ಮಿಕ ಪ್ರವಚನದಲ್ಲಿ ವಿವರಿಸಿದರು…
ಬೆಂಗಳೂರು: ಅರಮನೆ ಮೈದಾನದಲ್ಲಿ ಕ್ರಿಯಾ ಯೋಗದ ಕುರಿತಾಗಿ ನಡೆದ ಸಮಾವೇಶದಲ್ಲಿ ವೈ.ಎಸ್.ಎಸ್. – ಎಸ್.ಆರ್.ಎಫ್.ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಚಿದಾನಂದಗಿರಿ ಸ್ಪೂರ್ತಿದಾಯಕ ಪ್ರವಚನ ನೀಡಿದರು. 2000ಕ್ಕಿಂತಲೂ ಅಧಿಕ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ಮಾತನಾಡಿದ ಚಿದಾನಂದಗಿರಿಯವರು, ಕ್ರಿಯಾ ಯೋಗವು ಮಾನವನ ವಿಕಸನಕ್ಕೆ ಒಂದು ಪರಿಣಾಮಕಾರಿ ವೈಜ್ಞಾನಿಕ ವಿಜ್ಞಾನವಾಗಿದೆ ಎಂಬ ವಿಷಯದ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು. ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಮೇರುಕೃತಿ 'ಯೋಗಿಯ ಆತ್ಮಕಥೆಯ' ಲೇಖಕರಾದ, ಜಗದ್ವಿಖ್ಯಾತ ಗುರುಗಳಾದ ಶ್ರೀ ಪರಮಹಂಸ ಯೋಗಾನಂದರ ಕಾರ್ಯಗಳ ಅಂತರ್ದೃಷ್ಟಿಯನ್ನು ಸ್ವಾಮೀಜಿ ಸಭಿಕರೊಡನೆ ಹಂಚಿಕೊಂಡರು. ಪಶ್ಚಿಮದಲ್ಲಿ 'ಯೋಗಪಿತಾಮಹ' ಎಂದು ಪ್ರಖ್ಯಾತರಾದ ಯೋಗಾನಂದರು ತಮ್ಮ ಈ ಮೂಲ ಕಾರ್ಯದ ಮೂಲಕ ಲಕ್ಷಾಂತರ ಅನ್ವೇಷಕರನ್ನು ಭಾರತದ ಈ ಪುರಾತನ ವಿಜ್ಞಾನಕ್ಕೆ ಪರಿಚಯಿಸಿದರು.
ಇದನ್ನೂ ಓದಿ: Conversion case: ಹೆಚ್ಚುತ್ತಿರುವ ಡಿಜಿಟಲ್ ಮತಾಂತರ; ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ!
"ನಾವು ಈಗ ಮಾನವನ ವಿಕಸನದ ಏರುಗತಿಯಲ್ಲಿದ್ದೇವೆ. ಯುವಪೀಳಿಗೆಯು ಈ ಪ್ರಪಂಚವನ್ನು ಉನ್ನತಮಟ್ಟದ ಪ್ರಜ್ಞೆಯ ಕಾಲದೆಡೆಗೆ ಕರೆದೊಯ್ಯುತ್ತದೆ. ಕ್ರಿಯಾ ಯೋಗದಂತಹ ಪುರಾತನ ವಿಜ್ಞಾನಗಳು ಈ ಪರಿವರ್ತನಾ ಯುಗದಲ್ಲಿ ಒಂದು ಮಹತ್ವದಪಾತ್ರವನ್ನು ವಹಿಸುತ್ತವೆ" ಎಂದು ಸ್ವಾಮೀಜಿ ಹೇಳಿದರು. ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗಕ್ಕಾಗಿ ಹಿಮಾಲಯದ ಅಮರ ಗುರುಗಳಾದ ಮಹಾವತಾರ ಬಾಬಾಜಿ ಕ್ರಿಯಾ ಯೋಗವನ್ನು ಮತ್ತೆ ಹೇಗೆ ಬಳಕೆಗೆ ತಂದರು ಎಂಬುದನ್ನು ಸ್ವಾಮೀಜಿ ವಿವರಿಸಿದರು.
‘ಕ್ರಿಯಾ ಯೋಗ'ವು ಧರ್ಮ ಮತ್ತು ಜಾತಿಯ ಬೇಧ ಭಾವವಿಲ್ಲದೆ ಎಲ್ಲಾ ಮನುಷ್ಯರೂ ಅಭ್ಯಾಸ ಮಾಡಬಹುದಾದ ಖಚಿತ ವಿಜ್ಞಾನವಾಗಿದೆ. ಮನುಷ್ಯನಲ್ಲಿ ಅಂತರ್ನಿಹಿತವಾಗಿರುವ ದಿವ್ಯ ಆಂತರಿಕ ಮೂಲದೊಡನೆ ನೇರ ಸಂಪರ್ಕವನ್ನೇರ್ಪಡಿಸುತ್ತಾ, ಕ್ರಿಯಾ ಯೋಗವು ಮೇಲ್ ಸ್ತರದ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಮತ್ತು ಆಂತರಿಕ ಶಾಂತಿಯ ಮೂಲವಾಗುತ್ತದೆ ಮತ್ತು ಎಲ್ಲ ಮಾನವೀಯ ಕಷ್ಟಗಳಿಗೆ ವಿಷಹಾರಿಯಾಗುತ್ತದೆ.’ ಎಂದುಸ್ವಾಮೀಜಿನುಡಿದರು.
ಪರಮಹಂಸ ಯೋಗಾನಂದರ ಬೋಧನೆಗಳು ಹಾಗೂ ಅವರ ಸಂಸ್ಥೆಯ ಬಗ್ಗೆ ಒತ್ತು ನೀಡುತ್ತಾ ಸ್ವಾಮೀಜಿ, ‘ಕ್ರಿಯಾಯೋಗವು ಎಲ್ಲ ರಾಷ್ಟ್ರಗಳಲ್ಲೂ ಪ್ರಸರಿಸುತ್ತದೆ ಮತ್ತು ಜಗತ್ತಿನ ಬದಲಾವಣೆಗೆ ಸಹಾಯ ಮಾಡುತ್ತದೆ’ ಎಂದು ಹೇಳಿದರು.