ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ತಿರುವು ಪಡೆದುಕೊಂಡಿದೆ. ಜೈದೇವ್ಗೆ ಗೌತಮ್ ಎಷ್ಟೇ ವಾರ್ನ್ ಮಾಡಿದ್ದರೂ ಬದಲಾದಂತಿಲ್ಲ. ತನ್ನ ಕುತಂತ್ರ ಬುದ್ದಿಯನ್ನು ಪ್ರದರ್ಶಿಸುತ್ತಲೇ ಇದ್ದಾನೆ. ಹನಿಮೂನ್ಗೆ ಹೊರಟ ಮಲ್ಲಿ ಮತ್ತು ಸುನಿಗೆ ಕಂಟಕ ಆಗಿದ್ದಾನೆ ಜೈದೇವ್ (Jaidev). ಸುನಿ ಕಥೆ ಮುಗಿಸಬೇಕು ಅಂತ ರೌಡಗಳನ್ನ ಛೂ ಬಿಟ್ಟಿದ್ದಾನೆ.
ಜೈದೇವ್ ಇನ್ನೂ ಮಾಸ್ಟರ್ ಪ್ಲ್ಯಾನ್
ಮಲ್ಲಿ ಮದುವೆ ಬಳಿಕ ಗೌತಮ್ ಕೆಲವು ಹನಿಮೂನ್ ಸ್ಥಳಗಳನ್ನು ಆಯ್ಕೆ ಮಾಡಿ ಇಟ್ಟಿದ್ದ. ಆಗ ಮಲ್ಲಿ ಕೂಡ ಒಂದು ಡಿಮ್ಯಾಂಡ್ ಇಟ್ಟಿದ್ದಾಳೆ. ನಾವು ಹನಿಮೂನ್ಗೆ ಹೋಗಬೇಕು ಅಂದರೆ ಭೂಮಿಕಾ ಹಾಗೂ ಗೌತಮ್ ಕೂಡ ಬರಬೇಕು ಎನ್ನುತ್ತಾಳೆ. ಇತ್ತ ಇವರು ಸಂತೋಷದಲ್ಲಿ ಇದ್ದರೆ, ಅತ್ತ ಜೈದೇವ್ ಇನ್ನೂ ಮಾಸ್ಟರ್ ಪ್ಲ್ಯಾನ್ ಮಾಡ್ತಾನೆ ಇದ್ದಾನೆ.
ಇದನ್ನೂ ಓದಿ: Reels Ajji: ಅಜ್ಜಿಯ ಕೊನೇ ರೀಲ್ಸ್ ಹಂಚಿಕೊಂಡ ಸೂರಜ್; ಮುತ್ತಜ್ಜಿ ಅಂತಿಮ ಆಸೆ ಏನಾಗಿತ್ತು?
ಸುನಿ ಕಥೆ?
ಹನಿಮೂನ್ಗೆ ಭೂಮಿಕಾ ಹಾಗೂ ಗೌತಮ್ ಕೂಡ ಹೋಗಿದ್ದಾರೆ. ತಮ್ಮ ಹನಿಮೂನ್ ದಿನಳನ್ನು ನೆಎಸಿಕೊಂಡು ಖುಷ್ ಆಗಿದ್ದಾರೆ. ಅತ್ತ ಆನಂದ್ ಬಳಿ ಮಾವ ಬಂದು ಜೈದೇವ್ ಕುಂತ್ರವನ್ನು ರಿವೀಲ್ ಮಾಡಿದ್ದಾನೆ. ಸುನಿಯನ್ನ ಮುಗಿಸಲು ರೌಡಿಗಳನ್ನು ಛೂ ಬಿಟ್ಟಿದ್ದಾನೆ ಎಂದು ಹೇಳಿದ್ದಾನೆ. ಈ ಸುದ್ದಿ ಕೇಳಿ ಆನಂದ್ ಶಾಕ್ ಆಗಿದ್ದಾನೆ.
ಇದೀಗ ಸುನಿ ಪ್ರಾಣಾಪಾಯಕ್ಕೆ ತೊಂದರೆ ಆಗುತ್ತಾ? ಗೌತಮ್ ಈ ಬಗ್ಗೆ ಕಣ್ಣಿಟ್ಟಿದ್ದಾನಾ? ಗೌತಮ್ ಮುಂದಿನ ನಡೆಯೇನು? ಆನಂದ್ ಈ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆ? ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದಕ್ಕೂ ಮುಂಚೆ ಗೌತಮ್ ಕೂಡ ಜೈದೇವ್ಗೆ ನಿನ್ನನ್ನು ನೀನು ಕಿಲಾಡಿ ಅಂದುಕೊಂಡಿದ್ದೆ. ಆದರೆ ನೀನೆ ದೊಡ್ಡ ಫೂಲ್ ಆಗಿಬಿಟ್ಟೆ. ಇನ್ನು ಹೋರಾಡಲ್ಲ. ಏನೇ ಇದ್ದರೂ ನೇರವಾಗಿ ಜಡ್ಜ್ಮೆಂಟ್ ಕೊಡ್ತೀನಿ ಎಂದು ಕೇಡಿ ಜೈದವ್ಗೆ ಎಚ್ಚರಿಕೆಯನ್ನು ನೀಡಿದ್ದ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಖಡಕ್ ವಾರ್ನಿಂಗ್ನ್ನೂ ಕೂಡ ನೀಡಿದ್ದಳು. ಇನ್ನು ಜೈದೇವ್ ಸುಮ್ಮನೆ ಇರುವ ವ್ಯಕ್ತಿಯಂತೂ ಅಲ್ಲ. ಮುಂಬರುವ ದಿನಗಳಲ್ಲಿ ಮಲ್ಲಿಯನ್ನು ಖೆಡ್ಡಾಗೆ ಬೀಳಿಸಲು ಜೈದೇವ್ ಮತ್ತೊಂದು ಪ್ಲಾನ್ ಹೆಣೆಯದೇ ಇರೋನು ಅಲ್ಲ. ಹೀಗಾಗಿ ಜೈದೇವ್ ಮುಂದಿನ ನಡೆಯ ಬಗ್ಗೆ ಕುತೂಹಲವಿದೆ.
ಇದನ್ನೂ ಓದಿ: Amruthadhaare Serial: ಹನಿಮೂನ್ ಹೊರಟಿರೋ ಮಲ್ಲಿ-ಸುನಿಗೆ ತಪ್ಪಿಲ್ಲ ಕೇಡಿ ಜೈದೇವ್ ಕಾಟ!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.