ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻರೇಗಿಸಿದ್ರೆ ಸುಮ್ನಿರೋಲ್ಲ ಕಾವ್ಯ, ತನ್ನವರನ್ನ ಬಿಟ್ಕೋಡಲ್ಲ ರಕ್ಷಿತಾ, ಮಗುಮನಸ್ಸಿನ ಹೃದಯವಂತ ರಘುʼ; ಈ ಮೂವರ ಬಗ್ಗೆ ʻಬಿಗ್ ಬಾಸ್‌ʼ ಹೇಳಿದ್ದೇನು?

Bigg Boss Kannada 12: ಫಿನಾಲೆ ಅಂತಿಮ ಘಟ್ಟದಲ್ಲಿರುವ ರಘು, ಕಾವ್ಯ ಮತ್ತು ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವದ ಬಗ್ಗೆ ಬಿಗ್ ಬಾಸ್ ತಂಡ ವಿಶ್ಲೇಷಣೆ ಮಾಡಿದೆ. ಮ್ಯೂಟೆಂಟ್ ರಘು ಅವರನ್ನು "ಮಗು ಮನಸ್ಸಿನ ಹೃದಯವಂತ" ಎಂದು ಕರೆದರೆ, ಕಾವ್ಯ ಅವರನ್ನು "ನಗೆ ಮಲ್ಲಿಗೆ" ಎಂದು ಬಣ್ಣಿಸಲಾಗಿದೆ. ಇನ್ನು ರಕ್ಷಿತಾ ಅವರನ್ನು "ಚೋಟ್ ಮೆಣಸಿನಕಾಯಿ" ಎಂದು ಬಿಗ್ ಬಾಸ್ ಕರೆದಿದ್ದಾರೆ.

ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ಫಿನಾಲೆಗೆ ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ ಇವೆ. ಯಾರು ವಿನ್ನರ್‌ ಆಗಲಿದ್ದಾರೆ ಎಂಬ ಕುತೂಹಲದಲ್ಲಿ ವೀಕ್ಷಕರಿದ್ದಾರೆ. 11 ಸೀಸನ್‌ಗಳಿಗಿಂತ ಈ ಸೀಸನ್‌ ಬೇರೆಯದೇ ಲೆವೆಲ್‌ನಲ್ಲಿ ಇದೆ. ಅಷ್ಟೊಂದು ಕ್ರೇಜ್‌ ಈ ಸಲ ಸಿಕ್ಕಿದೆ. ಸದ್ಯ ಮನೆಯೊಳಗೆ ಟಾಪ್‌ 6ರಲ್ಲಿ ಇರುವ ರಘು, ಕಾವ್ಯ, ರಕ್ಷಿತಾ ಶೆಟ್ಟಿ ಬಗ್ಗೆ ಬಿಗ್‌ ಬಾಸ್‌ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಈ ಮೂವರು ಸ್ಪರ್ಧಿಗಳ 5 ಗುಣಗಳನ್ನು ಹಂಚಿಕೊಂಡಿದ್ದಾರೆ.

ರಘುಗೆ ಬಿಗ್‌ ಬಾಸ್‌ ಹೇಳಿದ್ದೇನು?

ಮ್ಯುಟೆಂಟ್‌ ರಘು ಅವರಿಗೆ ಮಗುಮನಸ್ಸಿನ ಹೃದಯವಂತ ಎಂದು ಬಿಗ್‌ ಬಾಸ್ ಕರೆದಿದ್ದಾರೆ.



  1. ಕುಕಿಂಗ್‌ನಲ್ಲಿ ಮಾಸ್ಟರ್‌
  2. ಹೊರಗಷ್ಟೇ ಗಟ್ಟಿ ಮನಸ್ಸು ಮಗು ಥರ
  3. ಟಾಸ್ಕ್‌ ವಿಷ್ಯಕೆ ಬಂದರೆ ಹೀರೋ
  4. ಹೆಣ್ಮಕ್ಕಳ ಫೇವರೆಟ್‌ ಅಣ್ಣ
  5. ಮನೆ ಮಂದಿಗೆ ಫ್ರೀ ಜಿಮ್‌ ಟ್ರೇನರ್‌

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಕಾವ್ಯಗೆ ಬಿಗ್‌ ಬಾಸ್‌ ಹೇಳಿದ್ದೇನು?

ಕಾವ್ಯ ಅವರನ್ನು ನಗೆ ಮಲ್ಲಿಗೆ, ಪಕ್ಕದ್ಮನೆ ಹುಡುಗಿ ಎಂದು ಬಿಗ್‌ ಬಾಸ್‌ ಕರೆದಿದ್ದಾರೆ.



  1. ಫ್ರೆಂಡ್‌ಶಿಪ್‌ ಅಂದ್ರೆ ಪ್ರಾಣ
  2. ಎಲ್ಲರ ಮಾತನ್ನೂ ಸಿರೀಯಸ್ಸಾಗಿ ತಗೋತಾರೆ
  3. ಎಷ್ಟೇ ನೋವಿದರೂ ಮುಖದ ನಗು ಮಾಸೋದಿಲ್ಲ
  4. ರೇಗಿಸಿದ್ರೆ ಮಾತ್ರ ಸುಮ್ನಿರೋದಿಲ್ಲ
  5. ರೆಸ್ಪೆಕ್ಟ್‌ ಕೊಟ್ಟು ರೆಸ್ಪೆಕ್ಟ್‌ ಪಡ್ಕೊಳೋ ಪಾಲಿಸಿ

ರಕ್ಷಿತಾಗೆ ಬಿಗ್‌ ಬಾಸ್‌ ಹೇಳಿದ್ದೇನು?

ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವವನ್ನು ನೇರ ಮಾತು, ಖಾರ ಮಾತು ಎಂದು ಬಿಗ್‌ ಬಾಸ್‌ ಬಣ್ಣಿಸಿದ್ದಾರೆ.



  1. ಚೋಟ್‌ಮೆಣಸಿನ ಕಾಯಿ, ಹೆವಿ ಖಾರ
  2. ಅಡುಗೆ ಮಾಡೋಕೆ ಎವರ್‌ ರೆಡಿ
  3. ತುಂಬಾ ಫ್ರೆಂಡ್ಲಿ, ಅಷ್ಟೇ ಪೊಸೆಸ್ಸಿವ್
  4. ತನ್ನವರನ್ನು ಎಂದೂ ಬಿಟ್ಕೊಡಲ್ಲ
  5. ಬೇಜಾರಿಗೆ ಡೋಂಟ್‌ ಕೇರ್‌, ಕಾಳಜಿಗೆ ಹಾಜರ್‌