ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಗಿಲ್ಲಿ ನಟ (Gilli Nata) ಪ್ರಮುಖ ಹೈಲೈಟ್ ಆಗಿದ್ದಾರೆ. ಗಿಲ್ಲಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ನಿನ್ನೆ ಬಿಗ್ ಬಾಸ್ ಸ್ಪರ್ಧಿಗಳು ಹೇಳುವ ಮೂರು(Three Choices) ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಹೇಳಿದ್ದರು. ಹಾಗೇ ನಳ್ಳಿ ಮೂಳೆ ತಿನ್ನಬೇಕು ಅಂತ ಬೇಡಿಕೆ ಇಟ್ಟರು. ಇದೀಗ ನಳ್ಳಿ ಮೂಳೆ (Nalli Moole) ತಿಂದು ತೇಗಿದ್ದಾರೆ. ಆದರೆ ಒಂದು ಟ್ವಿಸ್ಟ್ ಇದೆ.
ನಳ್ಳಿ ಮೂಳೆ ತಿಂದು ತೇಗಿದ ಗಿಲ್ಲಿ
ಗಿಲ್ಲಿ ಸರದಿ ಬಂದಾಗ, ಮೊದಲನೇಯದು ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು ಎಂದು, ಎರಡನೇಯದು ಬಿಗ್ ಬಾಸ್ ಮನೆಯಲ್ಲಿರೋ ಆನೆ ಮೇಲೆ ಕುಳಿತುಕೊಳ್ಳಬೇಕು , ನಳ್ಳಿ ಮೂಳೆ ತಿನ್ನಬೇಕು ಅಂತ ಬೇಡಿಕೆ ಇಟ್ಟರು.
ಇದನ್ನೂ ಓದಿ: Bigg Boss Kannada 12: ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?
ಇದೀಗ ಟ್ವಿಟರ್ನಲ್ಲಿ ಗಿಲ್ಲಿ ಅವರು ನಲ್ಲಿ ಮೂಳೆ ತಿಂದು ತೇಗಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಖೈದಿ ಸಿನಿಮಾದಲ್ಲಿ ಕಾರ್ತಿ ಅವರು ಬಿರಿಯಾನಿ ತಿನ್ನೋ ದೃಶ್ಯಕ್ಕೆ ಹೋಲಿಕೆ ಮಾಡ್ತಿದ್ದಾರೆ ಫ್ಯಾನ್ಸ್. ಬ್ರೋ ಕ್ರಿಯೇಟ್ ಮಾಸ್ಟರ್ ಪೀಸ್ ಅಂತ ವೈರಲ್ ಮಾಡ್ತಿದ್ದಾರೆ. ಒಟ್ಟಾರೆಯಾಗಿ ಗಿಲ್ಲಿ ಕ್ರೇಜ್ ಜೋರಾಗಿದೆ.
ವೈರಲ್ ಪೋಸ್ಟ್
ರಕ್ಷಿತಾ ಅವರ ಬೇಡಿಕೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು.ನಾವು ಕರಾವಳಿ ಅವರು. ಮುದ್ರಕ್ಕಿಳಿಯುವ ಮೀನುಗಾರರು ಎದುರಿಸುವ ಸವಾಲುಗಳ ಬಗ್ಗೆ ಎಲ್ಲರ ಮುಂದೆ ಮಾತನಾಡಲು ಅವಕಾಶ ನೀಡಬೇಕು.
ಈ ಮೂಲಕ ಮೀನುಗಾರರಿಗೆ ವೇದಿಕೆ ಕಲ್ಪಿಸಿ ಎಂದು ಬೇಡಿಕೆ ಇಟ್ಟರು.ಎರಡನೇಯದು ಬಿಗ್ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು ಮತ್ತು ಅವರೊಂದಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದರು. ಮೂರನೇಯದು ಬಿಗ್ಬಾಸ್ ಮನೆಯಲ್ಲಿ ಕನ್ನಡ ನಾಟಕ ನೋಡಬೇಕೆಂದು ಹೇಳಿಕೊಂಡಿದ್ದಾರೆ. ಇನ್ನು ರಕ್ಷಿತಾ ಅವರ ಪ್ರಬುದ್ಧತೆಯ ಬಗ್ಗೆ ವೀಕ್ಷಕರು ಕೊಂಡಾಡಿದ್ದಾರೆ.
ಫ್ಯಾನ್ಸ್ ಮುಂದೆ ವೋಟ್ಗೆ ಮನವಿ
ಅಭಿಮಾನಿಗಳೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಮೆಚ್ಚಿನ ಫ್ಯಾನ್ಸ್ (Vote Fans) ಮುಂದೆ ವೋಟ್ಗೆ ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಗತ್ತು, ತಾಕತ್ತು ಬಗ್ಗೆ ವ್ಯಕ್ತಪಡಿಸಿದ್ದಾರೆ.ಹೊಸ ಪ್ರೋಮೋ ಔಟ್ ಆಗಿದೆ. ಅಭಿಮಾನಿಗಳ ಕೈಯಲ್ಲೇ ಸೋಲು ಗೆಲುವಿನ ನಿರ್ಧಾರ ಇದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್!
ಕಾವ್ಯ ಅವರು ಫ್ಯಾನ್ಸ್ ಬಂದಾಗ, ಖುಷಿ ಆಗ್ತಿದೆ ಎಂದು ಹೇಳಿದ್ದಾರೆ. ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ, ಯಾರೇ ಆಗಿರಲಿ ಅಷ್ಟೂ ಜನರನ್ನು ನಾನು ಮಟ್ಟ ಹಾಕಿದ್ದೀನಿ ಎಂದಿದ್ದಾರೆ ಧ್ರುವಂತ್, ಇನ್ನು ಧನುಷ್ ಅವರು, ಇಷ್ಟು ಕಷ್ಟ ಪಟ್ಟಿದ್ದೀನಿ, ಅಷ್ಟು ಕಷ್ಟ ಪಟ್ಟಿದ್ದೀನಿ ಅಂತ ಹೇಳಲ್ಲ. ಒಬ್ಬರು ಬೆಳಿಬೇಕು ಅಂದರೆ ಅವರು ಅವರೇ ಕಷ್ಟ ಪಡಬೇಕು. ನಿಮಗೆಲ್ಲರಿಗೂ ನಾನು ಫ್ಯಾನ್ ಆದೆ, ನೀವೆಲ್ಲ ನನಗೆ ಸ್ಟಾರ್ ಆದ್ರಿ ಎಂದಿದ್ದಾರೆ.