"ಉಸ್ತಾದ್ ಭಗತ್ ಸಿಂಗ್" (ustad bhagat singh) ಚಿತ್ರದ ಪೂರ್ವ ಬಿಡುಗಡೆ ಸಮಾರಂಭದಲ್ಲಿ ನಾಯಕಿ ಶ್ರೀಲೀಲಾ ಮತ್ತು ನಟ ರಂಗಸ್ಥಳಂ ಮಹೇಶ್ ನಡುವಿನ ಒಂದು ಸಣ್ಣ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾನುವಾರ(ಮಾರ್ಚ್ 15) ಸಂಜೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್ನಲ್ಲಿ ನಡೀತು. ಕಾರ್ಯಕ್ರಮದ ವೇಳೆ ಶ್ರೀಲೀಲಾ (sreeleela) ಅವರು ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ಆಚಂಟ ಕಡೆಗೆ ಅಸಮಾಧಾನದಿಂದ ತಿರುಗಿ ನೋಡಿದರು ಎನ್ನಲಾಗುತ್ತಿದೆ. ಈ ವಿಡಿಯೋ ಈಗ (Viral) ವೈರಲ್ ಆಗಿದೆ.
ಈ ಚಿತ್ರದ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಹೈದರಾಬಾದ್ನ ಪೊಲೀಸ್ ಮೈದಾನದಲ್ಲಿ ನಡೆದ ಸಮಾರಂಭವು ಮೆಗಾ ಅಭಿಮಾನಿಗಳಿಂದ ತುಂಬಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಪವನ್ ಕಲ್ಯಾಣ್ ವೇದಿಕೆಯಲ್ಲಿ ಮಾತನಾಡುತ್ತಿರುವಾಗ, ಶ್ರೀಲೀಲಾ ಇದ್ದಕ್ಕಿದ್ದಂತೆ ಹಿಂದೆ ತಿರುಗಿ ನಟ ರಂಗಸ್ಥಳಂ ಮಹೇಶ್ ಅವರನ್ನು ಗಂಭೀರವಾಗಿ ನೋಡಿದರು. ನಂತರ, ವೀಡಿಯೊದಲ್ಲಿ, ಮಹೇಶ್ ನಗುತ್ತಾ ಏನೋ ಹೇಳುತ್ತಿರುವುದು ಕಂಡುಬಂದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಊಹಾಪೋಹಗಳಿಗೆ ಕಾರಣವಾಯಿತು.
ಇದನ್ನೂ ಓದಿ: Shreya Ghoshal: ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!
ಶ್ರೀಲೀಲಾ ತಿರುಗಿ ನೋಡಿದಾಗ ಮಹೇಶ್ ಅವರು ಮೊದಲು ನಗುತ್ತಾ ನಿಂತಿದ್ದರೂ, ಕೂಡಲೇ ಮೌನಕ್ಕೆ ಶರಣಾದರು. ಇದನ್ನು ಗಮನಿಸಿದ ನೆಟ್ಟಿಗರು, ‘ಶ್ರೀಲೀಲಾ ಯಾಕೆ ಅಷ್ಟು ಕೋಪ ಮಾಡಿಕೊಂಡರು? ಇಬ್ಬರ ನಡುವೆ ಏನೋ ನಡೆದಿದೆ’ ಎಂದು ನಾನಾ ರೀತಿಯ ಕಥೆಗಳನ್ನು ಕಟ್ಟಲು ಆರಂಭಿಸಿದರು. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ವದಂತಿಗಳು ಹರಿದಾಡಿದ್ದವು.
ಈ ವಿವಾದದ ಬಗ್ಗೆ ಚಲನಚಿತ್ರ ಪತ್ರಕರ್ತರೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಜಗಳ ನಡೆದಿಲ್ಲ. ಯಾವುದೇ ವಿಚಿತ್ರ ಪರಿಸ್ಥಿತಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಶ್ರೀಲಿಲಿ ಮಹೇಶ್ಗೆ ತನ್ನ ಫೋನ್ ಹಿಡಿಯಲು ವೇದಿಕೆ ಕೊಟ್ಟರು. ವೇದಿಕೆಯಲ್ಲಿದ್ದಾಗ, ಅವರು ತಮ್ಮ ಫೋನ್ ಎಲ್ಲಿದೆ ಎಂದು ನೋಡಲು ಹಿಂತಿರುಗಿ ನೋಡಿದರು. ಅಲ್ಲಿ ಇನ್ನೇನೂ ಆಗಲಿಲ್ಲ" ಎಂದು ಅವರು ಟ್ವಿಟರ್ನಲ್ಲಿ ವಿವರಿಸಿದ್ದಾರೆ. ಈ ಸ್ಪಷ್ಟತೆಯೊಂದಿಗೆ, ಸಾಮಾಜಿಕ ಮಾಧ್ಯಮದಲ್ಲಿನ ಗದ್ದಲಕ್ಕೆ ಪೂರ್ಣ ವಿರಾಮ ಬಿದ್ದಿದೆ.
ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ‘ಗಬ್ಬರ್ ಸಿಂಗ್’ ಅಂತಹ ಬ್ಲಾಕ್ಬಸ್ಟರ್ ಸಿನಿಮಾ ನೀಡಿದ್ದ ಈ ಜೋಡಿ. ಇದೇ ಜೋಡಿ ಈಗ ‘ಉಸ್ತಾದ್ ಭಗತ್ ಸಿಂಗ್’ ಮೂಲಕ ಮತ್ತೆ ಒಂದಾಗಿದೆ, ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಹಾಡುಗಳಿಗೆ ಸಂಗೀತ ನೀಡಿದ್ದರೆ ಹಿನ್ನೆಲೆ ಸಂಗೀತವನ್ನು ಎಸ್ ತಮನ್ ನೀಡಿದ್ದಾರೆ.‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರ ‘ತೆರಿ’ಯ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: Dhurandhar 2 : ಕೇವಲ ಅಡ್ವಾನ್ಸ್ ಬುಕಿಂಗ್ನಿಂದಲೇ 120 ಕೋಟಿ ಗಳಿಕೆ ದಾಟಿದೆ ‘ಧುರಂಧರ್ 2’!
ಆದರೆ ಖಾತ್ರಿ ಇಲ್ಲ. ಸಿನಿಮಾದ ಟ್ರೈಲರ್, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಳ್ಳೆಯ ಪ್ರಚಾರ ದೊರಕಿಸಿಕೊಡುವ ಸಂಭವ ಇದೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.