ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Khushbu Sundar: ಉದಯನಿಧಿ ಸ್ಟಾಲಿನ್ ಅರೆಸ್ಟ್‌; ತ್ರಿಷಾಗೆ ಕ್ಷಮೆ ಕೇಳಿ ಎಂದು ಖುಷ್ಬು ಸುಂದರ್ ಪೋಸ್ಟ್‌

Khushbu Sundar: ಕಾವೇರಿ ಜಲ ವಿವಾದದ ಕುರಿತು ಭಾಷಣ ಮಾಡುವ ವೇಳೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದ ವೇಳೆ ಉದಯನಿಧಿ ನೀಡಿದ ಹೇಳಿಕೆಯನ್ನು ಹಲವರು ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಮಾಡಿದ ದ್ವಂದ್ವಾರ್ಥದ ಮಾತು ಎಂದು ಆರೋಪಿಸಿದ್ದರು. ಈ ಕುರಿತು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು.

ಖುಷ್ಬು ಸುಂದರ್

ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಮತ್ತು ನಟ ಉದಯನಿಧಿ ಸ್ಟಾಲಿನ್ ( Udhayanidhi Stalin) ಸಾರ್ವಜನಿಕ ಭಾಷಣದ ಸಂದರ್ಭದಲ್ಲಿ ಮಾಡಿದ ಹೇಳಿಕೆಗೆ ತೀವ್ರ ಟೀಕೆಗೆ ಗುರಿಯಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿ-ರಾಜಕಾರಣಿ ಖುಷ್ಬು ಸುಂದರ್ (Khushbu Sundar) ಕೂಡ ಅವರನ್ನು ಟೀಕಿಸಿದರು. ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಡಬಲ್‌ ಮೀನಿಂಗ್‌ ಬರುವ ರೀತಿಯಲ್ಲಿ ಮಾತನಾಡಿದ್ದರು. ಈ ವೇಳೆ ಸ್ಟಾಲಿನ್‌ ಅಸಭ್ಯವಾಗಿ ತ್ರಿಷಾ ಕುರಿತು ಮಾತನಾಡಿದ್ದಾರೆ ಎಂದು ಟಿವಿಕೆ (TVK) ಆರೋಪಿಸಿತ್ತು. ಪ್ರತಿಭಟನೆಗಳು ಹಾಗೂ ಆಕ್ರೋಶದ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಮುತ್ತಿಗೆ ಹಾಕಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖುಷ್ಬು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದೇವತೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ದೇವತೆ ದುರ್ಬಲರನ್ನು ಪರೀಕ್ಷಿಸುವುದಿಲ್ಲ - ಅವಳು ಆಯ್ಕೆಮಾಡಿದವರನ್ನು ಪರಿಷ್ಕರಿಸುತ್ತಾಳೆ" ಎಂಬ ಪಠ್ಯವಿದೆ. ಉದಯನಿಧಿ ಸ್ಟಾಲಿನ್ ಅವರ ಭಾಷಣವನ್ನು ಕೇಳಿದೆ. ಅದು ಅಸಭ್ಯ, ಅವಹೇಳನಕಾರಿಯಾಗಿತ್ತು.

ಇದನ್ನೂ ಓದಿ: Amruthadhaare Serial: ಕೂದಲನ್ನು ತೆಗೆಸಿದ ಭೂಮಿಕಾ; ಸಂಕಷ್ಟದ ಸಮಯದಲ್ಲೂ ತೂಕದ ಮಾತಿಗೆ ವೀಕ್ಷಕರು ಫಿದಾ

ಇನ್ನೇನು ನಿರೀಕ್ಷಿಸಲು ಸಾಧ್ಯ?

"ಮಹಿಳೆಯರನ್ನು ನಿಂದಿಸುವುದು, ಅವಮಾನಿಸುವುದು ಮತ್ತು ಅವಮಾನಿಸುವುದನ್ನು ರಾಜಕೀಯ ನಾಟಕದ ರೂಪವೆಂದು ಪರಿಗಣಿಸುವ, ತಮ್ಮ ನಿಷ್ಠಾವಂತ ಬೆಂಬಲಿಗರ ಚಪ್ಪಾಳೆ, ಶಿಳ್ಳೆ ಮತ್ತು ನಗುವಿನಲ್ಲಿ ಆನಂದಿಸುವ ಜನರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇದನ್ನು ನಾನು ಹೊರತುಪಡಿಸಿ ಬೇರೆ ಯಾರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ?" ಎಂದು ಬರೆದುಕೊಂಡಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಸಾರ್ವಜನಿಕ ಭಾಷಣವು ಮಿತಿಗಳನ್ನು ಹೊಂದಿರಬೇಕು. ಮಹಿಳೆಯರನ್ನು ಗೌರವಿಸಬೇಕು ಮತ್ತು ನಿಮ್ಮ ಇಚ್ಛೆಗೆ ತಕ್ಕಂತೆ ಆಟವಾಡಲು ಒಂದು ಕೈಗೊಂಬೆಯಾಗಿ ಪರಿಗಣಿಸಬಾರದು" ಎಂದು ಅವರು ಮತ್ತಷ್ಟು ಬರೆದಿದ್ದಾರೆ.

"ನಿಮ್ಮ ರಾಜಕೀಯ ಎದುರಾಳಿಯ ಕಾರ್ಯಕ್ಷಮತೆ, ದೃಷ್ಟಿಕೋನ ಅಥವಾ ನಾಯಕತ್ವಕ್ಕೆ ನೀವು ಹೊಂದಿಕೆಯಾಗಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಾಗ, ವೈಯಕ್ತಿಕ ಅವಮಾನ ಮತ್ತು ಅಸಭ್ಯತೆಯನ್ನು ಆಶ್ರಯಿಸುವುದು ಸರಿಯಲ್ಲ."

"ಸಾರ್ವಜನಿಕ ವೇದಿಕೆಯಲ್ಲಿ ಅವಮಾನಿಸಿದ್ದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸುವ ಧೈರ್ಯ ಮತ್ತು ಸಭ್ಯತೆ ಇದೆಯೇ ಎಂದು ನೋಡೋಣ" ಎಂದು ತ್ರಿಶಾಗೆ ಸಾರ್ವಜನಿಕ ಕ್ಷಮೆಯಾಚಿಸುವಂತೆ ಬರೆದುಕೊಂಡಿದ್ದಾರೆ .



ಏನಿದು ವಿವಾದ?

ನಿನ್ನೆ (ಸೋಮವಾರ) ತಂಜಾವೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಕಾವೇರಿ ವಿಚಾರವಾಗಿ ಮಾತನಾಡುತ್ತಿದ್ದಾಗ, ಉದಯನಿಧಿ ಸ್ಟಾಲಿನ್ ಅವರು ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಡಬಲ್‌ ಮೀನಿಂಗ್‌ ಬರುವ ರೀತಿಯಲ್ಲಿ ಮಾತನಾಡಿದ್ದರು. "ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ವಿಜಯ್ ಅವರಿಗೆ ಅದರ ಬಗ್ಗೆ ಯಾವುದೇ ಕಾಳಜಿಯಿಲ್ಲ" ಎಂದು ಹೇಳುವಾಗ ಅಭಿಮಾನಿಯೊಬ್ಬ ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದ. ಈ ವೇಳೆ ಸ್ಟಾಲಿನ್‌ ಅಸಭ್ಯವಾಗಿ ತ್ರಿಷಾ ಕುರಿತು ಮಾತನಾಡಿದ್ದಾರೆ ಎಂದು ಟಿವಿಕೆ ಆರೋಪಿಸಿತ್ತು.

ಇದನ್ನೂ ಓದಿ: Mrunal Thakur: ಎಐ ತಂತ್ರಜ್ಞಾನದ ಹಾವಳಿ; ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್

ಪ್ರತಿಭಟನೆಗಳು ಹಾಗೂ ಆಕ್ರೋಶದ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಮುತ್ತಿಗೆ ಹಾಕಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ

Yashaswi Devadiga

View all posts by this author