ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿರಣ್ ರಾಜ್

ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಅವರನ್ನು ಟಿವಿ ಪರೆದೆ ಮೇಲೆ ಮತ್ತೆ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ. ಇದರ ಬೆನ್ನಲ್ಲೇ ಕಿರಣ್ ರಾಜ್ ಕೂಡ ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿರಣ್ ರಾಜ್

Karna Serial

Profile Vinay Bhat Jun 17, 2025 3:23 PM

ತನ್ನ ಪ್ರೊಮೋ ಮೂಲಕವೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ (Karna Serial) ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿತ್ತು. ಡಾಕ್ಟರ್​ ಕರ್ಣ ಆಗಿ ಕಿರಣ್ ರಾಜ್ ಅವರನ್ನು ಟಿವಿ ಪರೆದೆ ಮೇಲೆ ಮತ್ತೆ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ.

ಝೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿ, ‘ಕರ್ಣ ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ.. ಶೀಘ್ರದಲ್ಲೇ, ಅದೇ ಪ್ರೀತಿ, ವಿಶ್ವಾಸದಿಂದ ಕರ್ಣ ನನ್ನ ಬರಮಾಡಿಕೊಳ್ತರಿ ಅಲ್ವಾ’ ಎಂದು ಬರೆದುಕೊಂಡಿದೆ.

ಇದರ ಬೆನ್ನಲ್ಲೇ ಕಿರಣ್ ರಾಜ್ ಕೂಡ ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ. ನೀವು ಕೊಟ್ಟ ರೆಸ್ಪಾನ್ಸ್​, ಪ್ರೀತಿಯಿಂದ ಒಳ್ಳೆಯ, ಉತ್ತಮವಾದ ಪ್ರಾಜೆಕ್ಟ್ ಅನ್ನು ಪ್ರೆಸೆಂಟ್ ಮಾಡಬೇಕು ಎಂದು ಕುತೂಹಲ ನಮ್ಮಲ್ಲಿ ಇತ್ತು. ಮೊದಲ ಎಪಿಸೋಡ್​ ಯಾವಾಗ ಲಾಂಚ್ ಆಗುತ್ತೆ. ವೀಕ್ಷಕರ ರೆಸ್ಪಾನ್ಸ್​ ಹೇಗಿರುತ್ತೆ ಎಂದು ಕಾಯುತ್ತಿದ್ದೇವು ಎಂದು ಹೇಳಿದ್ದಾರೆ.

ಕೆಲವು unfair ಕಾರಣಗಳಿಂದ ಧಾರಾವಾಹಿ ಪ್ರಸಾರ ಸಾಧ್ಯವಾಗಿಲ್ಲ. ಹೀಗಾಗಿ, ಎಲ್ಲಾ ವೀಕ್ಷಕರಿಗೂ ನಾವು ಕ್ಷಮೆ ಕೇಳುತ್ತೇವೆ. ನನಗೆ ಗೊತ್ತಿರುವ ಇನ್ಫರ್ಮೇಷನ್‌ ಪ್ರಕಾರ.. ಏನೋ ಲೀಗಲ್ ಕಾಂಪ್ಲಿಕೇಷನ್ಸ್ ಆಗಿದೆ. ಅದರಿಂದ ಹೊರಗೆ ಬರಲು ಪ್ರಯತ್ನ ಪಡುತ್ತಿದ್ದೇವೆ. ತಡವಾಗಬಹುದು. ಆದರೆ, ಖಂಡಿತವಾಗಿಯೂ ಬಂದೇ ಬರ್ತೀವಿ. ನಮಗೆ ಇನ್ನೊಂದಷ್ಟು ಸಮಯ ಕೊಡಿ. ಈ ಸಮಯದಲ್ಲಿ ನಮಗೆ ಸಪೋರ್ಟ್ ಮಾಡಿ. ಈ ಟೈಮ್‌ನಲ್ಲಿ ಹೀಗೆ ಆಗಬಾರದಾಗಿತ್ತು. ಆದರೆ, ಕೆಲವೊಂದು ನಮ್ಮ ಕೈಯಲ್ಲಿ ಇರಲ್ಲ. ನಿರ್ಮಾಪಕರು ಕೋಟಿ ಖರ್ಚು ಮಾಡಿ ಪ್ರಾಜೆಕ್ಟ್ ಮಾಡುತ್ತಾರೆ. ಎಲ್ಲಾ ಕಲಾವಿದರು ಶ್ರಮ ಹಾಕಿದ್ದಾರೆ. ಇದಕ್ಕೆಲ್ಲಾ ನ್ಯಾಯ ಸಿಕ್ಕೇ ಸಿಗುತ್ತದೆ. ವಿ ಡಿಸರ್ವ್ ಜಸ್ಟೀಸ್ ಫಾರ್ ಕರ್ಣ. ಆದಷ್ಟು ಬೇಗ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ಕಿರಣ್ ರಾಜ್‌ ತಿಳಿಸಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್​ಗೆ ಮತ್ತೊಂದು ಸಂಕಷ್ಟ: ಹೊಸ ಪಾತ್ರಧಾರಿ ಎಂಟ್ರಿ