ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾ ಹಿಂದೂ ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ಪಲಾಯನಕ್ಕೆ ಯತ್ನ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

Bangladesh Hindu police officer murder: ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. 2024 ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಆರೋಪಿಯಾಗಿರುವ ವಿದ್ಯಾರ್ಥಿ ನಾಯಕನನ್ನು ಯುರೋಪಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಕೊಲೆ ಆರೋಪಿ ಬಂಧನ

ನವದೆಹಲಿ, ಫೆ.19: ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ (Hindu Police Officer murder) ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. 2024 ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಆರೋಪಿಯಾಗಿರುವ ವಿದ್ಯಾರ್ಥಿ ನಾಯಕನನ್ನು ಯುರೋಪಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಬಂಧಿಸಲಾಗಿದೆ. ಆರೋಪಿಯನ್ನು ಅಹ್ಮದ್ ರಜಾ ಹಸನ್ ಮೆಹದಿ ಎಂದು ಗುರುತಿಸಲಾಗಿದೆ.

ಬಂಧನದ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ನಂತರ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಯಿತು. ಆರೋಪಿ ಮೆಹದಿ ಬಾಂಗ್ಲಾದೇಶದ ಹಬಿಗಂಜ್ ಜಿಲ್ಲೆಯ ವಿದ್ಯಾರ್ಥಿ ಕಾರ್ಯಕರ್ತನಾಗಿದ್ದಾನೆ. ಪೊಲೀಸ್ ಅಧಿಕಾರಿ ಎಸ್‌ಐ ಸಂತೋಷ್ ಚೌಧರಿ ಅವರನ್ನು ಆಗಸ್ಟ್ 5, 2024 ರಂದು ಗುಂಪೊಂದು ಹತ್ಯೆ ಮಾಡಿತ್ತು. ಅದೇ ದಿನ ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಂತರ ಆಗಿನ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯಾಕಾಂಡ; ಗುಂಡಿಟ್ಟು ಪತ್ರಕರ್ತನ ಕೊಲೆ

ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಮೆಹದಿಯನ್ನು ತಡೆದರು. ಮೂಲಗಳ ಪ್ರಕಾರ, ದೇಶ ಬಿಟ್ಟು ಹೋಗಲು ಯತ್ನಿಸುತ್ತಿದ್ದಾಗ ಅಧಿಕಾರಿಗಳು ಅವನನ್ನು ವಶಕ್ಕೆ ಪಡೆದು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದರು ಎಂದು ಹೇಳಲಾಗಿದೆ. ತನ್ನನ್ನು ಒಬ್ಬ ಪೊಲೀಸ್ ಅಧಿಕಾರಿ ದೈಹಿಕವಾಗಿ ನಿಂದಿಸಿದ್ದಾರೆಂದು ಮೆಹದಿ ಹೇಳಿಕೊಂಡಿದ್ದು, ಬಾಂಗ್ಲಾದೇಶಕ್ಕೆ ಹಿಂದಿರುಗಿದ ನಂತರ ತನ್ನ ಅನುಭವವನ್ನು ವಿವರಿಸುವುದಾಗಿ ಹೇಳಿದ್ದಾನೆ.

ನಾನು 40 ನಿಮಿಷಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದೆ. ನನ್ನ ಮೇಲೆ ಕೆಟ್ಟದಾಗಿ ವರ್ತಿಸಿದರು. ಪೊಲೀಸರು ನನ್ನನ್ನು ಜೈಲಿಗೆ ಹಾಕಲು ಬಯಸಿದ್ದರು. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿದ್ದರೆ, ರಾಯಭಾರ ಕಚೇರಿಯೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಬೇಕು ಎಂದು ನಾನು ಅವರಿಗೆ ಹೇಳಿದೆ. ಆದರೆ ಅವರು ಸಹಕರಿಸಲಿಲ್ಲ. ನಾನು ಈಗ ಸುರಕ್ಷಿತವಾಗಿದ್ದೇನೆ. ಪೊಲೀಸರು ನನ್ನ ಫೋನ್ ಅನ್ನು ಅನ್‌ಲಾಕ್ ಮಾಡಿ ಪರಿಶೀಲಿಸಿದರು. ನಾನು ದೇಶಕ್ಕೆ ಹಿಂದಿರುಗಿದ ನಂತರ ಎಲ್ಲವನ್ನೂ ವಿವರಿಸುತ್ತೇನೆ ಎಂದು ಹೇಳಿದ್ದಾನೆ.

2024ರಲ್ಲಿ ಎಸ್‌ಐ ಚೌಧರಿ ಹತ್ಯೆಯ ಹೊಣೆಯನ್ನು ಮೆಹದಿ ವಹಿಸಿಕೊಂಡಿದ್ದ. ಬಾಂಗ್ಲಾದೇಶದ ಪೊಲೀಸ್ ಠಾಣೆಯೊಳಗೆ ಕುಳಿತು ಈ ಹೇಳಿಕೆ ನೀಡಿದ್ದ. ಅವನು ಹೇಳಿಕೆ ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಕೊಲೆ ಆರೋಪಿ ಪಲಾಯನಗೈಯುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡು, ಮೆಹದಿ ಯುರೋಪ್‌ಗೆ ವಿಮಾನ ಹತ್ತುವ ಮೊದಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಅವನನ್ನು ತಡೆದರು. ಅಗತ್ಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ವಲಸೆ ಅಧಿಕಾರಿಗಳು ಅವನನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; 10 ದಿನಗಳ ಅಂತರದಲ್ಲಿ 3ನೇ ಪ್ರಕರಣ

ಆಗಸ್ಟ್ 5, 2024 ರಂದು ಬನಿಯಾಚಾಂಗ್ ಪೊಲೀಸ್ ಠಾಣೆಯಲ್ಲಿ ಗುಂಪು ಹಿಂಸಾಚಾರದ ಸಂದರ್ಭದಲ್ಲಿ ಎಸ್ಐ ಚೌಧರಿಯನ್ನು ಹತ್ಯೆ ಮಾಡಲಾಯಿತು. ನಂತರ ಅವರ ದೇಹವನ್ನು ಮರಕ್ಕೆ ನೇತು ಹಾಕಲಾಯಿತು. ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಅದೇ ದಿನ ಎಸ್ಐ ಹತ್ಯೆ ನಡೆದಿತ್ತು. ನಂತರ ನಡೆದದ್ದು ಗಲಭೆ ಮತ್ತು ಅವ್ಯವಸ್ಥೆ.

ನಂತರ ಬಾಂಗ್ಲಾದಲ್ಲಿ ಭಾರಿ ಹಿಂಸಾಚಾರ, ಬೆಂಕಿ ಹಚ್ಚುವುದು ಮತ್ತು ಲೂಟಿಗಳು ವರದಿಯಾದವು. ಹಿಂದೂಗಳ ಮೇಲೆ ದಾಳಿ ಮಾಡಲಾಯಿತು. ಅನೇಕ ಹಿಂದೂಗಳು ಹತ್ಯೆಯಾದರು. ಹಿಂದೂಗಳ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಲಾಯಿತು. ಆ ದಿನದ ಆರಂಭದಲ್ಲಿ, ಬನಿಯಾಚಾಂಗ್ ಪ್ರದೇಶದಲ್ಲಿ ಪ್ರತಿಭಟನಾಕಾರರೊಂದಿಗೆ ನಡೆದ ಘರ್ಷಣೆಯ ನಂತರ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಮೃತಪಟ್ಟರು.