ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯಾತ್ರೆ ಆರಂಭವಾದ ಕೇವಲ 5 ದಿನಗಳಲ್ಲಿ ಅಮರನಾಥ ಹಿಮಲಿಂಗ ಕರಗಿತೆ? ವೈರಲ್‌ ಆಯ್ತು ಫೋಟೋ!

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷದ ಬಳಿಕ ಇದೀಗ ಜಮ್ಮು ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯಕ್ಕೆ ಯಾತ್ರೆ ಪ್ರಾರಂಭವಾಗಿದೆ. ಅಮರನಾಥ ಗುಹಾ ದೇಗುಲಕ್ಕೆ ದಾಖಲೆ ಸಂಖ್ಯೆಯ ಭಕ್ತರು ತೆರಳುತ್ತಿದ್ದು, ಇಡೀ ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಸಂಗ್ರಹ ಚಿತ್ರ

ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷದ ಬಳಿಕ ಇದೀಗ ಜಮ್ಮು ಕಾಶ್ಮೀರದಲ್ಲಿರುವ (Jammu Kashmir) ಅಮರನಾಥ ದೇವಾಲಯಕ್ಕೆ ಯಾತ್ರೆ (Amarnath Yathra) ಪ್ರಾರಂಭವಾಗಿದೆ. ಅಮರನಾಥ ಗುಹಾ ದೇಗುಲಕ್ಕೆ ದಾಖಲೆ ಸಂಖ್ಯೆಯ ಭಕ್ತರು ತೆರಳುತ್ತಿದ್ದು, ಇಡೀ ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗ, ಬಾಬಾ ಬರ್ಫಾನಿ ಎಂದೂ ಕರೆಯಲ್ಪಡುವ, 90% ಕ್ಕಿಂತ ಹೆಚ್ಚು ಕರಗಿದೆ ಎಂದು ಹೇಳಲಾಗುತ್ತಿದೆ.

57 ದಿನಗಳ ಯಾತ್ರೆಯ ಕೇವಲ ಐದು ದಿನಗಳಲ್ಲಿ ಹಿಮಲಿಂಗವು ಬಹುತೇಕ ಕಣ್ಮರೆಯಾಗಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತೀರ್ಥಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಅಮರನಾಥ ಹಿಮಲಿಂಗವು ಕುಗ್ಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿರುವ ಜನರು ಹೇಳಿಕೊಂಡಿದ್ದಾರೆ. ಅಮರನಾಥ ಯಾತ್ರೆಯ ಸಮಯದಲ್ಲಿ ತೀರ್ಥಯಾತ್ರೆಯ ನಿರ್ವಹಣೆಯನ್ನು ಪ್ರಶ್ನಿಸಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಎಫ್) ನಾಯಕಿ ಇಲ್ತಿಜಾ ಮುಫ್ತಿ ಅವರು ಕರಗಿರುವ ಹಿಮಲಿಂಗದ ಫೋಟೋವನ್ನು ಹಂಚಿಕೊಂಡಿದ್ದಾರೆ. ಗುಹಾ ಯಾತ್ರೆಯ ಮೇಲಿನ ಪರಿಸರದ ಮೇಲಿನ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಫ್ತಿ, ಅಮರಾನಥ ಯಾತ್ರೆಗೆ ಕೇವಲ 10,000 ಜನರಿಗೆ ಮಾತ್ರ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಕುರಿತು ಬರೆದುಕೊಂಡಿದ್ದಾರೆ.



ಶತಮಾನಗಳಿಂದ ಬಾಬಾ ಬರ್ಫಾನಿ ಎಂದು ಪೂಜಿಸಲ್ಪಡುತ್ತಿದ್ದ ಪವಿತ್ರ ಮಂಜುಗಡ್ಡೆಯ ರಚನೆಯು ಕುಗ್ಗುತ್ತಿರುವುದು ಹಳೆಯ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹವಾಮಾನ ಬದಲಾವಣೆಯು ಪ್ರತಿ ವರ್ಷವೂ ಮೊದಲಿಗಿಂತ ಮೊದಲೇ ಮಂಜುಗಡ್ಡೆಯ ಲಿಂಗವನ್ನು ಕರಗಿಸುತ್ತಿದೆಯೇ? ಹೆಚ್ಚುತ್ತಿರುವ ಯಾತ್ರಿಕರ ಸಂಖ್ಯೆ ಮತ್ತು ದುರ್ಬಲವಾದ ಹಿಮಾಲಯನ್ ಪರಿಸರ ವ್ಯವಸ್ಥೆಯೊಳಗೆ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಲಿಂಗದ ಕುಗ್ಗುವಿಕೆಯನ್ನು ವೇಗಗೊಳಿಸುತ್ತಿದೆಯೇ? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಮೂರ್ಖತನದ ವರ್ತನೆ: ಅಮರನಾಥ ಯಾತ್ರೆಗೆ ತೆರಳಿ ಹಿಮನದಿಗೆ ಕೋಲಿನಿಂದ ಚುಚ್ಚಿದ ವ್ಯಕ್ತಿ! ನೆಟ್ಟಿಗರು ಕಿಡಿ

ಅಮರನಾಥ ಗುಹಾ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಮಾಲಯದಲ್ಲಿ ಸುಮಾರು 3,888 ಮೀಟರ್ (12,756 ಅಡಿ) ಎತ್ತರದಲ್ಲಿದೆ. ಇದು ಕಾಶ್ಮೀರ ಹಿಮಾಲಯದ ಲಿಡ್ಡರ್ ಕಣಿವೆಯ ಕೆಳಗೆ ನೆಲೆಸಿದೆ. ಯಾತ್ರಿಕರು ಸಾಂಪ್ರದಾಯಿಕ 48-ಕಿಮೀ ಪಹಲ್ಗಮ್ ಮಾರ್ಗ ಅಥವಾ ಕಡಿಮೆ ಆದರೆ ಕಡಿದಾದ 14-ಕಿಮೀ ಬಾಲ್ಟಾಲ್ ಮಾರ್ಗದ ಮೂಲಕ ದೇವಾಲಯವನ್ನು ತಲುಪಬೇಕಾಗುತ್ತದೆ. ಈ ವರ್ಷದ ಪ್ರತಿಸಲಕ್ಕಿಂತ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು, ದಿ ಹಿಂದೂ ಪತ್ರಿಕೆಯ ಪ್ರಕಾರ, ಜುಲೈ 5 ರ ವೇಳೆಗೆ 32,000 ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ. ಯಾತ್ರೆಯ ಎರಡನೇ ದಿನದಂದು ಮಾತ್ರ 20,000 ಕ್ಕೂ ಹೆಚ್ಚು ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದರು.

Vishakha Bhat Heggar

View all posts by this author