ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿವಾದಿತ ಭೋಜಶಾಲಾ ಸಂಕೀರ್ಣ ಹಿಂದೂ ದೇಗುಲ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ವಿವಾದಿತ ಭೋಜಶಾಲಾ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಭೋಜಶಾಲಾವನ್ನು ಹಿಂದೂ ದೇವಾಲಯವೆಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಘೋಷಿಸಿದೆ. ಹಿಂದೂ ಸಮುದಾಯವು ಧಾರ್‌ನಲ್ಲಿರುವ ಭೋಜಶಾಲಾವನ್ನು ವಾಗ್ದೇವಿ (ಸರಸ್ವತಿ ದೇವತೆ)ಗೆ ಸಮರ್ಪಿತವಾದ ದೇವಾಲಯ ಎಂದು ಹೇಳಿದ್ದರೆ ಮುಸ್ಲಿಂ ಸಮುದಾಯದವರು ಇದನ್ನು ಕಮಲ್ ಮೌಲಾ ಮಸೀದಿ ಎಂದು ವಾದ ಮಾಡಿದ್ದರು.

ಸಂಗ್ರಹ ಚಿತ್ರ

ಇಂದೋರ್‌: ವಿವಾದಿತ ಭೋಜಶಾಲಾ ಪ್ರಕರಣದಲ್ಲಿ (Bhojsala complex) ಮಹತ್ವದ ತೀರ್ಪು ಹೊರಬಿದ್ದಿದೆ. ಭೋಜಶಾಲಾವನ್ನು ಹಿಂದೂ ದೇವಾಲಯವೆಂದು ಮಧ್ಯಪ್ರದೇಶ ಹೈಕೋರ್ಟ್‌ನ ( Madhya Pradesh High Court) ಇಂದೋರ್ ಪೀಠ ಘೋಷಿಸಿದೆ. ಹಿಂದೂ ಸಮುದಾಯವು ಧಾರ್‌ನಲ್ಲಿರುವ ಭೋಜಶಾಲಾವನ್ನು ವಾಗ್ದೇವಿ (ಸರಸ್ವತಿ ದೇವತೆ)ಗೆ ಸಮರ್ಪಿತವಾದ ದೇವಾಲಯ ಎಂದು ಹೇಳಿದ್ದರೆ ಮುಸ್ಲಿಂ ಸಮುದಾಯದವರು ಇದನ್ನು ಕಮಲ್ ಮೌಲಾ ಮಸೀದಿ ಎಂದು ವಾದ ಮಾಡಿದ್ದರು. ಇದೀಗ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಧಾರ್‌ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವನ್ನು ದೇವತೆ ವಾಗ್ದೇವಿ ಸರಸ್ವತಿಗೆ ಅರ್ಪಿತವಾದ ದೇವಾಲಯವೆಂದು ತೀರ್ಪು ನೀಡಿದೆ.

ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠವು ಐತಿಹಾಸಿಕ ದಾಖಲೆಗಳು, ಪುರಾತತ್ತ್ವ ಶಾಸ್ತ್ರದ ವಸ್ತುಗಳು ಮತ್ತು ಸಾಹಿತ್ಯಿಕ ಪುರಾವೆಗಳು ಧಾರ್ ಅನ್ನು ಸಂಸ್ಕೃತ ಕಲಿಕೆಯ ಕೇಂದ್ರವನ್ನಾಗಿ ಮಾಡಿದ ಪರಮಾರ್ ಆಡಳಿತಗಾರ ರಾಜ ಭೋಜರೊಂದಿಗೆ ಸಂಬಂಧ ಹೊಂದಿರುವ ಸರಸ್ವತಿ ದೇವಾಲಯವಾಗಿ ಸ್ಮಾರಕದ ಧಾರ್ಮಿಕ ಸ್ವರೂಪವನ್ನು ಸ್ಥಾಪಿಸಿವೆ ಎಂದು ಅಭಿಪ್ರಾಯಪಟ್ಟಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಧಾರ್ ಜಿಲ್ಲೆಯಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಮಾಡಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಧಾರ್ ಜಿಲ್ಲಾಧಿಕಾರಿ ರಾಜೀವ್ ರಂಜನ್ ಮೀನಾ ಅವರು ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತದ ಸೆಕ್ಷನ್ 163ರ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿರ್ಬಂಧಿತ ಆದೇಶ ಹೊರಡಿಸಿದ್ದಾರೆ. ಈ ಆದೇಶಗಳು ಜೂನ್ 5ರ ವರೆಗೆ ಜಾರಿಯಲ್ಲಿರುತ್ತವೆ. ಪೂರ್ವಾನುಮತಿ ಇಲ್ಲದೆ ಮೆರವಣಿಗೆ, ಧರಣಿ, ಪ್ರದರ್ಶನ ಮತ್ತು ಐದಕ್ಕೂ ಹೆಚ್ಚು ಜನರು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ! ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

ಮಸೀದಿಗೆ ಪರ್ಯಾಯ ಭೂಮಿ

ಸ್ಮಾರಕದ ಮೇಲಿನ ಹಿಂದೂಗಳ ಹಕ್ಕನ್ನು ಗುರುತಿಸುವುದರ ಜೊತೆಗೆ, ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಹೈಕೋರ್ಟ್ ಏಕಕಾಲದಲ್ಲಿ ಪ್ರಯತ್ನಿಸಿತು. ಅರ್ಜಿ ಸಲ್ಲಿಸಿದರೆ ಮಧ್ಯಪ್ರದೇಶ ಸರ್ಕಾರವು ಮಸೀದಿ ನಿರ್ಮಾಣಕ್ಕಾಗಿ ಧಾರ್ ಜಿಲ್ಲೆಯೊಳಗೆ ಸೂಕ್ತವಾದ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಪರಿಗಣಿಸಬಹುದು ಎಂದು ಪೀಠ ಹೇಳಿದೆ. "ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಭದ್ರಪಡಿಸುವ ಸಲುವಾಗಿ, ಪ್ರತಿವಾದಿ ನಂ.1 ಮಸೀದಿ ನಿರ್ಮಾಣಕ್ಕಾಗಿ ಧಾರ್ ಜಿಲ್ಲೆಯೊಳಗೆ ಸೂಕ್ತವಾದ ಭೂಮಿಯನ್ನು ಮಂಜೂರು ಮಾಡಲು ಅರ್ಜಿಯನ್ನು ಸಲ್ಲಿಸಿದರೆ, ರಾಜ್ಯವು ಕಾನೂನಿನ ಪ್ರಕಾರ ಸದರಿ ಅರ್ಜಿಯನ್ನು ಪರಿಗಣಿಸಬಹುದು" ಎಂದು ನ್ಯಾಯಾಲಯ ಹೇಳಿದೆ.

Vishakha Bhat Heggar

View all posts by this author