ಜೈಪುರ, ಫೆ.23: ಭಾರತೀಯ ಜನತಾ ಪಕ್ಷದ (BJP) ಮಾಜಿ ಸಂಸದರೊಬ್ಬರು ರಾಜಸ್ಥಾನದಲ್ಲಿ ನಡೆದ ದಾನ ಕಾರ್ಯದ ವೇಳೆ ಮುಸ್ಲಿಂ ಸಮುದಾಯದವರಿಗೆ ಕಂಬಳಿಗಳನ್ನು ನೀಡಲು ನಿರಾಕರಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. 2014 ಮತ್ತು 2019ರ ಸಂಸತ್ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಖ್ಬೀರ್ ಸಿಂಗ್ ಜೌನಪುರಿಯ (Sukhbir Singh Jaunapuria), ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ನಿಂದಿಸುವ ಜನರಿಗೆ ಕಂಬಳಿಗಳನ್ನು ನೀಡುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ಈ ಘಟನೆ ಟೋಂಕ್ ಜಿಲ್ಲೆಯಲ್ಲಿ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾನ ಕಾರ್ಯಗಳಿಂದ ಪ್ರಸಿದ್ಧರಾಗಿರುವ ಜೌನಾಪುರಿಯಾ, ಹಳ್ಳಿಯೊಂದರಲ್ಲಿ ಉಚಿತ ಕಂಬಳಿ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದಾಗ ಕೆಲವು ಮುಸ್ಲಿಂ ವ್ಯಕ್ತಿಗಳನ್ನು ಗಮನಿಸಿದರು. ಅವರನ್ನು ನೋಡಿದ ಕೂಡಲೇ ಬಿಜೆಪಿ ನಾಯಕನ ವರ್ತನೆಯಲ್ಲಿ ಹಠಾತ್ ಬದಲಾವಣೆ ಉಂಟಾಯಿತು. ಅಲ್ಲಿ ಹಾಜರಿದ್ದ ಯಾವುದೇ ಮುಸ್ಲಿಂ ವ್ಯಕ್ತಿಗೆ ಕಂಬಳಿಗಳನ್ನು ನೀಡಲು ನಿರಾಕರಿಸುವುದರ ಜೊತೆಗೆ, ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಈಗಾಗಲೇ ನೀಡಲಾದ ಕಂಬಳಿಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.
ಮೋದಿಯನ್ನು ನಿಂದಿಸುವವರು ಇದಕ್ಕೆ ಅರ್ಹರಲ್ಲ. ತನ್ನ ನಿರ್ಧಾರದಿಂದ ಯಾರಿಗಾದರೂ ನೋವಾದರೆ ನನಗೇನು ತೊಂದರೆಯಿಲ್ಲ ಎನ್ನುತ್ತಾ ತಿರಸ್ಕಾರದ ಮನೋಭಾವವನ್ನು ಪ್ರದರ್ಶಿಸಿದರು. ಮುಸ್ಲಿಂ ಸಮುದಾಯದ ಜನರನ್ನು ಒಟ್ಟುಗೂಡಿಸಿದ್ದಕ್ಕಾಗಿ ಜೌನಪುರಿಯ ತಮ್ಮ ಬೆಂಬಲಿಗರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೊ ವೀಕ್ಷಿಸಿ:
ಬಿಜೆಪಿ ನಾಯಕನ ವರ್ತನೆಗೆ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದಾಗ, ಈ ಅಭಿಯಾನವು ಸರ್ಕಾರಿ ಕಾರ್ಯಕ್ರಮವಲ್ಲ. ತನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರಾಯೋಜಿಸಲ್ಪಟ್ಟಿದೆ ಎಂದು ಅವರು ಪ್ರತಿಪಾದಿಸಿದರು. ಇದರ ಫಲಾನುಭವಿ ಯಾರು ಎಂದು ಆಯ್ಕೆ ಮಾಡುವ ವಿವೇಚನೆಯನ್ನು ತಾನು ಹೊಂದಿರುವುದಾಗಿ ಅವರು ಹೇಳಿದರು.
AI ಶೃಂಗಸಭೆಯಲ್ಲಿ ಜಗತ್ತು ಭಾರತದ ಅದ್ಭುತ ಸಾಮರ್ಥ್ಯಗಳನ್ನು ಕಂಡಿದೆ; ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
ಜೌನಪುರಿಯ ಅವರು ಸತತ ಎರಡು ಬಾರಿ ಲೋಕಸಭೆಯಲ್ಲಿ ಟೋಂಕ್-ಸಾವಾ ಮಾಧೋಪುರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತಮ್ಮ ಲೋಕೋಪಕಾರಿ ಸೇವೆಗಳ ಭಾಗವಾಗಿ, ಬಿಜೆಪಿ ನಾಯಕ ಕಳೆದ ಒಂಭತ್ತು ವರ್ಷಗಳಿಂದ ನಿರ್ಗತಿಕರಿಗೆ ಉಚಿತ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇದನ್ನು ಒಮ್ಮೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಶ್ಲಾಘಿಸಿದ್ದರು.
ಸೈಬರ್ ವಂಚನೆಯ ಬಗ್ಗೆ ಎಚ್ಚರ ಇರಲಿ ಎಂದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ, ಫೆಬ್ರವರಿ 23ರಂದು ಮನ್ ಕಿ ಬಾತ್ ಕಾರ್ಯಕ್ರಮದ 131ನೇ ಸಂಚಿಕೆಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇದರಲ್ಲಿ, ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ದೇಶ ಮತ್ತು ಅದರ ನಾಗರಿಕರ ಸಾಧನೆಗಳನ್ನು ಎತ್ತಿ ತೋರಿಸುವ ಬಲವಾದ ವೇದಿಕೆಯಾಗಿದೆ ಎಂದು ಹೇಳಿದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಾಗತಿಕ ಅಲ್ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ದೇಶವು ಇದೇ ರೀತಿಯ ಸಾಧನೆಗೆ ಸಾಕ್ಷಿಯಾಯಿತು. ಅನೇಕ ದೇಶಗಳ ನಾಯಕರು, ಉದ್ಯಮ ಮುಖಂಡರು, ನಾವೀನ್ಯಕಾರರು ಮತ್ತು ಸ್ಟಾರ್ಟ್-ಅಪ್ ವಲಯಕ್ಕೆ ಸಂಬಂಧಿಸಿದ ಜನರು ಅಲ್ ಇಂಪ್ಯಾಕ್ಟ್ ಶೃಂಗಸಭೆಗಾಗಿ ಭಾರತ್ ಮಂಟಪದಲ್ಲಿ ಒಟ್ಟುಗೂಡಿದರು. ಭವಿಷ್ಯದಲ್ಲಿ ಜಗತ್ತು AI ಯ ಶಕ್ತಿಯನ್ನು ಹೇಗೆ ಬಳಸುತ್ತದೆ ಎಂಬುದರಲ್ಲಿ ಈ ಶೃಂಗಸಭೆಯು ಒಂದು ಮಹತ್ವದ ತಿರುವು ಎಂದು ಸಾಬೀತಾಗಿದೆ.