ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅನೇಕ ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಿಬಿಐ ತನಿಖೆಗೆ ಆಗ್ರಹಿಸಿದ ಸಹಪಾಠಿ; ಏನಿದು ಪ್ರಕರಣ?

Former Schoolmate Meets PM Modi: ದಶಕಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವರ ಶಾಲಾ ಮಾಜಿ ಸಹಪಾಠಿ ಆಗ್ರಹಿಸಿದ್ದಾರೆ. ವೊಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮಾಜಿ ಸಹಪಾಠಿ

ಮುಂಬೈ, ಸೆ. 13: ದಶಕಗಳಷ್ಟು ಹಳೆಯದಾದ ಭೂ ವಿವಾದದಲ್ಲಿ (Land Dispute Case) ಮಧ್ಯ ಪ್ರವೇಶಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಶಾಲಾ ಸಹಪಾಠಿ ಕೋರಿದ್ದಾರೆ. ಮೀರಾ ರೋಡ್‌ನ 81 ವರ್ಷದ ನಿವಾಸಿಯೊಬ್ಬರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ಸೆಪ್ಟೆಂಬರ್ 8ರಂದು ಪ್ರಧಾನಿಯನ್ನು ಭೇಟಿ ಮಾಡಿದ್ದ ಅವರು, ಮಹಾರಾಷ್ಟ್ರದ ಮುಂಬೈಯ ಭಯಂದರ್ ಈಸ್ಟ್‌ನಲ್ಲಿರುವ ದಶಕಗಳಷ್ಟು ಹಳೆಯದಾದ ಭೂ ವಿವಾದದ ಕುರಿತು ಸಿಬಿಐ ತನಿಖೆಗೆ ವಿನಂತಿಸಿದ್ದಾರೆ.

ವರದಿಗಳ ಪ್ರಕಾರ, ವೊಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಪ್ರಧಾನಿಯೊಂದಿಗಿನ ಭೇಟಿಯ ಸಮಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿದ ವೊಹ್ರಾ, ತಾವು ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಸತತವಾಗಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ವೊಹ್ರಾ ಅವರ ಪ್ರಕಾರ, ಈ ವಿವಾದವು ಭಯಂದರ್ ಈಸ್ಟ್‌ನ ನವಘರ್‌ನಲ್ಲಿರುವ ಸುಮಾರು 2,810 ಚದರ ಮೀಟರ್ ಭೂಮಿಗೆ ಸಂಬಂಧಿಸಿದ್ದಾಗಿದೆ. ತಾವು ಈ ಆಸ್ತಿಯನ್ನು 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಖರೀದಿಸಿದ್ದಾಗಿ ಅವರು ತಿಳಿಸಿದ್ದಾರೆ.

'ಭಾರತೀಯನಾಗಿ ಇಷ್ಟೊಂದು ಹೆಮ್ಮೆ ಎಂದೂ ಅನಿಸಿರಲಿಲ್ಲ': ಮೋದಿಯನ್ನು ಶ್ಲಾಘಿಸಿದ ರವಿ ಶಾಸ್ತ್ರಿ

ತಮ್ಮ ಈ ಆಸ್ತಿಯನ್ನು 2011ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು 81 ವರ್ಷದ ವೊಹ್ರಾ ಆರೋಪಿಸಿದ್ದಾರೆ. ಅವರು ತಮ್ಮ ಆರೋಪಗಳಲ್ಲಿ ಸ್ವಯಂ ಬಿಲ್ಡರ್ಸ್ ಮತ್ತು ಸೆವೆನ್ ಇಲೆವೆನ್ ಕನ್‌ಸ್ಟ್ರಕ್ಷನ್ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲು ಮಾಡಲಾಗಿದೆ ಮತ್ತು ಮೂಲ ಮಾಲಕರಿಗೆ ಈ ಬೆಳವಣಿಗೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದೂ ಸಹ ವೊಹ್ರಾ ಆರೋಪಿಸಿದ್ದಾರೆ.

ಈ ಭೂಮಿಯನ್ನು ಬಳಿಕ ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಅದರ ಸ್ವಾಧೀನವನ್ನು ಆ ಎರಡು ನಿರ್ಮಾಣ ಸಂಸ್ಥೆಗಳ ಹೆಸರಿನಲ್ಲಿ ತೋರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣವು ನ್ಯಾಯಾಲಯದ ಮುಂದೆಯಿದೆ.

ಪ್ರಧಾನಿ ಮೋದಿಯೊಂದಿಗಿನ ಭೇಟಿಯ ನಂತರ, ಈ ವಿಷಯವು ಗಮನ ಸೆಳೆಯಿತು. ಸೆಪ್ಟೆಂಬರ್ 16ರಂದು ವಿಚಾರಣೆಯನ್ನು ನಿಗದಿಪಡಿಸಲಾಗಿದ್ದು, ಸ್ವಯಂ ಬಿಲ್ಡರ್ಸ್ ಮತ್ತು ಸೆವೆನ್ ಇಲೆವೆನ್ ಕನ್‌ಸ್ಟ್ರಕ್ಷನ್ ಪ್ರತಿನಿಧಿಗಳು ಹಾಜರಿರುವಂತೆ ಸೂಚಿಸಲಾಗಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ 2015ರಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ದೂರಿನ ಹೊರತಾಗಿಯೂ, ಪರಿಹಾರಕ್ಕಾಗಿ ಕಂದಾಯ ಅಧಿಕಾರಿಗಳು, ಪುರಸಭೆ ಆಡಳಿತ ಮತ್ತು ಪೊಲೀಸ್ ಇಲಾಖೆಗಳನ್ನು ಸಂಪರ್ಕಿಸುವುದನ್ನು ಮುಂದುವರಿಸಿದೆ ಎಂದು ವೋಹ್ರಾ ಹೇಳಿದರು. ಪ್ರಧಾನಿ ಮೋದಿಯವರೊಂದಿಗಿನ ತಮ್ಮ ಭೇಟಿಯು ದೀರ್ಘಕಾಲದ ವಿವಾದವನ್ನು ಬಗೆಹರಿಸಲು ಸಹಾಯ ಮಾಡುತ್ತದೆ ಎಂದು ವೋಹ್ರಾ ಆಶಿಸಿದ್ದಾರೆ.