Ramgarh Coal Mine: ಅಕ್ರಮ ಗಣಿಗಾರಿಕೆ; ಸುರಂಗ ಕುಸಿದು ನಾಲ್ವರು ಸಾವು: ಹಲವರು ಟ್ರ್ಯಾಪ್
ಜಾರ್ಖಂಡ್ನ ರಾಮಗಡ ಜಿಲ್ಲೆಯ ಕುಜು ಔಟ್ಪೋಸ್ಟ್ ವ್ಯಾಪ್ತಿಯ ಕಾರ್ಮಾ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸುರಂಗ ಕುಸಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಹೆಚ್ಚಿನವರು ಒಳಗೆ ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ರಕ್ಷಣಾ ಕಾರ್ಚಾರಣೆ ನಡೆಯುತ್ತಿದೆ.


ರಾಂಚಿ: ಜಾರ್ಖಂಡ್ನ (Jharkhand) ರಾಮಗಡ ಜಿಲ್ಲೆಯ ಕುಜು ಔಟ್ಪೋಸ್ಟ್ ವ್ಯಾಪ್ತಿಯ ಕಾರ್ಮಾ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವೇಳೆ ಅವಘಡವೊಂದು ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಹೆಚ್ಚಿನವರು ಒಳಗೆ ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ನೆರವಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ (Ramgarh coal mine). ಸ್ಥಳದಲ್ಲಿ 4 ಮೃತದೇಹ ಪತ್ತೆಯಾಗಿದ್ದು, ಪೋಲಿಸರು 3 ದೇಹಗಳನ್ನು ಹೊರ ತೆಗೆದಿದ್ದಾರೆ ಎಂದು ಎಂದು ರಾಮಗಢದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಪರಮೇಶ್ವರ್ ಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಅಜಯ್ ಕುಮಾರ್ ಘಟನೆ ಬಗ್ಗೆ ಮಾತನಾಡಿ, "ಈ ಘಟನೆ CCL ಸಂಸ್ಥೆಯ ಕಟ್ಟಡವೊಂದರಲ್ಲಿ ಸಂಭವಿಸಿದೆ. ಅಕ್ರಮ ಗಣಿಗಾರಿಕೆಯನ್ನು ತಡೆಯಲು CCLಗೆ ತನ್ನದೇ ಆದ ಭದ್ರತಾ ಸಿಬ್ಬಂದಿ ಇದ್ದಾರೆ. ಮಾಹಿತಿ ಬಂದ ನಂತರ ನಾವು ಕಾರ್ಯಾಚರಣೆಗೆ ಸಹಕಾರ ನೀಡಿದ್ದೇವೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು CCL ಕಾರ್ಮಾ ಪ್ರಾಜೆಕ್ಟ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕುಜು ಔಟ್ಪೋಸ್ಟ್ ಇನ್ಚಾರ್ಜ್ ಆಶುತೋಷ್ ಕುಮಾರ್ ಸಿಂಗ್ ಪಿಟಿಐಗೆ ನೀಡಿದ ಮಾಹಿತಿಯಲ್ಲಿ, "ಇನ್ನೂ ಹೆಚ್ಚಿನ ಮಂದಿ ಒಳಗೆ ಸಿಕ್ಕಿಹಾಕಿಕೊಂಡಿರುವ ಶಂಕೆ ಇದೆ. ಅಕ್ರಮ ಗಣಿಗಾರಿಕೆಯಲ್ಲಿ ಗ್ರಾಮಸ್ಥರ ಕೈವಾಡವೂ ಇದೆ" ಎಂದು ಹೇಳಿದ್ದಾರೆ.
Jharkhand: In an incident, four villagers lost their lives and six others sustained serious injuries while illegally extracting coal at the CCL Karma Project in Ramgarh district pic.twitter.com/6BM4W70cHC
— IANS (@ians_india) July 5, 2025
ಈ ಸುದ್ದಿಯನ್ನೂ ಓದಿ: Fire Accident: ವಿಶಾಲ್ ಮೆಗಾ ಮಾರ್ಟ್ನಲ್ಲಿ ಬೆಂಕಿ ಅವಘಡ; ಇಬ್ಬರು ಸಾವು, ಹಲವರಿಗೆ ಗಾಯ
ರಾಜಕೀಯ ಸ್ವರೂಪ ಪಡೆದ ಘಟನೆ
ಈ ಬಗ್ಗೆ ಪ್ರತಿಪಕ್ಷ ನಾಯಕ ಹಾಗೂ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಮಾತನಾಡಿ ಘಟನೆಯ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. "ಇದು ಅಪಘಾತವಲ್ಲ, ಹತ್ಯೆ ಹಲವರು ಸಿಲುಕಿ ಹಾಕಿಕೊಂಡಿದ್ದಾರೆ. ಯಾರಿಗೂ ಏನು ಹಾನಿಯಾಗಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟ ಆಡಳಿತದ ಪರಿಣಾಮ ಈ ದುರಂತ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ನಡೆುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಹಳೆಯ ಕಟ್ಟಡವನ್ನು ಮುಚ್ಚಿದ್ದರೂ, ಕೋಲ್ ಮಾಫಿಯಾ ಮತ್ತೆ ಶುರುವಾಗಿದೆ" ಎಂದು ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ದೂರು ದಾಖಲಿಸಿಕೋಮಡಿರುವ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.