ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay's Rally Stampede: ಸಹಾಯಕ್ಕಾಗಿ ಕೂಗಿದರೂ ವಿಜಯ್‌ ನಮ್ಮತ್ತ ತಿರುಗಲಿಲ್ಲ; ನಟನ ವಿರುದ್ಧ ಗಂಭೀರ ಆರೋಪ

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿ ಸುಮಾರು 100 ಜನರು ಗಾಯಗೊಂಡ ಘಟನೆ ನಡೆದಿದೆ. ಶನಿವಾರ ಸಂಜೆ ವಿಜಯ್ ಅವರನ್ನು ನೋಡಲು ಸಾವಿರಾರು ಜನ ಸೇರಿದ್ದರು.

ವಿಜಯ್‌ ನಮ್ಮತ್ತ ತಿರುಗಲಿಲ್ಲ; ನಟನ ವಿರುದ್ಧ ಗಂಭೀರ ಆರೋಪ

-

Vishakha Bhat Vishakha Bhat Sep 28, 2025 4:00 PM

ಚೆನ್ನೈ: ತಮಿಳುನಾಡಿನ (Tamilnadu) ಕರೂರಿನಲ್ಲಿ ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರ (Vijay's Rally Stampede) ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿ ಸುಮಾರು 100 ಜನರು ಗಾಯಗೊಂಡ ಘಟನೆ ನಡೆದಿದೆ. ಶನಿವಾರ ಸಂಜೆ ವಿಜಯ್ ಅವರನ್ನು ನೋಡಲು ಸಾವಿರಾರು ಜನ ಸೇರಿದ್ದರು. ವಿಜಯ್ ಸಂಜೆ 7 ಗಂಟೆಯ ಸುಮಾರಿಗೆ ಆಗಮಿಸುವವರೆಗೂ ಜನಸಂದಣಿ ಹೆಚ್ಚಾಗಿತ್ತು. ಕಾಲ್ತುಳಿದ ಕುರಿತು ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಕಾಲ್ತುಳಿತದಲ್ಲಿ ಅನೇಕ ಜನರು ಮರಗಳು, ಛಾವಣಿಗಳು ಮತ್ತು ವಿದ್ಯುತ್ ತಂತಿಗಳ ಮೇಲೆ ಹತ್ತಿದರು, ಇದರಿಂದಾಗಿ ವಿದ್ಯುತ್ ಆಘಾತದ ಪ್ರಕರಣಗಳನ್ನು ತಪ್ಪಿಸಲು ಅಧಿಕಾರಿಗಳು ವಿದ್ಯುತ್ ತಂತಿಗಳನ್ನು ಕತ್ತರಿಸಬೇಕಾಯಿತು.

ವಿಜಯ್ ಬಂದಾಗ, ಜನರು ಒಬ್ಬರನ್ನೊಬ್ಬರು ತಳ್ಳಾಡಲು ಪ್ರಾರಂಭಿಸಿದರು ಮತ್ತು ವಿಜಯ್ ಅವರ ಗಮನ ಸೆಳೆಯಲು ಪ್ರಚಾರ ಬಸ್ ಮೇಲೆ ಚಪ್ಪಲಿಗಳನ್ನು ಎಸೆದರು. "ಮರಗಳು ಮತ್ತು ವಿದ್ಯುತ್ ತಂತಿಗಳನ್ನು ಹತ್ತಿದ್ದ ಕೆಲವರು ಚರಂಡಿಗಳಿಗೆ ಬಿದ್ದು ಸಿಲುಕಿಕೊಂಡರು. ಕೆಲವರು ಮೂರ್ಛೆ ಹೋದರು. ಸಿಲುಕಿಕೊಂಡಿದ್ದವರಿಗೆ ಸಹಾಯ ಮಾಡಲು ಆಂಬ್ಯುಲೆನ್ಸ್‌ಗಳು ಧಾವಿಸಿದವು, ಆದರೆ ಅವುಗಳಿಗೆ ದೊಡ್ಡ ಜನಸಂದಣಿಯನ್ನು ದಾಟಲು ಸಾಧ್ಯವಾಗಲಿಲ್ಲ" ಎಂದು ಪ್ರತ್ಯಕ್ಷದರ್ಶಿ ಹೇಳಿದರು. ನಂತರ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. "ವಿಜಯ್ ದಾರಿಯಲ್ಲಿ ಹೋಗುವಾಗ ಕೈ ಬೀಸಿದ್ದರೆ, ಜನಸಮೂಹ ಅವರನ್ನು ಹಿಂಬಾಲಿಸುತ್ತಿರಲಿಲ್ಲ. ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು. ವಿಜಯ್ ಅವರ ಕೂಗನ್ನು ನಿರ್ಲಕ್ಷಿಸಿದರು ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Vijay's Rally Stampede: 6 ಗಂಟೆ ವಿಳಂಬ... 30ಸಾವಿರಕ್ಕೂ ಅಧಿಕ ಜನ; ವಿಜಯ್‌ ರ‍್ಯಾಲಿಯಲ್ಲಿ ಅಷ್ಟಕ್ಕೂ ನಡೆದಿದ್ದೇನು?

ವಿಜಯ್‌ ಟ್ವೀಟ್‌ ಮಾಡಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ತಾವು ಭೇಟಿಯಾದ ಅನೇಕ ಜನರ ಮುಖಗಳನ್ನು ನೆನಪಿಸಿಕೊಂಡ ಅವರು, ಅವರ ವಾತ್ಸಲ್ಯ ಮತ್ತು ಕಾಳಜಿಯ ನೆನಪುಗಳು ತಮ್ಮ ಮನಸ್ಸಿನಲ್ಲಿ ಮಿನುಗುತ್ತಲೇ ಇರುತ್ತವೆ, ನಷ್ಟದ ನೋವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು. ಯಾವುದೇ ಸಾಂತ್ವನದ ಮಾತುಗಳು ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ದುಃಖಕ್ಕೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದರು.