ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharmishta Panoli: ಶರ್ಮಿಷ್ಠಾ ಪನೋಲಿ ಕೇಸ್‌ನಲ್ಲಿ ಟ್ವಿಸ್ಟ್- ದೂರು ದಾಖಲಿಸಿದ್ದವನೇ ಅರೆಸ್ಟ್‌

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ವಿರುದ್ಧ ಆಕ್ಷೇಪಾರ್ ಪೋಸ್ಟ್‌ಗಳ ಆರೋಪದ ಮೇಲೆ ದೂರು ದಾಖಲಿಸಿದ್ದ ವಜಾಹತ್ ಖಾನ್ ಕಾದ್ರಿ ಅವರನ್ನು ಕೋಲ್ಕತ್ತಾ ಪೊಲೀಸರು ಸೋಮವಾರ ಸಂಜೆ 7:05ಕ್ಕೆ ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಜೂನ್ 1ರಿಂದ ತಲೆಮರೆಸಿಕೊಂಡಿದ್ದ ಖಾನ್ ವಿರುದ್ಧ ದೆಹಲಿ, ಅಸ್ಸಾಂ ಸೇರಿದಂತೆ ಹಲವೆಡೆ ದೂರುಗಳು ದಾಖಲಾಗಿದ್ದವು.

ಶರ್ಮಿಷ್ಠಾ ಪನೋಲಿ ಕೇಸ್‌ನಲ್ಲಿ ಟ್ವಿಸ್ಟ್- ದೂರು ದಾಖಲಿಸಿದ್ದವನೇ ಅರೆಸ್ಟ್‌

Profile Rakshita Karkera Jun 10, 2025 10:26 AM

ಕೋಲ್ಕತ್ತಾ: ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ (Social Media Influencer) ಶರ್ಮಿಷ್ಠಾ ಪನೋಲಿ (Sharmistha Panoli) ವಿರುದ್ಧ ಆಕ್ಷೇಪಾರ್ ಪೋಸ್ಟ್‌ಗಳ ಆರೋಪದ ಮೇಲೆ ದೂರು ದಾಖಲಿಸಿದ್ದ ವಜಾಹತ್ ಖಾನ್ ಕಾದ್ರಿ (Wajahat Khan Qadri) ಅವರನ್ನು ಕೋಲ್ಕತ್ತಾ (Kolkata) ಪೊಲೀಸರು ಸೋಮವಾರ ಸಂಜೆ 7:05ಕ್ಕೆ ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಜೂನ್ 1ರಿಂದ ತಲೆಮರೆಸಿಕೊಂಡಿದ್ದ ಖಾನ್ ವಿರುದ್ಧ ದೆಹಲಿ, ಅಸ್ಸಾಂ ಸೇರಿದಂತೆ ಹಲವೆಡೆ ದೂರುಗಳು ದಾಖಲಾಗಿದ್ದವು. ಅಸ್ಸಾಂ ಪೊಲೀಸ್ ತಂಡವು ತನಿಖೆಗಾಗಿ ಕೋಲ್ಕತ್ತಾಕ್ಕೆ ಭೇಟಿ ನೀಡಿತ್ತು.

ಬಂಧನದ ಕಾರಣ

ಖಾನ್ ವಿರುದ್ಧ, ಸಾಮಾಜಿಕ ಮಾಧ್ಯಮದಲ್ಲಿ “ದುರುದ್ದೇಶಪೂರಿತ ಮತ್ತು ಭಾವನೆಗಳನ್ನು ಕೆರಳಿಸುವ” ವಿಷಯವನ್ನು ಪೋಸ್ಟ್ ಮಾಡಿ, ಒಂದು ಧಾರ್ಮಿಕ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1)(a), 299, 352, 353(1)(c)ರಡಿ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಟೆಕ್ಟಿವ್ ಇಲಾಖೆಯ ARS ತಂಡವು ದಿಘಾ ಮತ್ತು ಹೌರಾದಲ್ಲಿ ದಾಳಿ ನಡೆಸಿ ಖಾನ್‌ನನ್ನು ಬಂಧಿಸಿತು. ಇಂದು (ಮಂಗಳವಾರ) ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು.

ರಾಜಕೀಯ ಆರೋಪ

ಕೇಂದ್ರ ಸಚಿವ ಮತ್ತು BJP ನಾಯಕ ಸುಕಾಂತ ಮಜುಂದಾರ್ ಎಕ್ಸ್‌ನಲ್ಲಿ, “ಖಾನ್‌ನ ಬಂಧನವು ಮಮತಾ ಬ್ಯಾನರ್ಜಿ ಅವರ ಹಳೆಯ ಓಲೈಕೆ ರಾಜಕೀಯಕ್ಕೆ ಒಂದು ಪಠ್ಯಪುಸ್ತಕ ಉದಾಹರಣೆ” ಎಂದು ಟೀಕಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರವು ಖಾನ್‌ನನ್ನು ರಕ್ಷಣೆಗಾಗಿ ಬಂಧಿಸಿದೆ ಎಂದು ಆರೋಪಿಸಿದ ಅವರು, “ಹಿಂದೂ ಸಮುದಾಯದ ವಿರುದ್ಧ ವಿಷವನ್ನು ಕಾರಿದ ರಾಡಿಕಲ್ ವ್ಯಕ್ತಿಯನ್ನು ರಕ್ಷಿಸಲು ಈ ತಂತ್ರವನ್ನು ರೂಪಿಸಲಾಗಿದೆ. ಮಾ ಕಾಮಾಖ್ಯಾ ವಿರುದ್ಧ ಕೀಳುಮಾತುಗಳನ್ನಾಡಿದ ಖಾನ್‌ನನ್ನು ತಕ್ಷಣ ಅಸ್ಸಾಂ ಪೊಲೀಸರಿಗೆ ಒಪ್ಪಿಸಿ, ದ್ವೇಷ ಪ್ರಚಾರಕರನ್ನು ರಕ್ಷಿಸಲು ಕಚೇರಿಯ ದುರ್ಬಳಕೆಯನ್ನು ನಿಲ್ಲಿಸಿ” ಎಂದು ಮಮತಾರವರಿಗೆ ಒತ್ತಾಯಿಸಿದ್ದಾರೆ.

ಶರ್ಮಿಷ್ಠಾ ಪನೋಲಿ ಪ್ರಕರಣ

ಮೇ 15, 2025ರಂದು ಖಾನ್, ಗಾರ್ಡನ್ ರೀಚ್ ಪೊಲೀಸ್ ಠಾಣೆಯಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ವಿರುದ್ಧ “ದುರುದ್ದೇಶಪೂರಿತ ಮತ್ತು ಸುಳ್ಳು” ವಿಷಯದ ಪೋಸ್ಟ್‌ಗಳಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಮತ್ತು ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡಿದೆ ಎಂದು ದೂರು ದಾಖಲಿಸಿದ್ದರು. ಇದರಿಂದ ಕೋಲ್ಕತ್ತಾ ಮತ್ತು ದಕ್ಷಿಣ 24 ಪರಗಣಾದಲ್ಲಿ ಪನೋಲಿ ವಿರುದ್ಧ ಒಟ್ಟು 12ಕ್ಕೂ ಹೆಚ್ಚು FIRಗಳು ದಾಖಲಾದವು. ಗುರಗಾಂವ್‌ನಿಂದ ಬಂಧಿತರಾದ ಶರ್ಮಿಷ್ಠಾರನ್ನು ಕೋಲ್ಕತ್ತಾಕ್ಕೆ ಕರೆತರಲಾಯಿತು ಮತ್ತು ಸ್ಥಳೀಯ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

ಜೂನ್ 5ರಂದು ಶರ್ಮಿಷ್ಠಾರ ಕುಟುಂಬವು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಖಾನ್‌ ದೂರಿನಲ್ಲಿ ಯಾವುದೇ ಗಂಭೀರ ಅಪರಾಧದ ಸುಳಿವಿಲ್ಲ ಎಂದು ಗಮನಿಸಿದ ಕೋರ್ಟ್ ಶರ್ಮಿಷ್ಠಾರಿಗೆ ತಾತ್ಕಾಲಿಕ ಜಾಮೀನು ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಿತು.