Readers Colony: ಅರ್ಥಪೂರ್ಣ ಅಂಕಣ
ಶಿಶಿರ್ ಹೆಗಡೆಯವರ ‘ಶಿಶಿರಕಾಲ’ ಅಂಕಣ (ಜೂ.20) ತುಂಬಾ ಅರ್ಥಪೂರ್ಣವಾಗಿದೆ. ಕಾಲಾನು ಕಾಲಕ್ಕೆ ನಾವು ಅನೇಕ ಅದ್ಭುತ ವೈಜ್ಞಾನಿಕ ಸಾಧನೆಗಳನ್ನು ಕಾಣುತ್ತ ಬಂದಿದ್ದರೂ, ಜೀವದ ಅಸ್ತಿತ್ವದ ಕುರಿತಾದ ಮತ್ತು ಬ್ರಹ್ಮಾಂಡದ ಬಗೆಗಿನ ಇನ್ನೂ ಅನೇಕ ಪ್ರಶ್ನೆಗಳಿಗೆ ಅದು ಉತ್ತರಗಳನ್ನು ಹುಡುಕು ವುದು ಬಾಕಿಯಿದೆ.


ಶಿಶಿರ್ ಹೆಗಡೆಯವರ ‘ಶಿಶಿರಕಾಲ’ ಅಂಕಣ (ಜೂ.20) ತುಂಬಾ ಅರ್ಥಪೂರ್ಣವಾಗಿದೆ. ಕಾಲಾನು ಕಾಲಕ್ಕೆ ನಾವು ಅನೇಕ ಅದ್ಭುತ ವೈಜ್ಞಾನಿಕ ಸಾಧನೆಗಳನ್ನು ಕಾಣುತ್ತ ಬಂದಿದ್ದರೂ, ಜೀವದ ಅಸ್ತಿತ್ವದ ಕುರಿತಾದ ಮತ್ತು ಬ್ರಹ್ಮಾಂಡದ ಬಗೆಗಿನ ಇನ್ನೂ ಅನೇಕ ಪ್ರಶ್ನೆಗಳಿಗೆ ಅದು ಉತ್ತರಗಳನ್ನು ಹುಡುಕುವುದು ಬಾಕಿಯಿದೆ.
‘ಜೀವ’ ಎಂದರೇನು, ಅದು ಉಂಟಾದದ್ದು ಹೇಗೆ, ಪ್ರಜ್ಞೆಯು ನಮ್ಮನ್ನು ರೂಪಿಸುವುದು ಹೇಗೆ ಎಂಬುದು ವಿಜ್ಞಾನಕ್ಕೆ ಇನ್ನೂ ಬಹುಶಃ ಗೋಚರವಾಗಿಲ್ಲ. ನಮ್ಮ ಅನೇಕ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಕ್ರಿಯೆಗಳು ಹೇಗೆ ಜೋಡಣೆಯಾಗುತ್ತವೆ, ಅವು ನಮ್ಮ ಮನಸ್ಸಿನಲ್ಲಿ ಹೇಗೆ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ? ಎಂಬೆಲ್ಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವಿಲ್ಲ.
ಆದರೆ ಈ ಪರಿಸ್ಥಿತಿಯನ್ನು ನಾವು ಸರಳವಾಗಿ ಸ್ವೀಕರಿಸಿ, ನಮ್ಮ ವಿಚಾರಗಳಲ್ಲಿ, ಅನುಭವಗಳಲ್ಲಿ ನವೀನತೆಯನ್ನು ಕಂಡುಕೊಳ್ಳುತ್ತಿದ್ದೇವೆ. ‘ಸಮಯ’ ಎಂಬ ವಿಚಾರ ಕೂಡ ಅನೇಕ ತತ್ವಾಂಶಗಳ ಜಟಿಲತೆಯಲ್ಲಿ ಸಿಲುಕಿಕೊಂಡಿದೆ. ಸಮಯವು ಹೇಗೆ ವಿಸ್ತಾರಗೊಂಡಿತು ಮತ್ತು ಕಣ ಪ್ರಪಂಚ ದೊಂದಿಗೆ ಅದಕ್ಕಿರುವ ಸಂಬಂಧವೇನು ಎಂಬುದರ ಬಗ್ಗೆ ವಿವಿಧ ವೈಜ್ಞಾನಿಕ ತತ್ವಗಳು, ಕ್ವಾಂಟ ಮ್ ಸಿದ್ಧಾಂತಗಳು ವಿವರಿಸುತ್ತವೆ.
ಇದನ್ನೂ ಓದಿ: Vishweshwar Bhat Column: ವಿಮಾನದೊಳಗಿನ ವಾತಾವರಣ
ಆದರೆ ಯಾವ ಇಷ್ಟಾರ್ಥವಾಗಿದ್ದರೂ ನಾವು ದಿನನಿತ್ಯವೂ ಅವಶ್ಯಕತೆಯ ಪ್ರಕಾರ ಸಮಯವನ್ನು ಅನುಭವಿಸುತ್ತೇವೆ. ನಿದ್ರೆಯು ಕೂಡ ಒಂದು ಮಹತ್ವದ ವಿಚಾರ. ನಿದ್ರೆಯ ಸಮಯದಲ್ಲಿ ನಮ್ಮ ದೇಹವು ಪುನರುಜ್ಜೀವನಗೊಳ್ಳುವುದರ ಜತೆಗೆ ಮನಸ್ಸು ಕೂಡ ವಿವಿಧ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುತ್ತದೆ. ಕಣ್ಣು ಮುಚ್ಚಿದಾಗ ಕನಸು ಕಾಣುವುದು ಸೇರಿದಂತೆ ಜೈವಿಕ ಚಟುವಟಿಕೆಯ ಹಲವು ಅನುಭವಗಳೂ ಆಗುತ್ತವೆ.
ಇದು ವಿಜ್ಞಾನದ ವಿವರಣೆಗೆ ನಿಲುಕದ ನಿಗೂಢ ವಿಷಯ. ಆದ್ದರಿಂದ, ಅಂಕಣದಲ್ಲಿ ಉಲ್ಲೇಖಿಸಿ ರುವಂತೆ ಕೆಲವು ಪ್ರಶ್ನೆಗಳಿಗೆ ‘ಇದಮಿತ್ಥಂ’ ಎನ್ನುವ ಮಟ್ಟಿಗೆ ಉತ್ತರ ಸಿಕ್ಕರೆ, ಮತ್ತೊಂದೆಡೆ ಪ್ರತಿ ಯೊಂದು ಪ್ರಶ್ನೆಯ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಪ್ರಶ್ನೆ ಉದ್ಭವಿಸುತ್ತದೆ. ಅದು ನಮಗೆ ಹೊಸ ದಾರಿಯನ್ನು ತೋರುತ್ತದೆ.
ಹೀಗಾಗಿ, ಈ ವಿವರಣೆಗಳ ಪೈಕಿ ಯಾವುದೂ ನಮ್ಮ ಗ್ರಹಿಕೆಗೆ ಬಹುದೂರದಲ್ಲಿರುವಂತೆ ಕಾಣ ಬಹುದು; ಆದರೆ ನಾವು ಯಾವುದೇ ವಿಚಾರಗಳನ್ನು ಸಾರ್ಥಕವಾಗಿ ಪರೀಕ್ಷಿಸಿದಾಗ ಸೀಮಿತ ತತ್ವ ಗಳನ್ನು ಪಡೆದುಕೊಳ್ಳಬಹುದು.
- ಶಿವಯೋಗಿ ಎಂ.ವಿ., ರಾಂಪುರ
ಮನೆಯಲ್ಲೇ ಪ್ರವಾಸ
ಪ್ರವಾಸಿ ಪ್ರಪಂಚ’ ಪತ್ರಿಕೆಯು ರಂಜನೀಯವಾಗಿದ್ದು ಹಲವು ಉಪಯುಕ್ತ ವಿಷಯಗಳನ್ನು ನೀಡುತ್ತಿದೆ. ವಿವಿಧೆಡೆಯ ಪ್ರಸಿದ್ಧ ದೇವಾಲಯಗಳು, ವಿಹಾರ ತಾಣಗಳನ್ನು ನೋಡಬೇಕು, ದೇಶ-ವಿದೇಶಗಳನ್ನು ಸುತ್ತಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಕಾರ್ಯದ ಒತ್ತಡ ದಿಂದಾಗಿ ಎಲ್ಲಾ ಕಡೆಯೂ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ, ಜತೆಗೆ ನಮ್ಮಂಥ ಗೃಹಿಣಿಯರಿಗೆ ಮಾಹಿತಿಯ ಕೊರತೆ. ಇಷ್ಟಾಗಿಯೂ ವಿಭಿನ್ನ ತಾಣಗಳ ವಿಶೇಷತೆ, ಜೀವ ಶೈಲಿ, ಆಹಾರಪದ್ಧತಿ, ಸಂಸ್ಕೃತಿ, ಅಲ್ಲಿಗೆ ತಲುಪಲು ಇರುವ ಮಾರ್ಗೋಪಾಯಗಳು, ತಗಲುವ ವೆಚ್ಚ ಇತ್ಯಾದಿಗಳನ್ನು ತಿಳಿಯುವ ಕುತೂಹಲ ನಮಗೆ.
ಇವೆಲ್ಲ ವನ್ನೂ ‘ಪ್ರವಾಸಿ ಪ್ರಪಂಚ’ ವರ್ಣರಂಜಿತ ಪತ್ರಿಕೆ ನಮಗೆ ಒದಗಿಸುತ್ತಿದೆ. ‘ದೇಶ ಸುತ್ತು, ಕೋಶ ಓದು’ ಎಂದಿದ್ದಾರೆ ಹಿರಿಯರು. ಮನೆಯಲ್ಲೇ ಕುಳಿತು ಪ್ರಪಂಚವನ್ನು ನೋಡುವ ಅವಕಾಶವನ್ನು ಒದಗಿಸುತ್ತಿರುವ ‘ಪ್ರವಾಸಿ ಪ್ರಪಂಚ’ ತಂಡಕ್ಕೆ ಧನ್ಯವಾದಗಳು.
- ಮಾಲಿನಿ ಆರ್.ಪಿ., ಬೆಂಗಳೂರು