ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಓದುಗರ ಓಣಿ

Readers Colony: ಸಂವಿಧಾನಕ್ಕೆ ಅಪಚಾರ

Readers Colony: ಸಂವಿಧಾನಕ್ಕೆ ಅಪಚಾರ

ಭಾರತ ಸಂವಿಧಾನದ 164(1) ನೇ ವಿಧಿ ಅತ್ಯಂತ ಸ್ಪಷ್ಟವಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿ ಯನ್ನು ನೇಮಿಸುತ್ತಾರೆ ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಸಚಿವರನ್ನು ನೇಮಿಸಲಾಗು ತ್ತದೆ. ಅಂದರೆ ಸಂಪುಟ ರಚನೆ, ಸಚಿವರ ಆಯ್ಕೆ, ಖಾತೆ ಹಂಚಿಕೆ ಸಂಪೂರ್ಣವಾಗಿ ಮುಖ್ಯಮಂತ್ರಿಯ ಸಂವಿಧಾನಾತ್ಮಕ ಹಕ್ಕು ಮತ್ತು ಹೊಣೆಗಾರಿಕೆ. ಆದರೆ ಕರ್ನಾಟಕದಲ್ಲಿ ನಡೆದಿರುವುದು ಇದಕ್ಕೆ ತದ್ವಿರುದ್ಧ, ಸಂವಿಧಾನ ವಿರೋಧಿ ಬೆಳವಣಿಗೆ.

Readers Colony: ನೀಟ್ ಸುಧಾರಣೆ ನಿರೀಕ್ಷೆ

Readers Colony: ನೀಟ್ ಸುಧಾರಣೆ ನಿರೀಕ್ಷೆ

ಈ ವರ್ಷದ ನೀಟ್- ಯುಜಿ ಪ್ರಶ್ನೆ ಪತ್ರಿಕೆಯ ಸೋರಿಕೆ ಮತ್ತು ನಂತರದಲ್ಲಿ ನಡೆದ ರಾಜಕೀಯ ಗೊಂದಲಗಳ ನಂತರ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಪರೀಕ್ಷೆಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತಾಧಿ ಕಾರಿಗಳ ಕಾರ್ಯಪಡೆ ರಚನೆಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ.

Readers Colony: ಇಸೋದಿಂದ ಪಲಾಯನ ತಡೆಗಟ್ಟಿ

Readers Colony: ಇಸೋದಿಂದ ಪಲಾಯನ ತಡೆಗಟ್ಟಿ

ಕಳೆದ ಒಂದು ತಿಂಗಳ ಅವಽಯಲ್ಲಿ, ದೇಶದ ಪ್ರಮುಖ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸುಮಾರು 120 ಮಂದಿ ತಂತ್ರಜ್ಞರು ರಾಜೀನಾಮೆ ಕೊಟ್ಟು ಖಾಸಗಿ ಬಾಹ್ಯಾಕಾಶ ಸಂಸ್ಥೆ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ ಅವಕಾಶ ನೀಡಿದ ನಂತರ, ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಒಡ್ಡುತ್ತಿರುವ ಅತಿ ಹೆಚ್ಚಿನ ಸಂಬಳ ಮತ್ತು ಇತರ ಸವಲತ್ತುಗಳಿ ಗಾಗಿ ತಂತ್ರಜ್ಞರು ಮತ್ತು ವಿಜ್ಞಾನಿಗಳು ಖಾಸಗಿ ಬಾಹ್ಯಾಕಾಶ ಸಂಸ್ಥೆಗಳನ್ನು ಸೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Readers Colony: ವಿಷ ವೃಕ್ಷಕ್ಕೆ ಚಿಕಿತ್ಸೆ ಅಗತ್ಯವಿದೆ

Readers Colony: ವಿಷ ವೃಕ್ಷಕ್ಕೆ ಚಿಕಿತ್ಸೆ ಅಗತ್ಯವಿದೆ

ಸಹಜವಾಗಿ ಅದರ ನಡೆಯು, ‘ಆಯಾ ದೇವಾನುದೇವತೆಯ ಭಕ್ತಕುಲವನ್ನು ತರವೆಂದು-ತಮವೆಂದು ವರ್ಗೀಕರಿಸುವ ಕ್ರಿಯೆ’ ಎಂಬ ಕಾಂಡವನ್ನು ಬೆಳೆಸಿತು. ಅಷ್ಟೇ ಸಹಜವಾಗಿ, ಕಾಂಡ, ಎಲೆ, ಹೂ, ಹಣ್ಣುಗಳೆಂಬ ಜನಕೋಟಿಯು, ಬಗೆಬಗೆಯ ಮೌಢ್ಯಗಳನ್ನೂ ಭಿನ್ನ(ತೆಯ) ಭಾವನೆ ಗಳನ್ನೂ ತುಂಬಿಕೊಂಡಿತು. ದಾರ್ಶನಿಕರ ತತ್ತ್ವಗಳು ಈ ಎಲ್ಲ ಹಂತಗಳಲ್ಲಿಯೂ ಗೈರು ಹಾಜರಾಗಿದ್ದು, ಪ್ರಕ್ಷಿಪ್ತ ನುಡಿಗಳೇ ವೃಕ್ಷಕ್ಕೆ ನೀರು, ಗೊಬ್ಬರಗಳಾಗಿ ಮೆರೆದವು.

Readers Colony: ಮೋಡ ಬಿತ್ತನೆ ಮಾಡಿ

Readers Colony: ಮೋಡ ಬಿತ್ತನೆ ಮಾಡಿ

ಮುಂಗಾರು ಮಳೆಯು ಆರಂಭದಲ್ಲಿ ಸಂತೋಷದಿಂದ ಪ್ರಾರಂಭವಾಗಿ ರೈತರ ಮೊಗದಲ್ಲಿ ನಗುವನ್ನು ತರಿಸಿತ್ತು. ಮಳೆಯನ್ನೆ ನಂಬಿದ ರೈತರು ಹತ್ತಿ ತೊಗರಿ ಮೆಕ್ಕೆಜೋಳದಂತಹ ಮುಂಗಾರು ಬೀತ್ತನೆಯ ಬೀಜವನ್ನು ಭೂಮಿತಾಯಿಯ ಮಡಿಲಿಗೆ ಹಾಕಿ ಖುಷಿಯಿಂದ ಹೊಲಗಳಲ್ಲಿ ಕೆಲಸ ಮಾಡತೊಡಗಿ ದ್ದರು. ರೈತರ ಮುಖದಲ್ಲಿನ ಖುಷಿ ಮಳೆರಾಯ ಬಹಳ ದಿನ ಇರಗೊಡಲಿಲ್ಲ

Readers Colony: ಧ್ಯಾನದ ಹಾದಿ

Readers Colony: ಧ್ಯಾನದ ಹಾದಿ

ಶಿಶಿರ ಹೆಗಡೆ ಅವರ ‘ತಲೆಹರಟೆ’ ಐದು ಕಂತುಗಳ ಪಯಣ ಧ್ಯಾನದ ಹೈವೇಗೆ ತಂದು ಹಾದಿ ತೋರಿಸಿದೆ. ನಡೆದು ಸಾಗುವುದು ನಮ್ಮ ಜವಾಬ್ದಾರಿ. ಮನಸ್ಸಿನ ಅಂತರಂಗದೊಳಗಿನ ಸಿಂಹಾವ ಲೋಕನ ಅದ್ಭುತ ಲೋಕದ ದರ್ಶನ ಮಾಡಿಸಿತು. ಒಟ್ಟಾರೆಯಾಗಿ ಕಂತಿನಿಂದ ಕಂತಿನವರೆಗೆ ಆಸಕ್ತಿಯನ್ನು ಉದ್ದಿಪನ ಗೊಳಿಸುತ್ತಾ ಮುಕ್ತಾಯಗೊಂಡಿದೆ. ಹಾರ್ದಿಕ ಅಭಿನಂದನೆಗಳು. ಇನ್ನೊಂದು ಸರಣಿಗೆ ಅಣಿಯಾಗಿ ದ್ದೇವೆ.

Readers Colony: ಮೂಲ ಮರೆಯದ ಹವ್ಯಕರು

Readers Colony: ಮೂಲ ಮರೆಯದ ಹವ್ಯಕರು

ಉಣ್ಣುವ ತಂಬುಳಿ, ಕುಡಿಯುವ ತಂಬುಳಿ ಬೇರೆ. ಅದರಲ್ಲೂ ನೂರೆಂಟು ಬಗೆ- ಶುಂಠಿ, ಜೀರಿಗೆ- ಮೆಂತೆ, ಯಲಬದ್ಗೆ ಕೊಡಿ, ಅಂಬೆಕೊಂಬು, ಒಂದೆಲ್ಗ, ಮಾವು, ವಾಮಕಾಳು, ಪೇರಲೆ ಕೊಡಿ, ಪತ್ರೆ ಕೊಡಿ, ಒಗ್ಗರಣೆ ಸೊಪ್ಪು, ಉರಗೆಲೆ ಹೀಗೆ ಹಲವಾರು. ಹವ್ಯಕರ ಕಜ್ಜಾಯದಲ್ಲೂ ವಿವಿಧತೆ. ಊರಿನಿಂದ ಎಷ್ಟೇ ದೂರ ಹೋದರೂ, ಹವ್ಯಕರು ತಮ್ಮ ಮೂಲ ಮರೆಯಲಾರರು.

Readers Colony: ಸಾಹಿತಿಗಳ ಪರನಿಂದೆಯ ಸೊಗಸು

Readers Colony: ಸಾಹಿತಿಗಳ ಪರನಿಂದೆಯ ಸೊಗಸು

ಒಂದು ಉತ್ತಮ ನಗರವನ್ನು ನಿರ್ಮಿಸಲು ಕೆಲವೊಮ್ಮೆ ಕಠಿಣ ನಿರ್ಧಾರಗಳು ಅಗತ್ಯವಾಗುತ್ತವೆ. ಕೆಲವರಿಗೆ ತಾತ್ಕಾಲಿಕ ತೊಂದರೆ ಆಗಬಹುದು, ಆದರೆ ಅದು ಲಕ್ಷಾಂತರ ಜನರ ಸುರಕ್ಷತೆಗಾಗಿ. ಅಕ್ರಮ ಒತ್ತುವರಿಯಿಂದ ಫುಟ್‌ಪಾತ್‌ಗಳು ಮಾಯವಾಗಿ, ಮಕ್ಕಳು, ಹಿರಿಯರು ಮತ್ತು ಪಾದಚಾರಿ ಗಳು ರಸ್ತೆಯ ನಡೆಯಬೇಕಾದ ಪರಿಸ್ಥಿತಿ ಬಂದಿದೆ.

Readers Colony: ಸದ್ಯಶೋಧನೆಯಲ್ಲಿ ಮಜಾ

Readers Colony: ಸದ್ಯಶೋಧನೆಯಲ್ಲಿ ಮಜಾ

ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಗ್ರಾಮೀಣ ಪ್ರದೇಶಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಮಕ್ಕಳ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಒಂದಕ್ಕಿಂತ ಹೆಚ್ಚು ತರಗತಿಗಳಿಗೆ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನೆ ದೊರೆಯುತ್ತಿಲ್ಲ.

Readers Colony: ಶಿಕ್ಷಣ ಸಿರಿವಂತರ ಸ್ವತ್ತಾ?

Readers Colony: ಶಿಕ್ಷಣ ಸಿರಿವಂತರ ಸ್ವತ್ತಾ?

ಕೋಟಿ ಕೋಟಿ ಹಣದ ಐದು ಗ್ಯಾರಂಟಿ ಘೋಷಿಸಿ ಅದನ್ನು ಕಾರ್ಯಗತ ಮಾಡಿರುವುದು ಸರಕಾರದ ಆರ್ಥಿಕ ಸ್ಥಿರತೆಗೆ ಸಾಕ್ಷಿ. ಆದರೆ ಕೆಲವೇ ಕೋಟಿ ವೆಚ್ಚದ ಗ್ರಂಥಾಲಯ ಏಕಗವಾಕ್ಷಿ ಯೋಜನೆಯನ್ನು ಸರಕಾರ ಮರೆತಿದೆಯೋ ತಿಳಿಯದು. ಪುಸ್ತಕಜ್ಯೋತಿ ಇಲ್ಲದೆ ಕತ್ತಲ ಗೂಡಾಗಿರುವ ಸಾರ್ವಜನಿಕ ಗ್ರಂಥಾಲಯಗಳು ನೂತನ ಸಿಎಂ ಅವರ ಕಣ್ಣು ಕುಕ್ಕಿರದಿರುತ್ತವೆಯೇ? 2021ರ ಪುಸ್ತಕ ಖರೀದಿ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಆಗಿಲ್ಲ.

Readers Colony: ರೈಲು ಸೇವೆಯ ಅಭಿವೃದ್ಧಿಗೆ ಕಲ್ಲು

Readers Colony: ರೈಲು ಸೇವೆಯ ಅಭಿವೃದ್ಧಿಗೆ ಕಲ್ಲು

ಏಪ್ರಿಲ್ ತಿಂಗಳಲ್ಲೇ 37000 ಟಿಕೆಟ್ ರಹಿತ ಪ್ರಯಾಣಿಕರು ರು.2.90ಕೋಟಿ ದಂಡವನ್ನು ನೀಡಿದ್ದಾರಂತೆ. ಇದು ಟಿಕೆಟ್ ಪಡೆಯದೇ ಸಿಕ್ಕಿಹಾಕಿಕೊಂಡವರ ಸಂಖ್ಯೆಯಾಗಿದ್ದು, ಸಿಕ್ಕಿಹಾಕಿಕೊಳ್ಳದೇ ಪ್ರಯಾಣಿಸಿ ದವರು ಮತ್ತು ಹೊಂದಾಣಿಕೆಯಿಂದ ದಂಡಕೊಡದವರ ಸಂಖ್ಯೆಎಷ್ಟೋ? ಕೇವಲ ಒಂದು ರೈಲು ಮಾರ್ಗದ ಕಥೆ ಹೀಗಾದರೆ, ಇಡೀ ದೇಶದಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಎಷ್ಟಿರಬಹುದು? ಕೊಂಕಣ ರೈಲು ಮಾರ್ಗದಲ್ಲಿ ಸುಮಾರು 50 ಜತೆ ರೈಲುಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿ ಓಡುತ್ತಿದ್ದರೂ, ಈ ಮಾರ್ಗ ನಿರೀಕ್ಷೆಯ ಲಾಭ ತರದಿರುವ ಹಿಂದಿನ ಕಾರಣ ಇದು ಎನ್ನಬಹುದೇ?

Readers Colony: ಟೈಟಲ್ ಕಾರ್ಡ್: ಮತ್ತೆ ಆರಂಭ?

Readers Colony: ಟೈಟಲ್ ಕಾರ್ಡ್: ಮತ್ತೆ ಆರಂಭ?

ಬೆಂಬಲಿಗರ ಒತ್ತಾಯ ಎಂಬ ಸಬೂಬು. ಉಪ ಮುಖ್ಯಮಂತ್ರಿ ಆಗುವ ಹೆಬ್ಬಯಕೆ. ಯಾರಿಗೂ ಪೈಸೆಯಷ್ಟೂ ಲಾಭ ವಿಲ್ಲದ ಸ್ಪೀಕರ್ ಹುದ್ದೆ ಬೇಡ. ಹಾಗೂ ಹೀಗೂ ಮೊದಲ ಪಟ್ಟಿಯ ಒಂದಷ್ಟು ಜನರ ಆಯ್ಕೆಯಾದ ನಂತರ ಮುಖ್ಯಮಂತ್ರಿಯೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಕ್ಷಣವೇ ಉತ್ತಮ ಖಾತೆಗಾಗಿ ಹೋರಾಟ.

Readers Colony: ಬೆಂಗಳೂರಿನ ಅಂದಗೆಡಿಸುವವರು

Readers Colony: ಬೆಂಗಳೂರಿನ ಅಂದಗೆಡಿಸುವವರು

ಬೆಂಗಳೂರು ಉದ್ಯಾನ ನಗರಿಯಂತೆ. ಇಲ್ಲಿ ರಸ್ತೆ ಬದಿ ಕಸ ಸುರಿಯುವವರು, ಖಾಲಿ ಸೈಟ್‌ನಲ್ಲಿ ಮನೆ ಕಟ್ಟಡದ ಕಸ ಹಾಕುವವರಿಗೆ ನಮ್ಮ ಊರು, ನಮ್ಮ ಬಡಾವಣೆ ಸ್ವಚ್ಛವಾಗಿ ಇರಬೇಕು ಎಂಬ ಪರಿಜ್ಞಾನವೇ ಇಲ್ಲ. ಯುವಜನ ರಾತ್ರಿ ಕುಡಿದು ಬಾಟಲ್‌ ಗಳನ್ನು ರಸ್ತೆ ಬದಿ ಸುರಿಯು ತ್ತಾರೆ. ಮಕ್ಕಳ ಡೈಪರ್ ರಸ್ತೆ ಬದಿ ಹಾಕ್ತಾರೆ. ನಾಯಿಗಳ ಸಂಖ್ಯೆ ಇದರಿಂದಲೇ ಜಾಸ್ತಿ.

Readers Colony: ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಾಗಲಿ

Readers Colony: ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಾಗಲಿ

ನಮ್ಮ ಸರಕಾರಿ ಶಾಲಾ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಪ್ರತಿಯೊಬ್ಬರು ಸರಕಾರದೊಂದಿಗೆ ಕೈ ಜೋಡಿಸುವುದು ಅಗತ್ಯ. ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ರುವ ಸರಕಾರಿ ಶಾಲೆಗಳನ್ನು ಪ್ರತಿ ಷ್ಠಿತ ವ್ಯಕ್ತಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದತ್ತು ಪಡೆದು ಶಾಲೆಗಳನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಾಗ ಈ ಶಾಲೆಗಳ ಸಬಲೀಕರಣ ಹೆಚ್ಚಾಗಿ ಶಾಲೆಗಳಲ್ಲಿ ದಾಖಲಾತಿ ಹಾಗೂ ಹಾಜರಾತಿ ವೃದ್ಧಿಸುತ್ತದೆ.

Readers Colony: ರಸಗೊಬ್ಬರಕ್ಕೆ ಮುಂಜಾಗ್ರತೆ

Readers Colony: ರಸಗೊಬ್ಬರಕ್ಕೆ ಮುಂಜಾಗ್ರತೆ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಮುಂಗಾರು ಆರಂಭವಾಗುತ್ತಿದೆ. ರೈತರು ಬಿತ್ತನೆ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ, ಇರಾನ್ ಅಮೆರಿಕ ನಡುವಿನ ಉದ್ವಿಗ್ನತೆಯ ಬಿಸಿ ರಸಗೊಬ್ಬರದ ಮೇಲೂ ತಟ್ಟುವ ಆತಂಕ ಇದೀಗ ರೈತರಲ್ಲಿ ಮನೆ ಮಾಡಿದೆ. ಈ ಕುರಿತು ಸ್ವತಃ ಕೃಷಿ ಸಚಿವ ಚಲುವ ನಾರಾಯಣ ಸ್ವಾಮಿಯವರೇ ತುಟಿ ಬಿಚ್ಚಿದ್ದು, ರಾಜ್ಯಕ್ಕೆ ಅಗತ್ಯ ಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದಿದ್ದಾರೆ.

Readers Colony: ಅಭಿವೃದ್ಧಿಗೆ ಹಣ ಬಳಸಿ

Readers Colony: ಅಭಿವೃದ್ಧಿಗೆ ಹಣ ಬಳಸಿ

ಇತ್ತೀಚೆಗೆ ನಡೆದ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಪಕ್ಷಗಳು ಆಶ್ವಾಸನೆ ಕೊಟ್ಟಂತೆ ಮಹಿಳೆಯರಿಗೆ ಉಚಿತ ಪ್ರಯಾಣ, ತಿಂಗಳಿಗಿಷ್ಟು ಹಣ, ಉಚಿತ ವಿದ್ಯುತ್ ಮುಂತಾದವು ಗಳನ್ನು ಜಾರಿಗೆ ತಂದಿವೆ. ಈ ಉಚಿತಭಾಗ್ಯಗಳಿಂದ ಕರ್ನಾಟಕವೂ ಸೇರಿದಂತೆ ಸೊರಗುತ್ತಿರುವ ರಾಜ್ಯಗಳಿಂದ ಉಳಿದ ರಾಜ್ಯಗಳು ಪಾಠ ಕಲಿಯಬೇಕಿತ್ತು. ಆದರೆ, ಅವು ಇನ್ನೂ ಹೆಚ್ಚು ಮಾಡುತ್ತಾ ಸಾಗಿವೆಯೇ ಹೊರತು ನಿಲ್ಲಿಸಿಲ್ಲ.

Readers Colony: ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಹೊಣೆಗಾರರು ಯಾರು?

Readers Colony: ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಹೊಣೆಗಾರರು ಯಾರು?

ದೇಶದಲ್ಲಿ ಪದೇ ಪದೆ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಮಾನಸಿಕ ಒತ್ತಡ ಹೆಚ್ಚಾಗಿ, ಖಿನ್ನತೆಗೆ ಜಾರಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಪ್ರಸ್ತುತ ನಡೆದ NEETಪರೀಕ್ಷೆ ಮುಂದೂಡಿದ್ದರ ಪರಿಣಾಮವಾಗಿ ಮನನೊಂದು 5 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಬೇಸರದ ಸಂಗತಿ ಈ ಸಾವಿಗೆ ಹೊಣೆ ಯಾರು? ದೇಶದಲ್ಲಿ ಇದುವರೆಗೆ ಘೆಉಉS ಪ್ರಶ್ನೆ ಪತ್ರಿಕೆಗಳು ನಾಲ್ಕು ಬಾರಿ ಸೋರಿಕೆಯಾಗಿವೆ.

Readers Colony: ಸರಕಾರಿ ಹುದ್ದೆ ತುಂಬಿರಿ

Readers Colony: ಸರಕಾರಿ ಹುದ್ದೆ ತುಂಬಿರಿ

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಪೂರೈಸಿದ ಬಗ್ಗೆ ಸಾಧನಾ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಇವರದೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತೀ ವರ್ಷ ಒಂದು ಲಕ್ಷ ಸರ್ಕಾರೀ ಉದ್ಯೋಗ ನೀಡುವ ಭರವಸೆ ಸಂಪೂರ್ಣ ಸುಳ್ಳಾಗಿದೆ.

Readers Colony: ವೇತನ ಎಲ್ಲಿ ಹೋಗುತ್ತಿದೆ?

Readers Colony: ವೇತನ ಎಲ್ಲಿ ಹೋಗುತ್ತಿದೆ?

ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಮುಗಿದರೂ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಣ ನೀಡಿಲ್ಲ. ಸಾಲ ಮಾಡಿದ ಆಸಾಮಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಮೊದಲ ಸಾಲವನ್ನು ತೀರಿಸಿದಂತೆ ಸರಕಾರವೂ ಕೂಡ ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಗೆ ಕಾಣುತ್ತಿದೆ.

Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!

Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!

ಹಿಮಾಚಲ ಪ್ರದೇಶ ಸರಕಾರವು ನೌಕರರಿಗೆ ಪೂರ್ಣ ಸಂಬಳ ನೀಡಲಾರದೇ ಶೇ.30ರಷ್ಟು ಕಡಿತಗೊಳಿ ಸಿದೆ. ನಮ್ಮ ಕರ್ನಾಟಕ ಸರಕಾರ ಖಾಲಿ ಹುದ್ದೆಗಳ ನೇಮಕಾತಿ ಮಾಡಿದರೆ ನೀಡಬೇಕಾಗುವ ಸಂಬಳದ ಹಣ ಉಳಿಸಿ, ಅದನ್ನೇ ಗ್ಯಾರಂಟಿಗಳಿಗೆ ಬಳಸಲು ಕಳೆದ ಮೂರು ವರ್ಷಗಳಿಂದಲೂ ವಿವಿಧ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಸುಮಾರು 3.75 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದ ಈ ಸರಕಾರ ನಿರುದ್ಯೋಗಿ ಯುವಜನಾಂಗದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.

Readers Colony: ವಿದ್ಯುತ್ ದರ ಏರಿಕೆ ಶಾಕ್

Readers Colony: ವಿದ್ಯುತ್ ದರ ಏರಿಕೆ ಶಾಕ್

ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂಗಳು) ನಷ್ಟದ ಭೀತಿಯಿಂದ ಪ್ರಸ್ತಾಪನೆ ಸಲ್ಲಿಸಿರುವುದು ವಿಪರ್ಯಾಸವೇ ಸರಿ. ನಷ್ಟಕ್ಕೆ ಸರಿಯಾದ ಕಾರಣವನ್ನು ಹುಡುಕುವುದರ ಬದಲು ರಾಜ್ಯದ ಜನತೆಯ ಜೇಬಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈ ಹಾಕಿ ದರ ಏರಿಕೆಗೆ ಆದೇಶ ನೀಡಿರುವುದು ಅನಗತ್ಯ ಬೆಳವಣಿಗೆ.

Readers Colony: ಇವರಿಗೇಕೆ ಭಾರತ ರತ್ನವಿಲ್ಲ?

Readers Colony: ಇವರಿಗೇಕೆ ಭಾರತ ರತ್ನವಿಲ್ಲ?

‘ಭಾರತ ರತ್ನ’ ಪ್ರಶಸ್ತಿ ವಿಷಯ ತಿಳಿದೇ ಇದೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸೇವೆ ಅಥವಾ ಸಾಧನೆ ಮಾಡಿದವರಿಗೆ ಸಲ್ಲುವ ಗೌರವ ಇದು. ಇದು ಪ್ರಾರಂಭವಾಗಿದ್ದು 1954ರಲ್ಲಿ. ಇಲ್ಲಿಯ ತನಕ 53 ಜನರಿಗೆ ಈ ಗೌರವ ನೀಡಲಾಗಿದೆ. ಅವುಗಳಲ್ಲಿ 35- 38 ರಾಜಕಾರಣಿಗಳಿಗೆ, 6-7 ಸಿನಿಮಾ ನಟ-ನಟಿಯರಿಗೆ, ಸಂಗೀತಗಾರರಿಗೆ, ವಿಜ್ಞಾನಿಗಳಿಗೆ, ಸಮಾಜ ಸೇವಕರಿಗೆ, ಕ್ರಿಕೆಟಿಗರಿಗೆ. ಆದರೆ ಕೇವಲ ಒಂದೇ ಒಂದು ಪ್ರಶಸ್ತಿ ಉದ್ಯಮಿಗೆ ಸಂದಿದೆ ಅದು ಜೆಆರ್‌ಡಿ ಟಾಟಾ ಅವರಿಗೆ !!

Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!

Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!

ಅತಿ ಹೆಚ್ಚಿನ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು, ಸುಶಿಕ್ಷಿತರು, ಖಾಸಗಿ ಕಂಪನಿಗಳ ನೌಕರರು ವಾಸ ಮಾಡುವಂತಹ ಪಟ್ಟಣದ ಪ್ರಮುಖ ಬಡಾವಣೆಯೆ ಕೆಎಚ್‌ಬಿ ಕಾಲೋನಿ ಆಗಿದ್ದು, ಗಮನಾರ್ಹ ಸಂಗತಿ ಏನೆಂದರೆ, ನಂಜನಗೂಡು ಪಟ್ಟಣದ ಭಾಗಶಃ ಜನಸಂಖ್ಯೆ ಈ ಭಾಗದ ಇದ್ದು ಹೌಸಿಂಗ್ ಬೋರ್ಡ್ ರಚನೆ ಆದ ನಂತರ ಇದರ ಅಕ್ಕ-ಪಕ್ಕ ಸರಿ ಸುಮಾರು 15-20ಕ್ಕೂ ಹೆಚ್ಚು ಲೇಔಟ್ʼಗಳು ಇವತ್ತಿನವರೆಗೆ ನಿರ್ಮಾಣಗೊಂಡಿವೆ.

Readers Colony: ಹಿಂದಿ ಇರಲಿ, ಹೇರಿಕೆ ವಿರೋಧಿಸೋಣ

ಹಿಂದಿ ಇರಲಿ, ಹೇರಿಕೆ ವಿರೋಧಿಸೋಣ

ಹಾಡಿನಲ್ಲಿ ಅಣ್ಣಾವ್ರೇ ಹೇಳಿಲ್ಲವೇ ’ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡಾ...ಕನ್ನಡಾ...’ ಅಂತ. ಹಾಗಾಗಿ ಹಿಂದಿಗೆ ಅಂಕ ಇಲ್ಲ ಎಂಬ ಆದೇಶವನ್ನು ಹಿಂಪಡೆಯು ವುದು ಸೂಕ್ತ. ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಹಾಗೂ ಎಲ್ಲ ಕಡೆ ಕನ್ನಡವೇ ಇರಲಿ. ಪರಭಾಷಿಕರಿಗೂ ಕನ್ನಡವನ್ನೇ ಬಳಸಲು ಕಲಿಸೋಣ.

Loading...