ಅನಾಗರಿಕ ನಡವಳಿಕೆ
ಇದೊಂದು ಅನಾಗರಿಕ ನಡವಳಿಕೆ, ರಾಜ್ಯಸರಕಾರಕ್ಕೂ ಕೆಟ್ಟ ಹೆಸರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಇವರು ಇನ್ನೂ ಯಾವ ಶತಮಾನದಲ್ಲಿ ಇದ್ದಾರೆ ? ಈ ಮಕ್ಕಳ ಪೋಷಕರಿಗೆ ಶಿಕ್ಷಣಾಧಿಕಾರಿಗಳು ತಿಳಿವಳಿಕೆ ಹೇಳಬಾರದೇ? ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇರುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಓದುಗರ ಓಣಿ
ಚಾಮರಾಜನಗರ ಜಿಲ್ಲೆಯ, ಆಲೂರು ತಾಲ್ಲೂಕಿನ, ಹೊಮ್ಮ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾ ಹ್ನದ ಬಿಸಿಯೂಟದ ಅಡಿಗೆಯನ್ನು ದಲಿತ ಮಹಿಳೆ ಮಾಡುತ್ತಾರೆ ಎಂಬ ಕಾರಣಕ್ಕೆ, ಆ ಶಾಲೆಯ, 23 ಮಕ್ಕಳಲ್ಲಿ, 22 ಮಕ್ಕಳು ಟಿ.ಸಿ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೊಂದು ಅನಾಗರಿಕ ನಡವಳಿಕೆ, ರಾಜ್ಯಸರಕಾರಕ್ಕೂ ಕೆಟ್ಟ ಹೆಸರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಇವರು ಇನ್ನೂ ಯಾವ ಶತಮಾನದಲ್ಲಿ ಇದ್ದಾರೆ ? ಈ ಮಕ್ಕಳ ಪೋಷಕರಿಗೆ ಶಿಕ್ಷಣಾಧಿಕಾರಿಗಳು ತಿಳಿವಳಿಕೆ ಹೇಳಬಾರದೇ? ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇರುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.
ಇದನ್ನೂ ಓದಿ: Vishweshwar Bhat Column: ದುರಂತವೂ, ಭಾಷಾ ಸಮಸ್ಯೆಯೂ
ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಶಾಲೆಯ 23 ಮಕ್ಕಳಲ್ಲಿ, 22 ಮಕ್ಕಳು ಟ.ಸಿ. ಪಡೆದಿzರೆ ಎಂದರೆ, ಆ ಸರಕಾರಿ ಶಾಲೆ ಉಳಿಯುವುದಾದರೂ ಹೇಗೆ ? ಟಿ.ಸಿ ಪಡೆದ ಮಕ್ಕಳ ಪೋಷಕರ ಜೊತೆ ಮಾತನಾಡಿ ಅವರಿಗೆ ತಿಳಿವಳಿಕೆ ಹೇಳಿ, ಟಿ.ಸಿ ವಾಪಸ್ ಪಡೆದು, ಅದೇ ಸರಕಾರಿ ಶಾಲೆಯಲ್ಲಿ ಆ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸುವಂತೆ ಮಾಡುವ ಕೆಲಸ ಶಿಕ್ಷಣಾಧಿಕಾರಿಗಳದು. ಇಲ್ಲದಿದ್ದರೆ ಸರಕಾರ ಕ್ಕೆ ಒಂದು ರೀತಿಯಲ್ಲಿ ಕಪ್ಪು ಚುಕ್ಕೆ.
ಬೂಕನಕೆರೆ ವಿಜೇಂದ್ರ, ಮೈಸೂರು
ಸುಳ್ಳು ಸುದ್ದಿಗೆ ಕಡಿವಾಣ
ಸ್ವಾಗತಾರ್ಹ ಇತ್ತೀಚೆಗೆ ರಾಜ್ಯ ಸರಕಾರವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹಂಚುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರು. ದಂಡ ವಿಧಿಸುವ ಮಸೂದೆ ರೂಪಿಸಲು ಮುಂದಾಗಿರುವ ಸುದ್ದಿ ಕೇಳಿ ಖುಷಿ ಯಾಯಿತು.
ಈ ಕ್ರಮ ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಾಗತಾರ್ಹ. ಸಾಮಾಜಿಕ ಜಾಲತಾಣಗಳ ಪ್ರಭಾವ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ, ಸುಳ್ಳು ಸುದ್ದಿಗಳು ಜನರ ಹಾಗೂ ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇದನ್ನು ನಿಯಂತ್ರಿಸಲು ಸರ್ಕಾರ ನಡೆಸು ತ್ತಿರುವ ಪ್ರಯತ್ನಗಳು ಶ್ಲಾಘನೀಯ. ವಿಶೇಷವಾಗಿ ಸುಳ್ಳು ಸುದ್ದಿ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಮಸೂದೆ ಅವಕಾಶ ನೀಡಿರುವುದು ಗಮನಾರ್ಹವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳ ಬಗ್ಗೆ ಫೇಸ್ ಬುಕ್ ವ್ಯವಸ್ಥಾಪಕ ರಿಗೆ ದೂರು ನೀಡಲು ಕೇವಲ ಆಯ್ಕೆಗಳ ರೂಪದಲ್ಲಿರುವ ದೂರು ನಮೂದಿಸುವ ವ್ಯವಸ್ಥೆ ಸಾಕಷ್ಟು ವಿವರ ನೀಡಲು ಸಾಧ್ಯವಿಲ್ಲದಂತೆ ಮಾಡುತ್ತಿದೆ. ಇದರ ಫಲವಾಗಿ ಹಲವಾರು ನ್ಯಾಯೋ ಚಿತ ದೂರುಗಳು ಕಡೆಗಣನೆಗೆ ಒಳಗಾಗುತ್ತವೆ.
ಅದೇ ರೀತಿ, ಹಲವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವ ಮನೋಭಾವವಿಲ್ಲದ ಕಾರಣ, ಸುಳ್ಳು ಸುದ್ದಿಗಳನ್ನು ಮೌನವಾಗಿ ಸಹಿಸುವ ಸ್ಥಿತಿಯಲ್ಲಿದ್ದಾರೆ. ಇದನ್ನು ಸರಿಪಡಿಸಲು ಸುಳ್ಳು ಹಾಗೂ ತಪ್ಪು ಮಾಹಿತಿಯ ಬಗ್ಗೆ ಸಾರ್ವಜನಿಕರು ಆನ್ಲೈನ್ ಮೂಲಕ ನೇರವಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದಾದ ವಿಶಿಷ್ಟ ಪೋರ್ಟಲ್ ಅಥವಾ ಅಪ್ಲಿಕೇಶನ್ ವ್ಯವಸ್ಥೆಯನ್ನು ಸರಕಾರ ರೂಪಿಸಬೇಕಾಗಿದೆ.
ಇದರಿಂದ ಜನ ಸಾಮಾನ್ಯರು ಸುಲಭವಾಗಿ ತಮ್ಮ ದೂರುಗಳನ್ನು ನೊಂದಾಯಿಸಬಹುದಾಗಿದ್ದು, ಇದರೊಂದಿಗೆ ಪೊಲೀಸ್ ಇಲಾಖೆಗೆ ಸಹ ಸಹಕಾರ ದೊರಕುತ್ತದೆ. ಈ ತಂತ್ರಜ್ಞಾನಾಧಾರಿತ ದೂರು ವ್ಯವಸ್ಥೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲಿದೆ ಮತ್ತು ಸಕಾರಾತ್ಮಕ ಪ್ರಭಾವ ಬೀರುವಲ್ಲಿ ಸಹಕಾರಿಯಾಗುತ್ತದೆ.
ನಾಗೇಂದ್ರ ಕಾವೂರು, ಸಂಡೂರು