Delhi Election 2025: ದೆಹಲಿ ರಾಜಕೀಯದಲ್ಲಿ ಭಾರೀ ಸಂಚಲನ; AAP ತೊರೆದಿದ್ದ 8 ಶಾಸಕರು ಬಿಜೆಪಿ ಸೇರ್ಪಡೆ
Delhi Election 2025: ಏಕಾಏಕಿ ರಾಜೀನಾಮೆ ಕೊಟ್ಟು ಆಮ್ ಆದ್ಮಿ ಪಕ್ಷಕ್ಕೆ(AAP) ಶಾಕ್ ಕೊಟ್ಟಿದ್ದ ಎಂಟು ಶಾಸಕರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಚುನಾವಣೆಗೂ ಮುನ್ನವೇ ಆಪ್ಗೆ ಭಾರೀ ಹೊಡೆತ ನೀಡಿದೆ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ(Delhi Election 2025) ಇನ್ನೇನು ದಿನಗಣನೆ ಶುರುವಾಗಿದೆ ಎನ್ನುವಾಗಲೇ ಏಕಾಏಕಿ ರಾಜೀನಾಮೆ ಕೊಟ್ಟು ಆಮ್ ಆದ್ಮಿ ಪಕ್ಷಕ್ಕೆ(AAP) ಶಾಕ್ ಕೊಟ್ಟಿದ್ದ ಎಂಟು ಶಾಸಕರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಚುನಾವಣೆಗೂ ಮುನ್ನವೇ ಆಪ್ಗೆ ಭಾರೀ ಹೊಡೆತ ನೀಡಿದೆ. ವಂದನಾ ಗೌರ್ (ಪಾಲಂ), ರೋಹಿತ್ ಮೆಹ್ರೌಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರ್ಬಾ ನಗರ), ರಾಜೇಶ್ ರಿಷಿ (ಉತ್ತಮ್ ನಗರ), ಬಿಎಸ್ ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರೌಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
Shock to Aam Aadmi Party before Delhi assembly elections 🎯
— Megh Updates 🚨™ (@MeghUpdates) February 1, 2025
Just 4 days before elections, multiple AAP MLAs & councilor join BJP
AAP MLA Bhavna Gaur, Madan Lal, Girish Soni, Rajesh Rishi, BS June, Naresh Yadav, Pawan Sharma, Rohit Mehraulia, Corp Councilor Ajay Rai joined BJP. pic.twitter.com/9GRcHJv5Z0
ಮುಖ್ಯವಾಗಿ, ಎಎಪಿ ತೊರೆದ ಎಂಟು ಶಾಸಕರಲ್ಲಿ ಏಳು ಜನರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಪಕ್ಷದ ನಿರ್ಧಾರದ ಬಗ್ಗೆ ಅವರು ತೀವ್ರ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರಿಗೆ ಆರಂಭದಲ್ಲಿ ಟಿಕೆಟ್ ನೀಡಲಾಯಿತು, ಆದರೆ ಪಂಜಾಬ್ ಕುರಾನ್ ಅಪವಿತ್ರ ಪ್ರಕರಣದಲ್ಲಿ ಅವರ ವಿರುದ್ಧದ ಆರೋಪಗಳು ಸಾಬೀತಾದ ನಂತರ ಅವರು ಸೀಟನ್ನು ಬಿಟ್ಟುಕೊಡಬೇಕಾಯಿತು. ಅದರ ನಂತರ, ಪಕ್ಷವು ಅವರ ಬದಲಿಗೆ ಮಹೇಂದರ್ ಚೌಧರಿ ಅವರಿಗೆ ಸೀಟ್ ನೀಡಿತ್ತು. ನಿನ್ನೆ ನರೇಶ್ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷ ತೊರೆದಿದ್ದರು.
ಎಎಪಿಗೆ ರಾಜೀನಾಮೆ ನೀಡಿದ ನಂತರ, ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್ಗೆ ಸಲ್ಲಿಸಿ, ಸದನದ ಸದಸ್ಯತ್ವವನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ. ಇಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಮತ್ತು ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್ದೇವ ಅವರ ಸಮ್ಮುಖದಲ್ಲಿ ಮಾಜಿ ಎಎಪಿ ನಾಯಕರು ಬಿಜೆಪಿ ಸೇರಿದರು.
ಈ ಸುದ್ದಿಯನ್ನೂ ಓದಿ: Delhi Election 2025: ಕೇಜ್ರಿವಾಲ್ಗೆ ಶಾಕ್; ಚುನಾವಣೆ ಹೊಸ್ತಿಲಲ್ಲೇ ಎಎಪಿ ತೊರೆದ 7 ಹಾಲಿ ಶಾಸಕರು!
ಹೊಸ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ್ದ ಪಾಂಡಾ, ಇದನ್ನು "ಐತಿಹಾಸಿಕ" ದಿನ ಎಂದು ಕರೆದರು, ಫೆಬ್ರವರಿ 5 ರ ಚುನಾವಣೆಯ ನಂತರ ದೆಹಲಿಯೂ ಎಎಪಿಯಿಂದ ಮುಕ್ತವಾಗಲಿದೆ ಎಂದು ಅವರು ಹೇಳಿದರು.