ಬೆಂಗಳೂರು: ಮನೆಯಲ್ಲಿ ಸಮೃದ್ಧಿ ಇರಲೇಬೇಕು. ಇಲ್ಲವಾದರೆ ಯಾವುದೋ ದೋಷ ಮನೆಯಲ್ಲಿ ಇದೆ ಎಂದೇ ಅರ್ಥ. ಸುಖ, ಶಾಂತಿ, ಸಮೃದ್ಧಿ ಮನೆಯಲ್ಲಿ ಇರಬೇಕಾದರೆ ಕೆಲವೊಂದು ಅನುಷ್ಠಾನಗಳು ಬಹಳ ಮುಖ್ಯವಾಗಿರುತ್ತದೆ. ಇದಕ್ಕಾಗಿ ವಾಸ್ತು ಶಾಸ್ತ್ರವು ಕೆಲವು ಸುಲಭ ಉಪಾಯಗಳನ್ನು ಹೇಳಿದೆ. ಸಂಪತ್ತನ್ನು ಮನೆಗೆ ಆಕರ್ಷಿಸಲು ಮತ್ತು ಮನೆಯಲ್ಲೇ ಉಳಿಸಿಕೊಳ್ಳಲು ಕೆಲವು ಸರಳ, ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ (Vastu Tips). ಇದನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಸಂಪತ್ತಿನ ಅಧಿದೇವತೆ ಶ್ರೀ ಲಕ್ಷ್ಮೀ ಸದಾ ಮನೆಯಲ್ಲೇ ನೆಲೆಸುತ್ತಾಳೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಗೆ ಆಯಸ್ಕಾಂತದಂತೆ ಸಮೃದ್ಧಿಯನ್ನು ಆಕರ್ಷಿಸಲು ಜ್ಯೋತಿಷಿ ರವಿ ಪರಾಶರ್ ನೀಡಿರುವ ಸಲಹೆಗಳು ಇಂತಿವೆ.
ಮುಖ್ಯ ದ್ವಾರದಲ್ಲಿ ಸ್ವಸ್ತಿಕ
ಮನೆಯ ಮುಖ್ಯ ದ್ವಾರ ಅತ್ಯಂತ ಪವಿತ್ರ ಸ್ಥಳ ಎನಿಸಿಕೊಂಡಿದೆ. ಮನೆಯ ಪ್ರವೇಶ ಮತ್ತು ನಿರ್ಗಮನ ಬಿಂದುವಾಗಿರುವ ಇದು ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತಿನ ದ್ವಾರವೂ ಆಗಿದೆ. ಮನೆಯ ಬಾಗಿಲಿನ ದಿಕ್ಕಿಗೆ ಅನುಗುಣವಾಗಿ ಸರಿಯಾದ ಬಣ್ಣದ ಸ್ವಸ್ತಿಕವನ್ನು ಬಿಡಿಸುವುದು ಸಮೃದ್ಧಿಯನ್ನು ತರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಪೂರ್ವ ದಿಕ್ಕಿನ ಬಾಗಿಲಿನಲ್ಲಿ ಹಸಿರು, ಉತ್ತರ ದಿಕ್ಕಿನ ಬಾಗಿಲಿನಲ್ಲಿ ನೀಲಿ, ದಕ್ಷಿಣ ದಿಕ್ಕಿನ ಬಾಗಿಲಿನಲ್ಲಿ ಕೆಂಪು, ಪಶ್ಚಿಮ ದಿಕ್ಕಿನ ಬಾಗಿಲಿನಲ್ಲಿ ಹಳದಿ ಸ್ವಸ್ತಿಕ ರಚನೆಯು ಮನೆಯ ಶಕ್ತಿಯನ್ನು ಸಮತೋಲನಗೊಳಿಸುತ್ತವೆ ಮತ್ತು ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ.
ಹಳದಿ ಸಾಸಿವೆ
ಮನೆಯ ಲಾಕರ್ ಸಂಪತ್ತಿನ ಸ್ಥಿರತೆಯನ್ನು ಸಂಕೇತಿಸುತ್ತದೆ. ಅದನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸಿ. ಒಳಗೆ ಸ್ವಲ್ಪ ಹಳದಿ ಸಾಸಿವೆಯನ್ನು ಇರಿಸಿ. ಇದು ಹಣವನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ದುಷ್ಟ ಕಣ್ಣನ್ನು ತೆಗೆದು ಹಾಕುತ್ತದೆ. ಆರ್ಥಿಕ ತೊಂದರೆಗಳನ್ನು ನಿವಾರಿಸುತ್ತದೆ.
ಮಣ್ಣಿನ ಪಿಗ್ಗಿ ಬ್ಯಾಂಕ್
ಮನೆಯ ನೈಋತ್ಯ ದಿಕ್ಕು ಸಂಪತ್ತಿನ ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸರಳವಾದ ಮಣ್ಣಿನ ಪಿಗ್ಗಿ ಬ್ಯಾಂಕ್ ಇರಿಸಿ. ಇದರಲ್ಲಿ ನಿಯಮಿತವಾಗಿ ನಾಣ್ಯ ಅಥವಾ ನೋಟುಗಳನ್ನು ಹಾಕಿ. ಇದು ಅತ್ಯಂತ ಶುಭವಾಗಿದೆ. ಇದು ಮನೆಯಲ್ಲಿ ಆರ್ಥಿಕ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಲಕ್ಷ್ಮೀ ನಾರಾಯಣನ ಛಾಯಾಚಿತ್ರ
ಮನೆಯ ಪಶ್ಚಿಮ ಭಾಗದಲ್ಲಿ ಲಕ್ಷ್ಮೀ ದೇವತೆ ಮತ್ತು ನಾರಾಯಣನ ಸುಂದರವಾದ ಛಾಯಾಚಿತ್ರವನ್ನು ಇರಿಸಿ ಮತ್ತು ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಿ. ಲಕ್ಷ್ಮೀ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿದ್ದರೆ, ಭಗವಾನ್ ನಾರಾಯಣನು ರಕ್ಷಣೆ ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತಾನೆ. ಇವರು ಒಟ್ಟಾಗಿ ಸಮೃದ್ಧಿಯನ್ನು ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ: ರಾಹುಲ್ ಕರೆ ಮಾಡಿದ್ರು...! ಆದರೆ ಫ್ರಾಂಚೈಸಿ ಕೆಟ್ಟದಾಗಿ ನಡೆಸಿಕೊಂಡಿತು; ಗೇಲ್ ಸ್ಫೋಟಕ ಹೇಳಿಕೆ
ಗಂಗಾ ಜಲ
ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ ಗಂಗಾ ಜಲ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮಾನಸಿಕ ಶಾಂತಿ ನೆಲೆಸುತ್ತದೆ. ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿಡುವ ನೀರನ್ನು ಪ್ರತಿನಿತ್ಯ ಬದಲಾಯಿಸುವುದು ಮುಖ್ಯ.