ಶ್ರೀಲಂಕಾ ಎ ಆಟಗಾರನನ್ನು ತಳ್ಳಿದ ವೈಭವ್ ಸೂರ್ಯವಂಶಿ, ಸೂಪರ್ ಓವರ್ ಬಳಿಕ ಹೈಡ್ರಾಮಾ!
ಸೂಪರ್ ಓವರ್ನಲ್ಲಿ ಶ್ರೀಲಂಕಾ ಎ ವಿರುದ್ಧ ಭಾರತ ಎ ತಂಡ ಸೋತ ನಂತರ ಮೈದಾನದಲ್ಲಿ ವಾಗ್ವಾದ ಭುಗಿಲೆದ್ದಿತು. ಭಾರತದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಫೀಲ್ಡರ್ಗಳ ನಡುವೆ ತೀವ್ರ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು. ನಂತರ, ಶ್ರೀಲಂಕಾದ ಇತರ ಆಟಗಾರರು ಮಧ್ಯಪ್ರವೇಶಿಸಿ ವೈಭವ್ ಅವರನ್ನು ಎಳೆದೊಯ್ದರು.
ಶ್ರೀಲಂಕಾ ಆಟಗಾರರ ಜತೆ ವೈಭವ್ ಸೂರ್ಯವಂಶಿ ಕಿರಿಕ್. -
ನವದೆಹಲಿ: ಭಾರತ ʻಎʼ ಮತ್ತು ಶ್ರೀಲಂಕಾ ʻಎʼ ನಡುವಿನ ತ್ರಿಕೋನ ಏಕದಿನ ಸರಣಿಯ (IND-A vs AFG-A) ಪಂದ್ಯದಲ್ಲಿನ ಆಟ ಅತ್ಯಂತ ರೋಮಾಂಚನಕಾರಿಯಾಗಿತ್ತಲ್ಲದೆ, ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರ ನಡುವೆ ಹೈಡ್ರಾಮಾ ನಡೆದಿತ್ತು. ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾದ ಸೋಲಿನ ನಂತರ, ಯುವ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತು ಶ್ರೀಲಂಕಾ ಆಟಗಾರರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಾಗ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಸೋಲಿನ ನಂತರ ಭಾರತ ಎ ತಂಡದ ಆಟಗಾರರು ನಿರಾಶೆಗೊಂಡಿದ್ದರು. ಆದರೆ, ಸೂಪರ್ ಓವರ್ ಮುಗಿದ ಬೆನ್ನಲ್ಲೆ ವೈಭವ್ ಮತ್ತು ಗೆಲುವನ್ನು ಸಂಭ್ರಮಿಸುತ್ತಿದ್ದ ಶ್ರೀಲಂಕಾ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು.
ಶ್ರೀಲಂಕಾ ಎ ತಂಡ, ಸೂಪರ್ ಓವರ್ ವಿಜಯವನ್ನು ಆಚರಿಸಲು ಪ್ರಾರಂಭಿಸಿದ ತಕ್ಷಣ, ಯುವ ಆರಂಭಿಕ ವೈಭವ್ ಸೂರ್ಯವಂಶಿ ಒಂದು ವಿಷಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಂದ ಬೆಳಕಿನ ಪರಿಸ್ಥಿತಿಯ ಹೊರತಾಗಿಯೂ ಸೂಪರ್ ಓವರ್ ನಡೆಸಲಾಗಿದೆ ಎಂಬ ಅಂಶಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕ್ರೀಸ್ನಲ್ಲಿದ್ದ ಶ್ರೀಲಂಕಾದ ಫೀಲ್ಡರ್ಗಳು ಮತ್ತು ವೈಭವ್ ಸೂರ್ಯವಂಶಿ ನಡುವೆ ವಾಗ್ವಾದ ತಾರಕಕ್ಕೇರಿತ್ತು.
ಮಾತಿನ ಚಕಮಕಿ ಮೈದಾನದಲ್ಲಿ ಆಟಗಾರರ ನಡುವೆ ದೈಹಿಕ ಜಗಳಕ್ಕೆ ಕಾರಣವಾಯಿತು. ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿ, ಶ್ರೀಲಂಕಾದ ಇತರ ಆಟಗಾರರು ತಕ್ಷಣ ಮಧ್ಯಪ್ರವೇಶಿಸಲು ಮುಂದಾದರು. ಆದಾಗ್ಯೂ, ವೈಭವ್ ಅವರ ಕೋಪ ಕಡಿಮೆಯಾಗಲಿಲ್ಲ; ಅವರು ಹಿಂದೆ ಸರಿದಿದ್ದರೂ ಸಹ, ಅವರು ಎದುರಾಳಿ ಆಟಗಾರನನ್ನು ಜೋರಾಗಿ ತಳ್ಳಿದರು. ಇದು ವೈರಲ್ ಆಗಿರುವ ವಿಡಿಯೊದಲ್ಲಿ ದಾಖಲಾಗಿದೆ.
IND-A vs SL-A:ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದ ವೈಭವ್ ಸೂರ್ಯವಂಶಿ!
ಅತಿಯಾದ ವಾಗ್ವಾದ ಮತ್ತು ಗಲಾಟೆಗೆ ನಿಖರವಾಗಿ ಕಾರಣವೇನು ಎಂಬುದು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ಪಂದ್ಯದ ಅಂತಿಮ ಹಂತಗಳಲ್ಲಿ ಮಂದ ಬೆಳಕಿನ ಬಗ್ಗೆ ನಾಯಕ ತಿಲಕ್ ವರ್ಮಾ ಮತ್ತು ಅಂಪೈರ್ಗಳ ನಡುವಿನ ದೀರ್ಘಕಾಲ ಮಾತು ಕತೆ ನಡೆದಿತ್ತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಭಾರತಕ್ಕೆ 19 ರನ್ಗಳ ಗುರಿಯನ್ನು ನೀಡಿತ್ತು. ಬಳಿಕ ಭಾರತ ವಿಫಲವಾಯಿತು. ಇದಾದ ಬಳಿಕ ವೈಭವ್ ಸೂರ್ಯವಂಶಿ ಯಾವುದೋ ಕಾರಣಕ್ಕೆ ಲಂಕಾ ಆಟಗಾರರ ವಿರುದ್ಧ ಕಿಡಿಕಾರಿದರು.
🚨 BIG TROUBLE FOR VAIBHAV & TILAK 😭
— T-Celebs (@t_celebs) June 15, 2026
Vaibhav Sooryavanshi and Tilak Varma could face a 1-2 match ban after their heated argument with the umpires.
- Suryavanshi's physical altercation with Sri Lanka A players after the match might cost him dearly 😭 pic.twitter.com/XNSc15n24h
ಕ್ರಿಕೆಟ್ ಮೈದಾನದಲ್ಲಿನ ಉದ್ವಿಗ್ನತೆ ಅಲ್ಪಕಾಲಿಕವಾಗಿತ್ತು. ವಾದ ಮತ್ತು ಗದ್ದಲದ ನಂತರ ಎರಡೂ ತಂಡಗಳ ಆಟಗಾರರು ಉತ್ಸಾಹದಿಂದ ಕೈಕುಲುಕುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು, ಈ ಅದ್ಭುತ ಸ್ಪರ್ಧೆಯನ್ನು ಮುಕ್ತಾಯಗೊಳಿಸಿದರು. ಇದು ಸಮಬಲಗೊಂಡ ಸರಣಿಯಲ್ಲಿ ಭಾರತದ ಸತತ ಎರಡನೇ ಸೋಲನ್ನು ಅನುಭವಿಸಿತು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಎ ವಿರುದ್ಧವೂ ಭಾರತ ಎ ಸೋತಿತ್ತು.
ನೋ ಬಾಲ್ ವಿಚಾರದಲ್ಲಿ ಭಾರತ ಎ ತಂಡದ ಆಟಗಾರರು ಅಸಮಾಧಾನ
ಸೂಪರ್ ಓವರ್ ಅನ್ನು ಅರ್ಷದ್ ಖಾನ್ ಬೌಲ್ ಮಾಡಿದ್ದರು. ಅವರು ಐದು ಎಸೆತಗಳಲ್ಲಿ 14 ರನ್ಗಳನ್ನು ಕೊಟ್ಟಿದ್ದರು. ಆದರೆ, ಆರನೇ ಎಸೆತದಲ್ಲಿ ಅವರು ನೋ ಬಾಲ್ ಹಾಕಿದ್ದರು. ಇದು ಉತ್ತಮ ಎಸೆತ ಎಂದು ವೈಭವ್ ಆಗಲೇ ಡಗ್ಔಟ್ಗೆ ತೆರಳಿ ಪ್ಯಾಡ್ ಅಪ್ ಮಾಡುತ್ತಿದ್ದರೆ, ಭಾರರತದ ಆಟಗಾರರ ಮರಳುತ್ತಿದ್ದರು. ಆದರೆ, ಚೆಂಡು ಸೊಂಟಕ್ಕಿಂತ ಮೇಲೆ ಹೋಗುತ್ತಿತ್ತು ಎಂದು ಪರಿಗಣಿಸಿ ಅಂಪೈರ್ ನೋ ಬಾಲ್ ಕೊಟ್ಟರು. ಇದಕ್ಕೆ ಭಾರತದ ನಾಯಕ ತಿಲಕ್ ವರ್ಮ ಹಾಗೂ ಸಹ ಆಟಗಾರರು ಅಸಮಾಧಾನವನ್ನು ವ್ಯಕ್ತಪಡಿಸಿದರು. ನಂತರ ಭಾರತೀಯ ಆಟಗಾರರು ಮೈದಾನಕ್ಕೆ ಮರಳಿದರು. ಅಂತಿಮವಾಗಿ ಶ್ರೀಲಂಕಾ ಸೂಪರ್ ಓವರ್ನಲ್ಲಿ 16 ರನ್ ಕಲೆ ಹಾಕಿ ಭಾರತ ಎ ತಂಡಕ್ಕೆ 17 ರನ್ ಗುರಿಯನ್ನು ನೀಡಿತು. ಆದರೆ, ಭಾರತದ ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಸುಯಾಶ್ ಶೆಡ್ಗೆ ಅವರು ಕೇವಲ 9 ರನ್ಗಳನ್ನು ಮಾತ್ರ ಕಲೆ ಹಾಕಿದರು. ಅಂತಿಮವಾಗಿ ಶ್ರೀಲಂಕಾ ಎ ಗೆಲುವು ತನ್ನದಾಗಿಸಿಕೊಂಡಿತು.
🚨 BIG BLUNDER BY TILAK VARMA AND INDIA TEAM MANEGEMENT 🚨
— Cricket Central (@CricketCentrl) June 15, 2026
The match ended in a tie, and with bad light creeping in, Sri Lanka and the umpires were ready to shake hands and share the points.
However, Tilak Varma and India team manegement insisted on playing a Super Over.… pic.twitter.com/oErUef7K65
ಸೂಪರ್ ಓವರ್ ಬೇಡ ಎಂದಿದ್ದ ಅಂಪೈರ್ಗಳು
ಅಂದ ಹಾಗೆ ಮಂದ ಬೆಳಕಿನ ಕಾರಣ ಸೂಪರ್ ಓವರ್ ನಡೆಯುವ ಸಾಧ್ಯತೆ ಆರಂಭದಲ್ಲಿ ಅನುಮಾನಾಸ್ಪದವಾಗಿತ್ತು. ಏಕೆಂದರೆ ಕಡಿಮೆಯಾಗುತ್ತಿದ್ದ ಬೆಳಕು ಆಟಕ್ಕೆ ಸೂಕ್ತವಲ್ಲ ಎಂದು ಅಂಪೈರ್ಗಳು ಅಭಿಪ್ರಾಯಪಟ್ಟಿದ್ದರು. ಇದರಿಂದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಹಾಗೂ ಕೋಚಿಂಗ್ ಸಿಬ್ಬಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೈದಾನದಲ್ಲೇ ದೀರ್ಘ ಹಾಗೂ ತೀವ್ರವಾದ ವಾಗ್ವಾದಗಳು ನಡೆದ ನಂತರ, ಅಧಿಕಾರಿಗಳು ಅಂತಿಮವಾಗಿ ಟೈಬ್ರೇಕರ್ ಮುಂದುವರಿಸಲು ಒಪ್ಪಿಗೆ ನೀಡಿದರು.