ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ಮೊದಲನೇ ಏಕದಿನ ಪಂದ್ಯದ ಗೆಲುವಿನ ಬಳಿಕ ಶುಭಮನ್‌ ಗಿಲ್‌ ಹೇಳಿದ್ದಿದು!

ಅಫ್ಘಾನಿಸ್ತಾನ ವಿರುದ್ಧ ಮೊದಲನೇ ಏಕದಿನ ಪಂದ್ಯದ ಗೆಲುವಿನ ಬಳಿಕ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಸಂತಸ ವ್ಯಕ್ತಪಡಿಸಿದರು. ಅವರು ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ರೋಹಿತ್‌ ಶರ್ಮಾ ರನ್‌ಔಟ್‌ ಹಾಗೂ ಯುವ ಬೌಲರ್‌ಗಳಾದ ಬ್ರಾರ್‌ ಹಾಗೂ ಹರ್ಷ್‌ ಅವರನ್ನು ಗುಣಗಾನ ಮಾಡಿದರು.

ಮೊದಲನೇ ಒಡಿಐ ಪಂದ್ಯದ ಗೆಲುವಿನ ಬಳಿಕ ಶುಭಮನ್‌ ಗಿಲ್‌ ಹೇಳಿಕೆ.

ಧರ್ಮಶಾಲಾ: ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 'ಪಂದ್ಯಶ್ರೇಷ್ಠ' (POTM) ಪ್ರಶಸ್ತಿ ಪಡೆದ ನಂತರ ಭಾರತದ ನಾಯಕ ಶುಭಮನ್ ಗಿಲ್ (Shubman Gill) ಸಂತೋಷ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ನಾಯಕ ಗಿಲ್, ಎದುರಾಳಿ ತಂಡದ ಶತಕವೀರ ರಹಮಾನಲ್ಲಾ ಗುರ್ಬಾಜ್ ಅವರನ್ನು ಶ್ಲಾಘಿಸಿದ್ದಲ್ಲದೆ, ಭಾರತೀಯ ಬೌಲರ್‌ಗಳ ಅದ್ಭುತ ಕಮ್‌ಬ್ಯಾಕ್‌ ಮತ್ತು ಪದಾರ್ಪಣೆ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನವನ್ನು ತೋರಿದ ಬೌಲರ್‌ಗಳಾದ ಗುರ್ನೂರ್‌ ಬ್ರಾರ್‌ ಮತ್ತು ಹರ್ಷ್‌ ದುಬೇ ಅವರನ್ನುಯ ಶ್ಲಾಘಿಸಿದರು.

ಮಳೆಯಿಂದಾಗಿ ಓವರ್‌ಗಳು ಕಡಿಮೆಯಾದ ಕಾರಣ, ಪಂದ್ಯವು ಪರಿಣಾಮಕಾರಿಯಾಗಿ ಟಿ20 ಪಂದ್ಯವಾಗಿ ಮಾರ್ಪಟ್ಟಿದೆ ಎಂದು ಪಂದ್ಯದ ನಂತರ ನಾಯಕ ಶುಭಮನ್ ಗಿಲ್ ಹೇಳಿದರು. "ನಾವು ಉತ್ತಮ ಆರಂಭ ಪಡೆದಿದ್ದೆವು , ಆದರೆ ಮಧ್ಯಮ ಹಂತದಲ್ಲಿ ಅವರು ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ರಹಮಾನಲ್ಲಾ ಗುರ್ಬಾಝ್‌ ನಿಜವಾಗಿಯೂ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದರು. ಆದಾಗ್ಯೂ, ನಮ್ಮ ಬೌಲರ್‌ಗಳು ಕಮ್‌ಬ್ಯಾಕ್‌ ಮತ್ತು ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡಿದ ರೀತಿ ಅತ್ಯುತ್ತಮವಾಗಿತ್ತು," ಎಂದು ಗುಣಗಾನ ಮಾಡಿದ್ದಾರೆ.

IND vs AFG: ಶುಭಮನ್‌ ಗಿಲ್‌ ಭರ್ಜರಿ ಬ್ಯಾಟಿಂಗ್‌, ಆಫ್ಘನ್‌ ಎದುರು ಭಾರತಕ್ಕೆ ಭರ್ಜರಿ ಜಯ!

ಸ್ಲಿಪ್‌ನಲ್ಲಿ ತಾವು ಪಡೆದ ಕ್ಯಾಚ್‌ ಬಗ್ಗೆ ಪ್ರತಿಕ್ರಿಯಿಸಿ, "ನಾನು ಸ್ಲಿಪ್‌ನಲ್ಲಿ ಕ್ಯಾಚ್‌ಗಳನ್ನು ತೆಗೆದುಕೊಳ್ಳಲು ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನಾನು ಇನ್ನೂ ಯಾವುದೇ ಅದ್ಭುತ ಕ್ಯಾಚ್‌ಗಳನ್ನು ತೆಗೆದುಕೊಂಡಿಲ್ಲ ಎಂದು ನನ್ನ ಫೀಲ್ಡಿಂಗ್ ತರಬೇತುದಾರರಿಗೆ ಹೇಳುತ್ತಿದ್ದೆ, ಆದ್ದರಿಂದ ಇಂದು ಇದನ್ನು ಪಡೆಯಲು ನನಗೆ ತುಂಬಾ ಸಂತೋಷವಾಯಿತು," ಎಂದು ಹೇಳಿದ ಅವರು, ರೋಹಿತ್‌ ಶರ್ಮಾ ಅವರ ರನ್‌ಔಟ್‌ ಬಗ್ಗೆ ಮಾತನಾಡಿ, "ರೋಹಿತ್ ಭಾಯ್‌ ಮತ್ತೊಮ್ಮೆ ರನ್‌ಔಟ್‌ ಆಗಿದ್ದ ವಿಡಿಯೊವನ್ನು ವೀಕ್ಷಿಸಿದರು ಹಾಗೂ ಅದಕ್ಕೆ ಪರವಾಗಿಲ್ಲ ಎಂದು ಹೇಳಿದರು," ಎಂದು ಭಾರತದ ನಾಯಕ ತಿಳಿಸಿದ್ದಾರೆ.



ಹರ್ಷ್‌-ಬ್ರಾರ್‌ಗೆ ಗಿಲ್‌ ಮೆಚ್ಚುಗೆ

ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಪದಾರ್ಪಣೆ ಪಂದ್ಯದಲ್ಲಿ ತಲಾ ಮೂರು ವಿಕೆಟ್‌ಗಳನ್ನು ಪಡೆದುಕೊಂಡ ಗುರ್ನೂರ್‌ ಬ್ರಾರ್‌ ಮತ್ತು ಹರ್ಷ್‌ ದುಬೇ ಅವರು ತಲಾ ಮೂರು ವಿಕೆಟ್‌ಗಳನ್ನು ಪಡೆದುಕೊಂಡರು. ಇವರನ್ನು ನಾಯಕ ಗಿಲ್‌ ಶ್ಲಾಘಿಸಿದರು.

"ಗುರ್ನೂರ್ ಅವರ ವೇಗ, ಲೆನ್ತ್‌ ಮತ್ತು ಸ್ವಿಂಗ್ ಅದ್ಭುತವಾಗಿತ್ತು. ಮತ್ತೊಂದೆಡೆ, ಹರ್ಷ್ ದುಬೆ ತಮ್ಮ ಮೊದಲ ಓವರ್‌ನಲ್ಲಿಯೇ 16 ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಅವರು ಧೈರ್ಯ ಕಳೆದುಕೊಳ್ಳಲಿಲ್ಲ; ಅವರು ನಿರಂತರವಾಗಿ ಚೆಂಡನ್ನು ಹಾರಿಸುತ್ತಲೇ ಇದ್ದರು, ಇದು ನೋಡಲು ಅದ್ಭುತವಾಗಿತ್ತು," ಎಂದು ಗುಣಗಾನ ಮಾಡಿದರು.

IND vs AFG: ಆರಂಭಿಕನಾಗಿ 16,000 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್‌ ಶರ್ಮಾ!

"ಒಡಿಐ ಪಂದ್ಯಗಳಲ್ಲಿ ಮಧ್ಯಮ ಓವರ್‌ಗಳು ಯಾವಾಗಲೂ ನಿರ್ಣಾಯಕವಾಗಿವೆ. ನಾವು ಒತ್ತಡವನ್ನು ನಿರ್ಮಿಸಲು ಮತ್ತು ಬೌಲ್‌ ಮಾಡುವಾಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಬ್ಯಾಟಿಂಗ್ ನಡೆಸುವಾಗ ವಿಕೆಟ್‌ಗಳನ್ನು ಕಳೆದುಕೊಳ್ಳದೆ ಪ್ರತಿ ಓವರ್‌ಗೆ ಆರು ರನ್‌ಗಳ ಸ್ಕೋರಿಂಗ್ ದರವನ್ನು ಕಾಯ್ದುಕೊಳ್ಳಲು ಸಾಧ್ಯವಾದರೆ, ಅದು ತಂಡಕ್ಕೆ ಉತ್ತಮವಾಗಿ ಕೆಲಸ ಮಾಡುತ್ತದೆ," ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.