ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎರಡನೇ ಒಡಿಐಗೂ ಮುನ್ನ ಗೌತಮ್‌ ಗಂಭೀರ್‌ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ ಋತುರಾಜ್‌ ಗಾಯಕ್ವಾಡ್!

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಪಂದ್ಯಕ್ಕೂ ಮುನ್ನ ಗೌತಮ್‌ ಗಂಭೀರ್‌ ನನಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸಾಮಾನ್ಯ ಆಟ ಆಡುವಂತೆ ತಿಳಿಸಿದ್ದರು ಎಂದು ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಸಲಹೆಯನ್ನು ನೆನೆದ ಋತುರಾಜ್‌ ಗಾಯಕ್ವಾಡ್‌.

ರಾಯ್ಪುರ: ಇಲ್ಲಿನ ಶಾಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ವಿರಾಟ್‌ ಕೊಹ್ಲಿ (Virat Kohli) ಅವರ ಅಮೋಘ ಪ್ರದರ್ಶನದ ಹೊರತಾಗಿಯೂ, ಟೀಮ್‌ ಇಂಡಿಯಾ ತವರು ನೆಲದಲ್ಲಿ ಸೋಲನುಭವಿಸಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌ (Ruturaj Gaikwad), ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ್ದಾರೆ. ಈ ಪಂದ್ಯದ ಸೋಲಿನ ಬಳಿಕ ಉಭಯ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ.

ಋತುರಾಜ್‌ ಗಾಯಕ್ವಾಡ್‌ ದೇಶಿ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ ವೃತ್ತಿ ಜೀವನದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಶ್ರೇಯಸ್‌ ಅಯ್ಯರ್‌ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗಾಯಕ್ವಾಡ್‌ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಗಾಯಕ್ವಾಡ್‌ ಶತಕ ಬಾರಿಸಿದರು. ಸೋಲಿನ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಂಡದ ಆಡಳಿತ ಮಂಡಳಿ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಆಭಾರಿ. ಪಂದ್ಯದ ಆರಂಭಕ್ಕೂ ಮುನ್ನ ಗೌತಮ್‌ ಗಂಭೀರ್‌ ಅವರು ನೀಡಿದ್ದ ಸಲಹೆಯಿಂದ ಶತಕ ಬಾರಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

IND vs SA: ಕೊಹ್ಲಿ, ಗಾಯಕ್ವಾಡ್‌ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಎರಡನೇ ಏಕದಿನ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಋತುರಾಜ್‌ ಗಾಯಕ್ವಾಡ್‌, "ಈ ಸರಣಿಯಲ್ಲಿ ನಾನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತೇನೆ ಎಂದು ನನಗೆ ಹೇಳಲಾಯಿತು ಮತ್ತು ನನ್ನ ಆಟವನ್ನು ಆನಂದಿಸಲು ಪ್ರೋತ್ಸಾಹಿಸಲಾಯಿತು. ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಮಾಡಬಲ್ಲ ಆರಂಭಿಕ ಆಟಗಾರನಿಗೆ ನಿರ್ವಹಣೆಯಿಂದ ಆ ರೀತಿಯ ವಿಶ್ವಾಸ ಸಿಕ್ಕಿರುವುದು ಒಂದು ಸೌಭಾಗ್ಯ ಎಂದು ನಾನು ಭಾವಿಸುತ್ತೇನೆ. ಆಶಾದಾಯಕವಾಗಿ, ಕೊನೆಯ ಪಂದ್ಯದಲ್ಲೂ ನಾನು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲೆ. ಆಟವನ್ನು ಆನಂದಿಸಿ ಮತ್ತು ನನ್ನ ನೈಜ ಆಟವನ್ನು ಆಡುವಂತೆ ಕೋಚ್ ನನಗೆ ಹೇಳಿದ್ದರು," ಎಂದು ಋತುರಾಜ್‌ ಗಾಯಕ್ವಾಡ್‌ ಬಹಿರಂಗಪಡಿಸಿದ್ದಾರೆ.

ತಮ್ಮ ಬ್ಯಾಟಿಂಗ್‌ ಶೈಲಿ ಬಗ್ಗೆ ಮಾತನಾಡಿದ ಅವರು ಒಮ್ಮೆ ಕ್ರೀಸ್‌ನಲ್ಲಿ ನೆಲೆಯೂರಿ ದೀರ್ಘ ಇನಿಂಗ್ಸ್‌ ಆಡಲು ಆದಷ್ಟು ಪ್ರಯತ್ನಿಸುತ್ತೇನೆ. ಕಳೆದ ವರ್ಷ ವಿಜಯ್‌ ಹಝಾರೆ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ರನ್‌ಗಳ ವಿಷಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್‌ ಕೊಹ್ಲಿ!

"ಏಕದಿನ ಮಾದರಿಯಲ್ಲಿ ನಾನು ಆರಂಭಿಕನಾಗಿ ಆಡುವಾಗಲೂ, ನಾನು ಯಾವಾಗಲೂ 40-45 ಓವರ್‌ಗಳವರೆಗೆ ಬ್ಯಾಟ್‌ ಮಾಡಲು ಮತ್ತು ನಂತರ ಇನಿಂಗ್ಸ್‌ ವೇಗದ ಗತಿಯನ್ನು ಹೆಚ್ಚಿಸಲು ಬಯಸುತ್ತಿದ್ದೆ. ನನಗೆ 11-40 ಓವರ್‌ಗಳನ್ನು ಹೇಗೆ ಆಡುವುದು ಮತ್ತು ಸ್ಟ್ರೈಕ್ ಅನ್ನು ತಿರುಗಿಸುವುದು, ನನ್ನ ಬೌಂಡರಿ ಆಯ್ಕೆಗಳನ್ನು ಕಂಡುಹಿಡಿಯುವುದು ಹೇಗೆ ಎಂದು ತಿಳಿದಿದೆ. ಮೊದಲ 10-15 ಎಸೆತಗಳನ್ನು ಚೆನ್ನಾಗಿ ಆಡುವುದು. ನಾನು ಸೆಟ್ ಆದಾಗಲೆಲ್ಲಾ, ನಾನು ದೀರ್ಘ ಇನಿಂಗ್ಸ್‌ ಆಡಲು ಪ್ರಯತ್ನಿಸುತ್ತೇನೆ," ಎಂದು ತಿಳಿಸಿದ್ದಾರೆ.

"ಕಳೆದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ ಮತ್ತು ನನ್ನ ಮನಸ್ಸಿನಲ್ಲಿ ಬಹಳಷ್ಟು ವಿಷಯಗಳು ಇವೆ. ನನ್ನ ಮನಸ್ಸಿನಲ್ಲಿ ಬಹಳಷ್ಟು ವಿಷಯಗಳು ನಡೆಯುತ್ತಿದ್ದವು. ಕ್ಲಬ್ ಕ್ರಿಕೆಟ್, ವೈಟ್-ಬಾಲ್ ಅಥವಾ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ನನ್ನ ರನ್‌ಗಳೊಂದಿಗೆ ಸ್ಥಿರವಾಗಿರುವುದು ನನ್ನ ಆಲೋಚನೆಯಾಗಿತ್ತು. ನನಗೆ ಅವಕಾಶ ಸಿಕ್ಕರೆ, ಒಳ್ಳೆಯದು ಮತ್ತು ಇಲ್ಲದಿದ್ದರೆ, ಇನ್ನೂ ಒಳ್ಳೆಯದು," ಎಂದು ಋತುರಾಜ್‌ ಹೇಳಿದ್ದಾರೆ.

IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌!

ಋತುರಾಜ್‌ ಗಾಯಕ್ವಾಡ್‌ ಮತ್ತು ವಿರಾಟ್‌ ಕೊಹ್ಲಿಯವರ ಶತಕಗಳ ಹೊರತಾಗಿಯೂ, ಭಾರತ ತಂಡ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ. ಆ ಮೂಲಕ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿವೆ.