ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻನಾವು ಸೋಲಲು ಅರ್ಹರುʼ-ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣ ತಿಳಿಸಿದ ಅಕ್ಷರ್‌ ಪಟೇಲ್‌!

Axar Patel Statement: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸೋಲಿನ ಬಳಿಕ ನಾಯಕ ಅಕ್ಷರ್‌ ಪಟೇಲ್‌ ಬೇಸರ ವ್ಯಕ್ತಪಡಿಸಿದರು. ನಾವು ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕಿದರೂ ಸೋಲಿಗೆ ಅರ್ಹರಾಗಿದ್ದೇವೆಂದು ಅಕ್ಷರ್‌ ಪಟೇಲ್‌ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣ ತಿಳಿಸಿದ ಅಕ್ಷರ್‌ ಪಟೇಲ್‌.

ನವದೆಹಲಿ: ಪಂಜಾಬ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ (Axar Patel) ಬೇಸರ ವ್ಯಕ್ತಪಡಿಸಿದ್ದಾರೆ. ಸಿಕ್ಕ ಅವಕಾಶಗಳನ್ನು ಕೈಚೆಲ್ಲಿಕೊಂಡ ನಾವು ಸೋಲಲು ಅರ್ಹರಾಗಿದ್ದೇವೆ ಎಂದಿದ್ದಾರೆ. ಆ ಮೂಲಕ ತಮ್ಮ ಕಳಪೆ ಫೀಲ್ಡಿಂಗ್‌ ಪ್ರದರ್ಶನವನ್ನು ತೋರಿದ ತಮ್ಮ ಆಟಗಾರರ ವಿರುದ್ಧ ಸ್ಪಿನ್‌ ಆಲ್‌ರೌಂಡರ್‌ ಗುಡಿಗಿದ್ದಾರೆ. ಪಂಜಾಬ್‌ ತಂಡದ ಚೇಸಿಂಗ್‌ನಲ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಎರಡು ಕ್ಯಾಚ್‌ಗಳನ್ನು ಕರುಣ್‌ ನಾಯರ್‌ ಕೈ ಚೆಲ್ಲಿದ್ದರು. ಒಂದು ವೇಳೆ ಅವರು ಎರಡೂ ಕ್ಯಾಚ್‌ಗಳನ್ನು ಯಶಸ್ವಿಯಾಗಿ ಪಡೆದಿದ್ದರೆ, ಪಂದ್ಯದ ಫಲಿತಾಂಶದಲ್ಲಿ ಸ್ವಲ್ಪ ಬದಲಾವಣೆಯನ್ನು ನೋಡಬಹುದಿತ್ತು.

ಶನಿವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ಎದುರು ದಾಖಲೆಯ ರನ್‌ ಚೇಸ್‌ ಮಾಡಿ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಕ್ಯಾಪಿಟಲ್ಸ್ ಎರಡು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 264 ರನ್ ಗಳಿಸಿತು; ಆದಾಗ್ಯೂ, ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಗೆದ್ದು ಬೀಗಿತು. ಐಪಿಎಲ್ ಇತಿಹಾಸದಲ್ಲಿಯೇ ದೊಡ್ಡ ಗುರಿ ಚೇಸ್‌ ಮಾಡಿದ ದಾಖಲೆ ಇದಾಗಿದೆ.

DC vs PBKS: ಕೆಎಲ್‌ ರಾಹುಲ್‌ ಶತಕ ವ್ಯರ್ಥ, ಹೈಸ್ಕೋರಿಂಗ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ಗೆ 6 ವಿಕೆಟ್‌ ರೋಚಕ ಜಯ!

ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರಾನ್ ಸಿಂಗ್ 76 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 71 ರನ್ ಗಳಿಸಿ ಅಜೇಯರಾಗಿ ಉಳಿದರು. ಕ್ಯಾಪಿಟಲ್ಸ್ ಪರ ಕುಲ್‌ದೀಪ್ ಯಾದವ್ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್ ತಲಾ ಒಂದು ವಿಕೆಟ್ ಪಡೆದರು.

ಅಕ್ಷರ್ ಪಟೇಲ್ ಹೇಳಿದ್ದೇನು?

"ಪಿಚ್‌ನ ಸ್ವರೂಪವನ್ನು ಗಮನಿಸಿದರೆ, ನೀವು ನಿಮ್ಮ ಬೌಲರ್‌ಗಳನ್ನು ಬೆಂಬಲಿಸದಿದ್ದರೆ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದಿದ್ದರೆ, ನನ್ನ ಪ್ರಕಾರ ನಾವು ಸೋಲಿಗೆ ಅರ್ಹರು. ಅದೇ ಮುಖ್ಯ ವಿಷಯ. ಪಿಚ್ ಚೆನ್ನಾಗಿತ್ತು ಮತ್ತು ಅದು ಕಿರಿದಾದ ಮೈದಾನವಾಗಿರುವುದರಿಂದ ಸಿಕ್ಸರ್‌ಗಳನ್ನು ಹೊಡೆಯುವುದು ಖಚಿತ. ಆದಾಗ್ಯೂ, ಅವಕಾಶಗಳು ಬಂದಾಗ ಮತ್ತು ನೀವು ಆ ಅವಕಾಶಗಳನ್ನು ಹಾಳುಮಾಡಿಕೊಂಡಾಗ ಅದು ದೊಡ್ಡ ತಪ್ಪಾಗುತ್ತದೆ. ಇಂದು (ಶನಿವಾರ) ನಾವು ಮಾಡಿದ್ದು ಇದೇ," ಎಂದು ಅಕ್ಷರ್‌ ಪಟೇಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

DC vs PBKS: ಫೀಲ್ಡಿಂಗ್‌ ವೇಳೆ ಲುಂಗಿ ಎನ್‌ಗಿಡಿಗೆ ಗಂಭೀರ ಗಾಯ, ಮೈದಾನಕ್ಕೆ ಆಗಮಿಸಿದ ಆಂಬ್ಯುಲೆನ್ಸ್‌!

"ಇಂತಹ ಪಿಚ್‌ನಲ್ಲಿ ನೀವು ನಿಮ್ಮ ಬೌಲರ್‌ಗಳನ್ನು ಬೆಂಬಲಿಸದಿದ್ದರೆ, ವಿಷಯಗಳು ಕಷ್ಟಕರವಾಗುತ್ತವೆ. ಅದೇ ಸಮಯದಲ್ಲಿ ನಮ್ಮ ಬೌಲಿಂಗ್ ಘಟಕವನ್ನು ಸಹ ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪವರ್‌ಪ್ಲೇ ಸಮಯದಲ್ಲಿ ನಾವು ಬೌಲ್‌ ಮಾಡಿದ ರೀತಿ, ಕೆಟ್ಟ ಫೀಲ್ಡಿಂಗ್ ಮತ್ತು ನಾವು ಹಾಳುಮಾಡಿದ ಅವಕಾಶಗಳೇ ನಮ್ಮ ಸೋಲಿಗೆ ಪ್ರಮುಖ ಕಾರಣಗಳಾಗಿವೆ. ಏಕೆಂದರೆ, ಈ ರೀತಿಯ ವಿಕೆಟ್‌ನಲ್ಲಿ 264 ರನ್‌ಗಳು ಅತ್ಯಂತ ಗೌರವಾನ್ವಿತ ಮೊತ್ತವಾಗಿತ್ತು," ಎಂದು ಹೇಳಿದ್ದಾರೆ.

ಪಂಜಾಬ್‌ ಕಿಂಗ್ಸ್‌ ತಂಡದ ಚೇಸಿಂಗ್‌ ಸಮಯದಲ್ಲಿ ಶ್ರೇಯಸ್ ಅಯ್ಯರ್ 28 ಮತ್ತು 35 ರನ್‌ಗಳಿಸಿದ್ದಾಗ ಎರಡು ಕ್ಯಾಚ್‌ಗಳನ್ನು ಕರುಣ್ ನಾಯರ್ ಕೈಬಿಟ್ಟರು ಎಂಬುದು ಗಮನಿಸಬೇಕಾದ ಸಂಗತಿ.ಇದು ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಅಯ್ಯರ್ ಅಜೇಯ 71 ರನ್‌ ಗಳಿಸಿ ತಮ್ಮ ತಂಡವನ್ನು ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲ್ಲಿಸಿದರು.