ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs LSG: ಆರ್‌ಸಿಬಿ ಬೌಲರ್‌ಗಳ ಪ್ರದರ್ಶನದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರಜತ್‌ ಪಾಟಿದಾರ್‌!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌, ತಮ್ಮ ತಂಡದ ಬೌಲಿಂಗ್‌ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದರ ಜೊತೆಗೆ ಫೀಲ್ಡಿಂಗ್‌ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಆರ್‌ಸಿಬಿ 5 ವಿಕೆಟ್‌ನಿಂದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿತು.

ಆರ್‌ಸಿಬಿ ಬೌಲರ್‌ಗಳನ್ನು ಶ್ಲಾಘಿಸಿದ ರಜತ್‌ ಪಾಟಿದಾರ್‌.

ಬೆಂಗಳೂರು: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 23ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ 5 ವಿಕೆಟ್‌ ಗೆಲುವಿನ ಬಗ್ಗೆ ನಾಯಕ ರಜತ್‌ ಪಾಟಿದಾರ್‌ (Rajat Patidar)ಸಂತಸ ವ್ಯಕ್ತಪಡಿಸಿದರು. ಅದರಲ್ಲಿಯೂ ವಿಶೇಷವಾಗಿ ತಂಡದ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದರ್ಶನದ ಬಗ್ಗೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆರ್‌ಸಿಬಿ ಈ ಪಂದ್ಯದ ಗೆಲುವಿನ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿತು.

ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಇನಿಂಗ್ಸ್‌ ಕೇವಲ 146 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿಯ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪವರ್‌ಪ್ಲೇ ಸಮಯದಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡರೂ, ಲಖನೌ ಕೇವಲ 35 ರನ್‌ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಆರ್‌ಸಿಬಿ ಪರ ರಸಿಕ್‌ ದಾರ್‌ ಸಲಾಮ್‌ 4 ವಿಕೆಟ್‌, ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಹಾಗೂ ಜಾಶ ಹೇಝಲ್‌ವುಡ್‌ ಒಂದು ವಿಕೆಟ್‌ ಪಡೆದು ಅತ್ಯುತ್ತಮ ಎಕಾನಮಿ ಬೌಲಿಂಗ್‌ ಸ್ಪೆಲ್‌ ಹಾಕಿದರು. ಬಳಿಕ 147 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, 16ನೇ ಓವರ್‌ನಲ್ಲಿ ಆರಾಮವಾಗಿ ಪಂದ್ಯವನ್ನು ಗೆದ್ದುಕೊಂಡಿತು.

RCB vs LSG: ʻಮಂಡಿ ನೋವಿತ್ತುʼ-ಆರೆಂಜ್‌ ಕ್ಯಾಪ್‌ ತೊಟ್ಟು ಹೆಲ್ತ್‌ ಅಪ್‌ಡೇಟ್‌ ಕೊಟ್ಟ ವಿರಾಟ್‌ ಕೊಹ್ಲಿ!

ಬೌಲರ್‌ಗಳಿಗೆ ರಜತ್‌ ಪಾಟಿದಾರ್‌ ಮೆಚ್ಚುಗೆ

ಗೆಲುವಿನ ನಂತರ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲರ್‌ಗಳಿಗೆ ಕ್ರೆಡಿಟ್ ನೀಡಿದರು. "ಬೌಲಿಂಗ್ ಅದ್ಭುತವಾಗಿತ್ತು. ನಾವು ಟಾಸ್ ಗೆದ್ದಿದ್ದೇವೆ ಎಂಬುದು ಅತ್ಯುತ್ತಮ ಭಾಗ ಎಂದು ನಾನು ಭಾವಿಸುತ್ತೇನೆ. ನಮ್ಮ ವೇಗದ ಬೌಲರ್‌ಗಳು ಕಾರ್ಯನಿರ್ವಹಿಸಿದ ರೀತಿಯನ್ನು ನೋಡುವುದು ಸಂತೋಷಕರವಾಗಿತ್ತು. ಕೃಣಾಲ್ ಪಾಂಡ್ಯ ಮುಂದೆ ಯಾವ ಬೌಲ್‌ ಮಾಡುತ್ತಾರೆಂದು ನನಗೆ ಊಹಿಸಲು ಸಾಧ್ಯವಾಗಲಿಲ್ಲ, ಆದರೆ ಅವರು ತುಂಬಾ ಧೈರ್ಯಶಾಲಿ ಬೌಲರ್ ಎಂದು ನಾನು ಹೇಳಲೇಬೇಕು. ಸುಯಾಶ್ ತಮ್ಮ ಸ್ಟಂಪ್-ಟು-ಸ್ಟಂಪ್ ಲೈನ್‌ ಬೌಲ್‌ ಮಾಡುವುದನ್ನು ನೋಡುವುದು ಸಹ ಅದ್ಭುತವಾಗಿತ್ತು," ಎಂದು ಹೇಳಿದ್ದಾರೆ.



ಆರ್‌ಸಿಬಿ ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಝಲ್‌ವುಡ್ ಎಂಬ ಇಬ್ಬರು ಅನುಭವಿ ಬೌಲರ್‌ಗಳಿದ್ದಾರೆ. ಪವರ್‌ಪ್ಲೇ ಸಮಯದಲ್ಲಿ ಇಬ್ಬರೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾಯಕನಾಗಿ, ಟಿ20 ಲೀಗ್‌ನಲ್ಲಿ ನಿಮ್ಮ ಬಳಿ ಅನುಭವಿ ಬೌಲರ್‌ಗಳಿದ್ದರೆ, ನಿಮ್ಮ ಕೆಲಸವು ತುಂಬಾ ಸುಲಭವಾಗುತ್ತದೆ. ಮುಂದೆ ಏನು ಮಾಡಬೇಕೆಂದು ನೀವು ಅವರಿಗೆ ಸೂಚನೆ ನೀಡುವ ಅಗತ್ಯವಿಲ್ಲ. ಅವರ ಅನುಭವ ಮತ್ತು ಒಳನೋಟಗಳು ಉಳಿದ ಬೌಲಿಂಗ್ ಘಟಕಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗುತ್ತಿದೆ," ಎಂದರು.

IPL 2026: 4 ವಿಕೆಟ್‌ ಕಿತ್ತು ಆರ್‌ಸಿಬಿ ಡೆತ್ ಬೌಲಿಂಗ್ ಬಲ ಹೆಚ್ಚಿಸಿದ ರಸಿಖ್‌ ದಾರ್‌ ಸಲಾಂ ಯಾರು?

ಆರ್‌ಸಿಬಿಯ ಫೀಲ್ಡಿಂಗ್ ಬಗ್ಗೆ ರಜತ್‌ ಪ್ರತಿಕ್ರಿಯೆ

ಆರ್‌ಸಿಬಿಯ ಫೀಲ್ಡರ್‌ಗಳು ಸಹ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಫೀಲ್ಡಿಂಗ್ ಕುರಿತು ಮಾತನಾಡಿದ ರಜತ್ ಪಾಟಿದಾರ್‌, "ಐಪಿಎಲ್ ಆರಂಭದಿಂದಲೂ ತಂಡವು ತನ್ನ ಫೀಲ್ಡಿಂಗ್ ಪ್ರಯತ್ನಗಳನ್ನು ತೀವ್ರಗೊಳಿಸುವ ಕೆಲಸ ಮಾಡುತ್ತಿದೆ. ಸಾಲ್ಟ್ ಅದ್ಭುತ ಫೀಲ್ಡಿಂಗ್ ಕೌಶಲಗಳನ್ನು ಸಹ ಪ್ರದರ್ಶಿಸಿದರು. ಅವರು ಆಗಾಗ್ಗೆ ಒಂಟಿಯಾಗಿ ಅಥವಾ ಗಾಳಿಯಲ್ಲಿ ಚಮತ್ಕಾರಿಕವಾಗಿ ಹಾರಿ ಕ್ಯಾಚ್‌ಗಳನ್ನು ತೆಗೆದುಕೊಳ್ಳುತ್ತಾರೆ; ಅದು ನಿಜವಾಗಿಯೂ ಅವರ ಅದ್ಭುತ ಕ್ಯಾಚ್ ಆಗಿತ್ತು. ಇದೀಗ, ನಾವು ಅದನ್ನು ಒಂದು ಸಮಯದಲ್ಲಿ ಒಂದು ಪಂದ್ಯವನ್ನು ತೆಗೆದುಕೊಳ್ಳುವತ್ತ ಗಮನ ಹರಿಸುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.