ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

LSG vs KKR: ಫೀಲ್ಡಿಂಗ್‌ಗೆ ಅಡ್ಡಿಪಡಿಸಿ ವಿವಾದಾತ್ಮಕ ತೀರ್ಪಿಗೆ ಔಟಾದ ಅಂಗ್‌ಕ್ರಿಶ್‌ ರಘುವಂಶಿ!

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಅಂಪೈರ್ ಔಟ್ ಎಂದು ಘೋಷಿಸಿದರು. ಲಖನೌ ಸೂಪರ್ ಜಯಂಟ್ಸ್ ತಂಡದ ರನ್‌ಔಟ್‌ಗೆ ಕೆಕೆಆರ್‌ ಬ್ಯಾಟ್ಸ್‌ಮನ್‌ ಅನಿರೀಕ್ಷಿತವಾಗಿ ಅಡ್ಡಿಪಡಿಸಿದರು. ಲಖನೌ ತಂಡದ ಮನವಿಯನ್ನು ಸ್ವೀಕರಿಸಿದ ಅಂಪೈರ್ ಔಟ್ ಎಂದು ತೀರ್ಪು ಪ್ರಕಟಿಸಿದರು. ಈ ತೀರ್ಪಿನ ಬಗ್ಗೆ ಕೆಕೆಆರ್‌ಗೆ ಅಸಮಾಧಾನವಿದೆ.

ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ನಿಯಮದಿಂದ ಔಟ್‌ ಆದ ರಘುವಂಶಿ.

ಲಖನೌ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) 2026ರ ಸಾಲಿನ ಪಂದ್ಯದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ (Angrish Raghuvansh) ಅವರನ್ನು "ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ" ಕಾರಣಕ್ಕಾಗಿ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಏಕಾನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜಯಂಟ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ (LSG vs KKR) ನಡುವಣ ಪಂದ್ಯದಲ್ಲಿ ಈ ಘಟನೆ ನಡೆಯಿತು.

ಕೆಕೆಆರ್‌ ಇನಿಂಗ್ಸ್‌ನ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರಿನ್ಸ್ ಯಾದವ್ ಅವರ ಬೌಲಿಂಗ್‌ನಲ್ಲಿ ಅಂಗ್‌ಕ್ರಿಶ್ ಮಿಡ್-ಆನ್ ಕಡೆಗೆ ಶಾಟ್ ಹೊಡೆದರು. ಅವರು ತ್ವರಿತವಾಗಿ ಒಂದು ರನ್‌ ಪಡೆಯಲು ಮುಂದಾದರು, ಆದರೆ ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದ ಕ್ಯಾಮೆರಾನ್ ಗ್ರೀನ್ ಅವರ ಕರೆಯನ್ನು ತಿರಸ್ಕರಿಸಿದರು. ಅಂಗ್‌ಕ್ರಿಶ್ ರಘುವಂಶಿ ಕ್ರೀಸ್‌ಗೆ ಮರಳುವ ವೇಳೆ ಫೀಲ್ಡರ್‌ ಥ್ರೋನಲ್ಲಿ ಚೆಂಡು ಅವರ ದೇಹಕ್ಕೆ ತಗುಲಿತು.

ಅಂಗ್‌ಕ್ರಿಶ್ ರಘುವಂಶಿ ದೇಹಕ್ಕೆ ಚೆಂಡು ತಗುಲಿದ ನಂತರ ಲಖನೌ ಸೂಪರ್ ಜಯಂಟ್ಸ್‌ ಫೀಲ್ಡರ್‌ಗಳು ಮೇಲ್ಮನವಿ ಸಲ್ಲಿಸಿದರು. ಫೀಲ್ಡ್‌ ಅಂಪೈರ್ ತೀರ್ಪಿಗಾಗಿ ಮೂರನೇ ಅಂಪೈರ್‌ ಮೊರೆ ಹೋದರು. ಮೂರನೇ ಅಂಪೈರ್ ವಿಡಿಯೊ ರೀಪ್ಲೇಗಳನ್ನು ವೀಕ್ಷಿಸಿದ ನಂತರ, ಬ್ಯಾಟ್ಸ್‌ಮನ್ ತನ್ನ ರನ್ನಿಂಗ್ ಲೈನ್ ಅನ್ನು ಬದಲಾಯಿಸಿದ್ದಾರೆ ಎಂದು ತೀರ್ಮಾನಿಸಿದರು ಮತ್ತು ನಂತರ "ಫೀಲ್ಡಿಂಗ್‌ ಅಡ್ಡಿಪಡಿಸುವ" ನಿಯಮದ ಅಡಿಯಲ್ಲಿ ಅಂಗ್‌ಕ್ರಿಶ್ ರಘುವಂಶಿ ಅವರನ್ನು ಔಟ್ ಎಂದು ಘೋಷಿಸಿದರು.

‌IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 8 ವಿಕೆಟ್‌ಗಳಿಂದ ಗೆದ್ದು ಬೀಗಿದ ಗುಜರಾತ್‌ ಟೈಟನ್ಸ್!

ಈ ನಿರ್ಧಾರದಿಂದ ಕೆಕೆಆರ್‌ ಅಸಮಾಧಾನವನ್ನು ವ್ಯಕ್ತಪಡಿಸಿತು. ಅಂಗ್‌ಕ್ರಿಶ್ ರಘುವಂಶಿ ಹಿಂತಿರುಗುವಾಗ ನಿರಾಶೆಗೊಂಡಂತೆ ಕಂಡುಬಂದರು. ಕೋಪದ ಭರದಲ್ಲಿ ಅವರು ತಮ್ಮ ಬ್ಯಾಟ್ ಅನ್ನು ನೆಲಕ್ಕೆ ಹೊಡೆದು ಹೆಲ್ಮೆಟ್ ಅನ್ನು ಎಸೆದರು. ತಂಡದ ಮುಖ್ಯ ತರಬೇತುದಾರ ಅಭಿಷೇಕ್ ನಾಯರ್ ಇನ್ನೂ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುವುದು ಕಂಡುಬಂತು. ಅಂಗ್‌ಕ್ರಿಶ್ 8 ಎಸೆತಗಳಲ್ಲಿ 9 ರನ್ ಗಳಿಸಿದರು.



ಅಂಗ್‌ಕ್ರಿಶ್ ರಘುವಂಶಿ ಐಪಿಎಲ್‌ ಟೂರ್ನಿಯಲ್ಲಿ 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ' ಕಾರಣಕ್ಕಾಗಿ ಔಟಾದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2013ರಲ್ಲಿ ಕೆಕೆಆರ್ ಪರ ಆಡುವಾಗ ಯೂಸಫ್ ಪಠಾಣ್ ಅವರನ್ನು ಈ ರೀತಿ ಔಟ್ ಮಾಡಲಾಗಿತ್ತು. 2019ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಮತ್ತು 2024 ರಲ್ಲಿ ಸಿಎಸ್‌ಕೆಯ ರವೀಂದ್ರ ಜಡೇಜಾ ಅವರನ್ನು 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ' ನಿಯಮದಡಿಯಲ್ಲಿ ಔಟ್ ಮಾಡಲಾಗಿತ್ತು. ಇದೀಗ ಇವರ ಸಾಲಿಗೆ ಅಂಗ್‌ಕ್ರಿಶ್ ರಘುವಂಶಿ ಸೇರ್ಪಡೆಯಾಗಿದ್ದಾರೆ.

IPL 2026: ತಮ್ಮ ಕುತ್ತಿಗೆ ಗಾಯದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಲುಂಗಿ ಎನ್‌ಗಿಡಿ!

ಐಪಿಎಲ್‌ನಲ್ಲಿ 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿ' ಔಟ್‌ ಆದ ಬ್ಯಾಟರ್ಸ್‌

ಯೂಸಫ್ ಪಠಾಣ್ vs ಪುಣೆ ವಾರಿಯರ್ಸ್ (2013)

ಅಮಿತ್ ಮಿಶ್ರಾ vs ಸನ್‌ರೈಸರ್ಸ್ ಹೈದರಾಬಾದ್ (2019)

ರವೀಂದ್ರ ಜಡೇಜಾ vs ರಾಜಸ್ಥಾನ್ ರಾಯಲ್ಸ್ (2024)

ಆಂಗ್‌ಕ್ರಿಶ್ ರಘುವಂಶಿ vs ಲಖನೌ ಸೂಪರ್ ಜಯಂಟ್ಸ್ (2026)