ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KMCL 2025: ಮೂರನೇ ಸ್ಥಾನದೊಂದಿಗೆ ಟೂರ್ನಿಯ ಅಭಿಯಾನ ಮುಗಿಸಿದ ವಿಶ್ವವಾಣಿ ಕ್ರಿಕೆಟ್‌ ತಂಡ!

ಕರ್ನಾಟಕ ಮೀಡಿಯಾ ಚಾಂಪಿಯನ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿಶ್ವವಾಣಿ ತಂಡ ಮೂರನೇ ಸ್ಥಾನದೊಂದಿಗೆ ಲೀಗ್‌ ಹಂತವನ್ನು ಮುಗಿಸಿತು. ಈ ಟೂರ್ನಿಯಲ್ಲಿ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ವಿಶ್ವವಾಣಿ ತಂಡ, ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆಯಿತು. ಮೂರನೇ ಸ್ಥಾನ ಪಡೆಯುವ ಮೂಲಕ ಸೂಪರ್‌-8ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾದರೂ ವಿಶ್ವವಾಣಿ ತಂಡ ಮುಂದಿನ ಸೀಸನ್‌ನಲ್ಲಿ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ವಿಶ್ವವಾಣಿ ಕ್ರಿಕೆಟ್‌ ತಂಡ.

ಬೆಂಗಳೂರು: ವಿಶ್ವವಾಣಿ ಕ್ರಿಕೆಟ್‌ ತಂಡ 2025ರ ಕರ್ನಾಟಕ ಮೀಡಿಯಾ ಚಾಂಪಿಯನ್‌ ಲೀಗ್‌ ಟೆನಿಸ್‌ ಬಾಲ್‌ ಕ್ರಿಕಟ್‌ ಟೂರ್ನಿಯನ್ನು (KMCL 2025) ಮೂರು ಗೆಲುವುಗಳ ಮೂಲಕ ಅಂತ್ಯಗೊಳಿಸಿದೆ. ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ವಿಶ್ವವಾಣಿ ಕ್ರಿಕೆಟ್‌ ತಂಡ (Vishwavani Cricket Team) ಲೀಗ್‌ ಹಂತದಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿತು. ಒಟ್ಟು ಆರು ಅಂಕಗಳನ್ನು ಕಲೆ ಹಾಕಿದರೂ ಡಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನ ಪಡೆದರೂ ಟೂರ್ನಿಯ ಸೂಪರ್‌-8ಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು. ಆದರೂ ಈ ಮೂರು ಗೆಲುವುಗಳ ಮೂಲಕ ವಿಶ್ವವಾಣಿ ತಂಡ, ಮುಂದಿನ ಟೂರ್ನಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಗರ್ಭಕಂಠ ಕೋಶ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೈಪರ್‌ ಸ್ಪೋರ್ಟ್ಸ್‌ ಹಾಗೂ ವೆಲ್ಫೇರ್ ಅಸೋಸಿಯೇಷನ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಆರು ಓವರ್‌ಗಳ ಟೆನಿಸ್‌ ಬಾಲ್‌ ಟೂರ್ನಿಯಲ್ಲಿ ಒಟ್ಟು 24 ತಂಟಗಳು ನಾಲ್ಕು ಗುಂಪುಗಳ ಮೂಲಕ ಲೀಗ್‌ ಹಂತದಲ್ಲಿ ಕಾದಾಟ ನಡೆಸಿದ್ದವು. ವಿಶ್ವವಾಣಿ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಮಾರ್ಚ್‌ 16 ರಂದು ಸೋಮವಾರ ವಿಶ್ವವಾಣಿ ತಂಡ, ತನ್ನ ಮೊದಲನೇ ಪಂದ್ಯದಲ್ಲಿ ವಿಜಯವಾಣಿ ಎದುರು ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ವಿಶ್ವವಾಣಿ, ರಮೇಶ್‌(29 ರನ್‌) ಅವರ ಬ್ಯಾಟಿಂಗ್‌ ಬಲದಿಂದ 6 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 61 ರನ್‌ ಗಳಿಸಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ವಿಜಯವಾಣಿ, ಕೇವಲ 3 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 63 ರನ್‌ ಗಳಿಸಿ 10 ವಿಕೆಟ್‌ ಗೆಲುವು ಪಡೆಯಿತು.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ ಅಸಮಾಧಾನ? ಎಚ್‌ ಬದ್ರಿನಾಥ್‌ ಹೇಳಿದ್ದಿದು!

ನಂತರ ನಡೆದಿದ್ದ ಅಶ್ವವೇಗ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ವಿಶ್ವವಾಣಿ ತಂಡ, 8 ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ್ದ ಅಶ್ವವೇಗ 4 ವಿಕೆಟ್‌ ನಷ್ಟಕ್ಕೆ 62 ರನ್‌ ಗಳಿಸಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ವಿಶ್ವವಾಣಿ, ರಮೇಶ್‌ (29 ರನ್‌) ಅವರ ಬ್ಯಾಟಿಂಗ್‌ ಬಲದಿಂದ 5 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 63 ರನ್‌ ಗಳಿಸಿ ಗೆದ್ದು ಬೀಗಿತು. ನಂತರ ನಡೆದಿದ್ದ ಮೂರನೇ ಪಂದ್ಯದಲ್ಲಿ ವಿಶ್ವವಾಣಿ ತಂಡ, ಬ್ಯಾಟಿಂಗ್‌ ವೈಫಲ್ಯದಿಂದಾಗಿ ವಾರ್ತಾಭಾರತಿ ಎದುರು 9 ವಿಕೆಟ್‌ಗಳ ಸೋಲು ಅನುಭವಿಸಿತ್ತು.

ಮಾರ್ಚ್‌ 17 ರಂದು ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ವಿಶ್ವವಾಣಿ ತಂಡ, ಹೊಸದಿಂಗತ ಎದುರು 8 ವಿಕೆಟ್‌ಗಳ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಹೊಸ ದಿಗಂತ ತಂಡ, 5 ವಿಕೆಟ್‌ ನಷ್ಟಕ್ಕೆ 65 ರನ್‌ ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ವಿಶ್ವವಾಣಿ, ರವೀಂದ್ರ ( 30 ರನ್‌) ಅವರ ಬ್ಯಾಟಿಂಗ್‌ ಬಲದಿಂದ 2 ವಿಕೆಟ್‌ ನಷ್ಟಕ್ಕೆ 66 ರನ್‌ ಗಳಿಸಿ ಗೆದ್ದು ಬೀಗಿತು.

IPL 2026: ಪ್ಯಾಟ್‌ ಕಮಿನ್ಸ್‌ ಅನುಪಸ್ಥಿತಿ, ಸನ್‌ರೈಸರ್ಸ್‌ ಹೈದರಾಬಾದ್‌ಗೆ ಇಶಾನ್‌ ಕಿಶನ್‌ ನಾಯಕ!

ನಂತರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ವಿಶ್ವವಾಣಿ ತಂಡ, ಪ್ರೆಸ್‌ ಕ್ಲಬ್‌ ಬೆಂಗಳೂರು ವಿರುದ್ಧ 8 ವಿಕೆಟ್‌ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪ್ರೆಸ್‌ ಕ್ಲಬ್‌ ತಂಡ, ರವೀಂದ್ರ (11-3) ಹಾಗೂ ಕೃಷ್ಣ (13ಕ್ಕೆ 3 ) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 7 ವಿಕೆಟ್‌ ನಷ್ಟಕ್ಕೆ 52 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ವಿಶ್ವವಾಣಿ, ರವೀಂದ್ರ ( 32* ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 2.4 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 53 ರನ್‌ ಗಳಿಸಿ ಗೆದ್ದು ಬೀಗಿತು.