ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs SRH: ಐಪಿಎಲ್ ಪಂದ್ಯದ ವೇಳೆ ವಾಂಖೆಡೆಯಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

IPL 2026: ಕಾಂಬ್ಳಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅವರ ನಿರಂತರ ಮನೋಭಾವಕ್ಕೆ ಸಾಕ್ಷಿಯಾಗಿತ್ತು. ಸರಳವಾದ ಬಿಳಿ ಬಣ್ಣದ ಚೆಕ್ಡ್ ಶರ್ಟ್, ಕಂದು ಬಣ್ಣದ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದ 54 ವರ್ಷದ ಅವರು ದುರ್ಬಲವಾಗಿ ಕಾಣುತ್ತಿದ್ದರು. ಕ್ರೀಡಾಂಗಣದ ಆವರಣದಲ್ಲಿ ಇಬ್ಬರು ಸಹಚರರ ಸಹಾಯದ ಮೂಲಕ ನಡೆದಾಡಿದರು.

Vinod Kambli

ಮುಂಬಯಿ, ಎ.30: ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌(MI vs SRH) ನಡುವೆ ಬುಧವಾರ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂ(Wankhede Stadium)ನಲ್ಲಿ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯ ಹೃದಯಸ್ಪರ್ಶಿ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಒಂದು ಕಾಲದಲ್ಲಿ ಈ ಮೈದಾನದಲ್ಲಿ ಅದ್ಭುತವಾದ ಬ್ಯಾಟಿಂಗ್‌ ಮೂಲಕ ಪ್ರಾಬಲ್ಯ ಸಾಧಿಸಿದ್ದ ದಿಗ್ಗಜ ವಿನೋದ್ ಕಾಂಬ್ಳಿ(Vinod Kambli) ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚೆಗಷ್ಟೇ ಅನಾರೋಗ್ಯದಿಂದ ಕಾಂಬ್ಳಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ವೇಳೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ನಂತರ ಪತ್ತೆಯಾಗಿತ್ತು. ಕಳೆದ ವರ್ಷ, ಮೂತ್ರಪಿಂಡದ ಸೋಂಕು ಮತ್ತು ಸ್ನಾಯು ನೋವಿನ ಚಿಕಿತ್ಸೆಗಾಗಿ ವಿನೋದ್ ಕಾಂಬ್ಳಿ ಥಾಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಅವರ ಆರೋಗ್ಯದ ಬಗ್ಗೆ ದೊಡ್ಡ ಚರ್ಚೆ ನಡೆಯಿತು. ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರಂತಹ ದಿಗ್ಗಜ ಆಟಗಾರರು ಸಹ ಕಾಂಬ್ಳಿಗೆ ಆರ್ಥಿಕ ನೆರವು ನೀಡಿದ್ದರು.

ಕಾಂಬ್ಳಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅವರ ನಿರಂತರ ಮನೋಭಾವಕ್ಕೆ ಸಾಕ್ಷಿಯಾಗಿತ್ತು. ಸರಳವಾದ ಬಿಳಿ ಬಣ್ಣದ ಚೆಕ್ಡ್ ಶರ್ಟ್, ಕಂದು ಬಣ್ಣದ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದ 54 ವರ್ಷದ ಅವರು ದುರ್ಬಲವಾಗಿ ಕಾಣುತ್ತಿದ್ದರು. ಕ್ರೀಡಾಂಗಣದ ಆವರಣದಲ್ಲಿ ಇಬ್ಬರು ಸಹಚರರ ಸಹಾಯದ ಮೂಲಕ ನಡೆದಾಡಿದರು.



ಈ ತಿಂಗಳ ಆರಂಭದಲ್ಲಿ, ಮಾಜಿ ಕ್ರಿಕೆಟಿಗರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂಬ ವದಂತಿಗಳು ಹರಡಿದ್ದವು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪಾರ್ಶ್ವವಾಯುವಿನ ಸಂಭವನೀಯ ಅಪಾಯದ ಬಗ್ಗೆ ನಿರ್ದಿಷ್ಟವಾಗಿ ಕಳವಳ ವ್ಯಕ್ತಪಡಿಸಲಾಯಿತು. ಇದೀಗ ಅವರನ್ನು ಕಂಡು ಸದ್ಯ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಇಂದಿನ ಪಂದ್ಯದಲ್ಲಿ ಆರ್‌ಸಿಬಿ-ಟೈಟಾನ್ಸ್‌ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

ಉತ್ತಮ ಕ್ರಿಕೆಟಿಗರಾಗಿದ್ದ ವಿನೋದ್ ಕಾಂಬ್ಳಿ 2000ದಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಅದಕ್ಕಿಂತ ಮೊದಲು ಭಾರತ ಪರ 17 ಟೆಸ್ಟ್‌ ಹಾಗೂ 104 ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 2011ರಲ್ಲಿ ನಿವೃತ್ತಿ ಘೋಷಿಸಿದರು. ಆ ಬಳಿಕ ಅವರು ಮುಂಬಯಿ ಕ್ರಿಕೆಟ್‌ ಲೀಗ್‌ನ ತಂಡವೊಂದರ ಕೋಚ್‌ ಆಗಿದ್ದರು.