ಮುಂಬಯಿ, ಎ.17: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ(vinod kambli health update) ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳನ್ನು ಅವರ ಪತ್ನಿ ತಳ್ಳಿಹಾಕಿದ್ದಾರೆ. ಗಂಭೀರ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. "ದೇವರ ದಯೆಯಿಂದ, ವಿನೋದ್ ಚೆನ್ನಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾರು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಪತ್ನಿ ಆಂಡ್ರಿಯಾ ಹೆವಿಟ್(Andrea Hewitt) ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಬ್ಳಿ ಅವರು ಸ್ಮರಣಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮತ್ತಷ್ಟು ತೊಡಕುಗಳ ಅಪಾಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಗುರುವಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿದ್ದು, ಇದು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂಬ ಕಳವಳ ವ್ಯಕ್ತವಾಗಿತ್ತು. ಆದಾಗ್ಯೂ, ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಹೆವಿಟ್, ಪತಿಯ ಆರೋಗ್ಯದ ಸುತ್ತಲಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ.
'ವಿನೋದ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಇದೆ. ಅವರು ಮೊದಲೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲದ ಕಾರಣ ಅದನ್ನು ವೈದ್ಯರು ತೆಗೆದುಹಾಕಲು ಸಾಧ್ಯವಿಲ್ಲ. ಇದರಿಂದಾಗಿ ಅವರಿಗೆ ಹಠಾತ್ ಮಿದುಳಿನ ಪಾರ್ಶ್ವವಾಯು ಬರುವ ಅಪಾಯ ಹೆಚ್ಚಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇದರ ಹೊರತಾಗಿಯೂ, ಅವರು ಉಳಿಯಲು ಮತ್ತು ಅವರ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಶ್ರಮಿಸುತ್ತಿದ್ದಾರೆ' ಎಂದು ಕಾಂಬ್ಳಿಯವರ ಆಪ್ತ ಸ್ನೇಹಿತ ಮಾರ್ಕಸ್ ಕೌಟೊ ಹೇಳಿದ್ದರು.
MI vs PBKS: ಸತತ ನಾಲ್ಕು ಸೋಲು; ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ ಹಾರ್ದಿಕ್ ಪಾಂಡ್ಯ
ಉತ್ತಮ ಕ್ರಿಕೆಟಿಗರಾಗಿದ್ದ ವಿನೋದ್ ಕಾಂಬ್ಳಿ 2000ದಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಅದಕ್ಕಿಂತ ಮೊದಲು ಭಾರತ ಪರ 17 ಟೆಸ್ಟ್ ಹಾಗೂ 104 ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 2011ರಲ್ಲಿ ನಿವೃತ್ತಿ ಘೋಷಿಸಿದರು. ಆ ಬಳಿಕ ಅವರು ಮುಂಬಯಿ ಕ್ರಿಕೆಟ್ ಲೀಗ್ನ ತಂಡವೊಂದರ ಕೋಚ್ ಆಗಿದ್ದರು. ಬಳಿಕ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಮುಂಬಯಿಯ ನೆರುಲ್ನಲ್ಲಿರುವ ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೊಚಿಂಗ್ ಹುದ್ದೆ ಕೊಡಿಸಿದ್ದರು. ಅದು ಮನೆಗಿಂತ ದೂರವಾಗಿದೆ ಎಂಬ ಕಾರಣಕ್ಕೆ ಅವರು ಹೋಗಿರಲಿಲ್ಲ.