ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿ ಹುಚ್ಚಾಟ! ಜನ ಬದುಕುಳಿದಿದ್ದೇ ಅದೃಷ್ಟ- ವಿಡಿಯೊ ನೋಡಿ

Reckless Bike Ride: ಬೈಕ್ ಸವಾರನೊಬ್ಬ, ಹಿಂಬದಿ ಸವಾರನೊಂದಿಗೆ ಫುಟ್‍ಪಾತ್‍ನಲ್ಲಿ ವೇಗವಾಗಿ ಚಲಾಯಿಸಿದ್ದಲ್ಲೆದೆ, ದುಸ್ಸಾಹಸ ತೋರಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವರ್ತನೆಯು ಆತನಿಗೆ ತಿರುಗುಬಾಣವಾಗಿ ಪರಿಣಮಿಸಿದ್ದು, ಗುಂಡಿಗೆ ಬಿದ್ದು ಇಬ್ಬರೂ ಗಾಯಗೊಂಡಿದ್ದಾರೆ.

ನವದೆಹಲಿ: ಫುಟ್‌ಪಾತ್‌ಗಳಲ್ಲಿ (Footpath) ವಾಹನ ಚಲಾಯಿಸುವುದು ಕಾನೂನುಬಾಹಿರ ಮಾತ್ರವಲ್ಲದೆ ಅತ್ಯಂತ ಅಪಾಯಕಾರಿ. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು (Viral Video) ಈ ಅಜಾಗರೂಕ ವರ್ತನೆಯ ಅಪಾಯಗಳನ್ನು ತೋರಿಸುತ್ತದೆ. ಇದರಲ್ಲಿ ಒಬ್ಬ ಬೈಕರ್, ಹಿಂಬದಿ ಸವಾರನೊಂದಿಗೆ ಫುಟ್‌ಪಾತ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ. ಈ ವೇಳೆ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ್ದಾನೆ. ಇವರಿಬ್ಬರೂ ಮಾತ್ರವಲ್ಲದೆ ಬೇರೆಯವರನ್ನೂ ಅಪಾಯಕ್ಕೆ ಸಿಲುಕಿಸಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನ ದಟ್ಟಣೆ ಕಡಿಮೆ ಇದ್ದರೂ ಸಹ ಅಪಘಾತಗಳು ಹೇಗೆ ಸಂಭವಿಸಬಹುದು ಎಂಬುದನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ. ಪಾದಚಾರಿ ಮಾರ್ಗಗಳು ಪಾದಚಾರಿಗಳಿಗೆ ಮಾತ್ರ, ಸಾಹಸ ಅಥವಾ ಅತಿ ವೇಗದ ಸವಾರಿಗಳಿಗೆ ಪಾದಚಾರಿ ಮಾರ್ಗ ನಿರ್ಮಿಸಲಾಗಿಲ್ಲ. ಈ ನಿಯಮಗಳನ್ನು ನಿರ್ಲಕ್ಷಿಸುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.

ಒಬ್ಬ ವ್ಯಕ್ತಿ ಪಾದಚಾರಿ ಮಾರ್ಗದಲ್ಲಿ ಅತಿ ವೇಗದಲ್ಲಿ ಮೋಟಾರ್ ಬೈಕ್ ಓಡಿಸುತ್ತಿರುವುದನ್ನು ರೆಕಾರ್ಡ್ ಮಾಡಿದ್ದಾನೆ. ಅವನ ಹಿಂದೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದಾನೆ. ಕೆಲವು ಸೆಕೆಂಡುಗಳ ಕಾಲ, ಬೈಕರ್ ವೇಗವಾಗಿ ಚಲಿಸುತ್ತಾ, ಅಜಾಗರೂಕ ನಿಯಂತ್ರಣವನ್ನು ಪ್ರದರ್ಶಿಸಿದ್ದಾನೆ. ಈ ವೇಳೆ ಒಂದು ಗುಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಪ್ರಯಾಣಿಕ ಇಬ್ಬರೂ ಗಾಳಿಯಲ್ಲಿ ಎಸೆಯಲ್ಪಟ್ಟು ನೆಲಕ್ಕೆ ಬಿದ್ದರು.

ವಿಡಿಯೊ ವೀಕ್ಷಿಸಿ:



ಮುಖ್ಯರಸ್ತೆಯಲ್ಲಿ ವಾಹನದಟ್ಟಣೆ ಇಲ್ಲದಿದ್ದರೂ ಪಾದಚಾರಿ ರಸ್ತೆಯಲ್ಲಿ ಬೈಕ್ ಚಲಾಯಿಸುವ ಮೂಲಕ ಅಜಾಗರೂಕತೆ ತೋರಿಸಿದ್ದಾರೆ. ಈ ಇಬ್ಬರು ತಮ್ಮ ಅಪಾಯಕಾರಿ ಸಾಹಸಗಳಿಗೆ ಪಾದಚಾರಿ ಮಾರ್ಗವನ್ನು ಆರಿಸಿಕೊಂಡರು. ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 16,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಕಾಮೆಂಟ್‌ಗಳು ಬೈಕ್ ಸವಾರರ ಅಜಾಗರೂಕತೆ ಮತ್ತು ಅಜ್ಞಾನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇಂಥವರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಿ ತ್ಯಾಗ ಮಾಡಬೇಕು ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಮತ್ತೊಬ್ಬರು ದುಷ್ಟರು ಎಂದು ಕಾಮೆಂಟ್ ಮಾಡಿದ್ದಾರೆ. ಈ ದೇಶದಲ್ಲಿ ನೈತಿಕ ಅನಕ್ಷರತೆಯ ಮಟ್ಟವನ್ನು ಊಹಿಸಲು ಸಾಧ್ಯವಿಲ್ಲ ಎಂದು ಒಬ್ಬರು ಟೀಕಿಸಿದರೆ, ಇನ್ನೊಬ್ಬರು ನಿರುದ್ಯೋಗವು ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದರು.

ಜನರು ತಮ್ಮ ಜೀವದ ಬಗ್ಗೆ ಹೇಗೆ ಅಜ್ಞಾನಿಗಳಾಗುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಆದರೂ, ಕೆಲವರು ಅಜಾಗರೂಕತೆಯು ತಿರುಗುಬಾಣವಾಗಿ ಪರಿಣಮಿಸಿದ್ದನ್ನು ನೋಡಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಅತಿ ವೇಗದ ಸಾಹಸಗಳಿಗಾಗಿ ಪಾದಚಾರಿ ಮಾರ್ಗಗಳನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಉಂಟಾಗುವ ಅಪಾಯಗಳನ್ನು ಒತ್ತಿಹೇಳುತ್ತದೆ. ಪಾದಚಾರಿಗಳನ್ನು ರಕ್ಷಿಸಲು ಪಾದಚಾರಿ ಮಾರ್ಗಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ರೀತಿ ಬೈಕ್ ಚಲಾಯಿಸುವುದರಿಂದ ಪಾದಚಾರಿಗಳ ಜೀವಕ್ಕೂ ಸಂಕಷ್ಟಕ್ಕೆ ಎದುರಾಗಬಹುದು ಎಂದು ಕೆಲವರು ಹೇಳಿದರು.

ಇದನ್ನೂ ಓದಿ: Meteor shower: ಭಾರಿ ಉಲ್ಕಾಪಾತ! ಅಪರೂಪದ ದೃಶ್ಯ ಕಣ್ತುಂಬಿಕೊಂಡ ದೆಹಲಿ ಜನತೆ