ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬತ್ತಿಹೋದ ಭೂಮಿಗೆ ಹರಿದುಬಂದ ಕಾವೇರಿ...ನೀರು ನೋಡಿದ ಖುಷಿಯಲ್ಲಿ ಜನ ಮಾಡಿದ್ದೇನು? ವಿಡಿಯೊ ನೋಡಿ

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾವೇರಿ ಡೆಲ್ಟಾ ಪ್ರದೇಶಕ್ಕೆ ನೀರು ಹರಿಸಿದ್ದಾರೆ. ಕಾವೇರಿ ನೀರು ನಿಧಾನವಾಗಿ ಹರಿದು ತಮ್ಮ ಜಮೀನಿಗೆ ಬರುತ್ತಿದ್ದಂತೆ ಜನರು ಓಡಿ ಬಂದು ಹೂ, ಕಾಣಿಕೆಯನ್ನು ಅರ್ಪಿಸಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾವೇರಿ ನದಿ ಜತೆಗಿನ ಅವರ ಭಾವನಾತ್ಮಕ ಸಂಬಂಧವನ್ನು ಇದು ಸಾರಿ ಹೇಳಿದೆ.

ಕಾವೇರಿ ನದಿಯನ್ನು ಸ್ವಾಗತಿಸಿದ ಕುಂಭಕೋಣಂ ಜನರು

Profile pavithra Jun 23, 2025 7:23 PM

ಚೆನ್ನೈ: ಇತ್ತೀಚೆಗೆ ಕಲ್ಲನೈ ಅಣೆಕಟ್ಟಿನಿಂದ ಕಾವೇರಿ ನೀರು ಬಿಡುಗಡೆಯಾದಾಗ ತಮಿಳುನಾಡಿನ ನಿವಾಸಿಗಳು ಅದನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಿದ್ದಾರೆ. ಕಾವೇರಿ ನದಿಯ ಹರಿಯುವ ನೀರಿಗೆ ಸ್ಥಳೀಯರು ಹೂವುಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾವೇರಿ ಡೆಲ್ಟಾ ಪ್ರದೇಶದಲ್ಲಿ ನೀರಾವರಿಗಾಗಿ ನೀರನ್ನು ಬಿಡುಗಡೆ ಮಾಡಿದ್ದಾರೆ. ಕಾವೇರಿ ನೀರು ನಿಧಾನವಾಗಿ ಬತ್ತಿಹೋದ ಭೂಮಿಗೆ ಹರಿಯಲು ಶುರುಮಾಡುತ್ತಿದ್ದಂತೆ ಜನರು ಓಡಿ ಬಂದು ಸ್ವಾಗತಿಸಿದ್ದಾರೆ. ಸ್ಥಳೀಯರ ದೊಡ್ಡ ಗುಂಪು ನೆಲದ ಮೇಲೆ ಕಾಣಿಕೆಗಳನ್ನು ಹಾಗೂ ಹೂಗಳನ್ನು ಇಡುವುದು ವೈರಲ್ ಆದ ವಿಡಿಯೊದಲ್ಲಿ ಕಂಡುಬಂದಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ನೆಟ್ಟಿಗರೊಬ್ಬರು, "ಕಾವೇರಿ ಬರುತ್ತಿದ್ದಂತೆ, ಎಲ್ಲರ ಹೃದಯಕ್ಕೂ ಮೊದಲ ಮಳೆ ಭೂಮಿಗೆ ಬಂದಾಗ ಆಗುವಷ್ಟು ಖುಷಿಯಾಗಿದೆ. ಅದು ಕೇವಲ ನೀರಲ್ಲ, ಅದು ಭಾವನೆ, ಸಂಪ್ರದಾಯ ಮತ್ತು ಒಗ್ಗಟ್ಟು" ಎಂದು ಬರೆದಿದ್ದಾರೆ. "ನಮ್ಮ ನದಿಗಳು ನಮ್ಮ ಸಂಪ್ರದಾಯಗಳು, ಸಂಸ್ಕೃತಿ ಮತ್ತು 5,000 ವರ್ಷಗಳಷ್ಟು ಹಳೆಯದಾದ ನಮ್ಮ ನಾಗರಿಕತೆಗೆ ಬಹಳ ಸಂಬಂಧ ಹೊಂದಿವೆ!" ಎಂದು ಮತ್ತೊಬ್ಬರು ಬರೆದಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಮತ್ತೊಂದು ವಿಡಿಯೊದಲ್ಲಿ ಜನರು ನದಿಯ ನೀರನ್ನು ಸ್ವಾಗತಿಸಲು ವಿವಿಧ ಆಚರಣೆಗಳನ್ನು ಮಾಡುತ್ತಿರುವುದು ಕಂಡು ನೆಟ್ಟಿಗರೊಬ್ಬರು, "ಕುಂಭಕೋಣಂ ಜನರು ಕಾವೇರಿ ನದಿಯನ್ನು ಸ್ವಾಗತಿಸುತ್ತಾರೆ! ಡೆಲ್ಟಾದ ಆರ್ಥಿಕತೆಯು ಇನ್ನೂ ಕಾವೇರಿಯನ್ನು ಅವಲಂಬಿಸಿದೆ. ಅದು ಅವರ ಜೀವನಾಡಿ" ಎಂದು ಬರೆದಿದ್ದಾರೆ.ನದಿಗಳನ್ನು ಇನ್ನೂ ಪವಿತ್ರ ಅಸ್ತಿತ್ವಗಳಾಗಿ ಪೂಜಿಸಲಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಬೈಕ್‌ನಿಂದ ಬಿದ್ದ ದಂಪತಿಗೆ ಸಹಾಯ ಮಾಡಲು ಬಂದು ಚಿನ್ನಾಭರಣ ದೋಚಿದ ಕಳ್ಳರು!

ಕಲ್ಲನೈ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರ ಸ್ಮರಣಾರ್ಥವಾಗಿ ಮುಖ್ಯಮಂತ್ರಿ ಸಹ ಸಾಂಕೇತಿಕ ಕ್ರಿಯೆಯಾಗಿ ಹರಿಯುವ ನೀರಿನ ಮೇಲೆ ಬೀಜಗಳು ಮತ್ತು ಹೂವಿನ ದಳಗಳನ್ನು ಸುರಿದಿದ್ದಾರೆ. ಕಲ್ಲನೈ ಅಣೆಕಟ್ಟು ತಂಜಾವೂರು ಮತ್ತು ತಿರುಚಿ ಜಿಲ್ಲೆಗಳ ನಡುವಿನ ಗಡಿಯಲ್ಲಿದೆ.