ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 109 ವರ್ಷಗಳಿಂದ ಹೊತ್ತಿ ಉರಿಯುತ್ತಲೇ ಇದೆ ದೇಶದ ಈ ಸಿಟಿ! ಭೂಮಿ ಇನ್ನೂ ತಣ್ಣಗಾಗಿಯೇ ಇಲ್ವಂತೆ

The Earth Still Burns: ಒಂದು ಕಾಲದಲ್ಲಿ ಕಲ್ಲಿದ್ದಲಿಗೆ ಹೆಸರುವಾಸಿಯಾಗಿದ್ದ ಝಾರ್ಖಂಡ್‍ನ ಝಾರಿಯಾ ಪಟ್ಟಣವು ಇಂದು ಸಂಕಷ್ಟದ ಸ್ಥಿತಿಗೆ ತಲುಪಿದೆ. 1916ರ ಸುಮಾರಿಗೆ ಪ್ರಾರಂಭವಾದ ಕಲ್ಲಿದ್ದಲು ಗಣಿಯು, ಅವೈಜ್ಞಾನಿಕ ಗಣಿಗಾರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅಂದು ಭೂಮಿಯ ಒಡಲಲ್ಲಿ ಹೊತ್ತಿಕೊಂಡ ಬೆಂಕಿ ಇಂದು ಕೂಡ ಆರಿಲ್ಲ.

109 ವರ್ಷಗಳಿಂದ ಹೊತ್ತಿ ಉರಿಯುತ್ತಲೇ ಇದೆ ಈ ಭಾರತೀಯ ಪಟ್ಟಣ

-

Priyanka P Priyanka P Oct 29, 2025 1:47 PM

ರಾಂಚಿ: ಒಂದು ಕಾಲದಲ್ಲಿ ಭಾರತದ ಉಕ್ಕಿನ ಉದ್ಯಮಕ್ಕೆ ಶಕ್ತಿ ತುಂಬುತ್ತಿದ್ದ ಉತ್ತಮ ಗುಣಮಟ್ಟದ ಕಲ್ಲಿದ್ದಲ್ಲಿಗೆ ಹೆಸರುವಾಸಿಯಾಗಿದ್ದ ಈ ಸಣ್ಣ ಜಾರ್ಖಂಡ್ (Jharkhand) ಪಟ್ಟಣವು ಈಗ ಹೊಗೆ ಮತ್ತು ಬೆಂಕಿಯ ಕೆಂಡದ ರೂಪದಲ್ಲಿದ್ದು, ಭೂಮಿಯು ಇನ್ನೂ ತಣ್ಣಗಾಗಿಲ್ಲ. ಅತಿದೊಡ್ಡ ಸಂಪನ್ಮೂಲವಾಗಿದ್ದ ಪ್ರದೇಶವು ಇದೀಗ ಗಂಭೀರ ಪರಿಸ್ಥಿತಿಯಲ್ಲಿದ್ದೆ. ಭೂಗತ ಕಲ್ಲಿದ್ದಲ್ಲಿನ ಬೆಂಕಿಯು ಝಾರಿಯಾದಲ್ಲಿ (Jharia) ಭೂಮಿಯನ್ನು ಕಬಳಿಸುತ್ತಿದೆ ಮತ್ತು ಜನರು, ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ (Viral News).

109 ವರ್ಷಗಳು ಕಳೆದರೂ, ಭೂಮಿಯು ಇನ್ನೂ ಉರಿಯುತ್ತಿದೆ

1916ರ ಸುಮಾರಿಗೆ ಪ್ರಾರಂಭವಾದ ಕಲ್ಲಿದ್ದಲು ಗಣಿ ಬೆಂಕಿಯು ನೈಸರ್ಗಿಕ ವಿಕೋಪವಲ್ಲ, ಬದಲಾಗಿ ಅವೈಜ್ಞಾನಿಕ ಗಣಿಗಾರಿಕೆ ಮತ್ತು ಕಳಪೆ ಸುರಕ್ಷತಾ ಕ್ರಮಗಳ ಪರಿಣಾಮವಾಗಿತ್ತು. ಗಣಿಗಾರಿಕೆಯ ನಂತರ, ಹಲವಾರು ಗಣಿ ವಿಭಾಗಗಳನ್ನು ತೆರೆದಿಡಲಾಯಿತು. ಇದರಿಂದಾಗಿ ಕಲ್ಲಿದ್ದಲು ಗಾಳಿಯ ಸಂಪರ್ಕಕ್ಕೆ ಬಂದಾಗ ಬೆಂಕಿ ಹೊತ್ತಿಕೊಂಡಿತು. ಸಣ್ಣದಾಗಿ ಪ್ರಾರಂಭವಾದ ಬೆಂಕಿಯು ಈಗ ವಿಶಾಲವಾದ ಭೂಗತ ಪದರಗಳ ಮೂಲಕ ಹರಡಿ, ಝಾರಿಯಾದಲ್ಲಿ ನೂರಾರು ಚದರ ಕಿಲೋಮೀಟರ್‌ಗಳನ್ನು ಆವರಿಸಿದೆ.

ಮೇಲ್ಮೈ ಕೆಳಗೆ ಕಲ್ಲಿದ್ದಲು ಹೊಗೆಯಾಡುತ್ತಲೇ ಇದ್ದು, ತೀವ್ರವಾದ ಶಾಖ ಮತ್ತು ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಹಲವಾರು ಪ್ರದೇಶಗಳಲ್ಲಿ, ನೆಲವು ತುಂಬಾ ದುರ್ಬಲಗೊಂಡಿದ್ದು, ಅದು ಯಾವುದೇ ಕ್ಷಣದಲ್ಲಿ ಕುಸಿಯಬಹುದು. ಹೀಗಾಗಿ ಜನರು ಪ್ರಾಣಾಪಾಯದ ಜೊತೆಗೇ ಜೀವನ ನಡೆಸುವಂತಾಗಿದೆ.

ಇದನ್ನೂ ಓದಿ: Viral News: ಸರಿಯಾದ ಸಮಯಕ್ಕೆ ಬ್ಲೌಸ್ ನೀಡದ ಟೈಲರ್‌ಗೆ ಬಿತ್ತು ಹೆವೀ ಫೈನ್‌! 7000 ರೂ. ಪರಿಹಾರ ನೀಡುವಂತೆ ಕೋರ್ಟ್ ಆರ್ಡರ್‌

ಶತಮಾನಗಳಷ್ಟು ಹಳೆಯದಾದ ಈ ಬೆಂಕಿಯ ಹೊಡೆತಕ್ಕೆ ಝಾರಿಯಾದ ಜನರು ತತ್ತರಿಸುತ್ತಿದ್ದಾರೆ. ಕಲ್ಲಿದ್ದಲು ಬೆಂಕಿಯಿಂದಾಗಿ ನೆಲ ಕುಸಿದು, ಮನೆಗಳು ಮತ್ತು ರಸ್ತೆಗಳು ನಾಶವಾಗಿವೆ. ಇಂಗಾಲದ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಇದರಿಂದಾಗಿ ಉಸಿರಾಟದ ಕಾಯಿಲೆಗಳು, ಚರ್ಮದ ಸಮಸ್ಯೆಗಳು ಮತ್ತು ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತಿವೆ. ಭೂಗತ ಶಾಖವು ಜೀವನವನ್ನು ಅಸಹನೀಯವಾಗಿಸುತ್ತಿದೆ ಮತ್ತು ಅನೇಕ ನಿವಾಸಿಗಳು ಸ್ಥಳಾಂತರಗೊಳ್ಳಲು ಒತ್ತಾಯಿಸಲ್ಪಟ್ಟರೂ, ಬಡತನ ಮತ್ತು ಸೀಮಿತ ಉದ್ಯೋಗಾವಕಾಶಗಳು ಅವರನ್ನು ಅಪಾಯದಲ್ಲಿ ಸಿಲುಕಿಸುತ್ತಿವೆ.

ಸರ್ಕಾರ ಮತ್ತು ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (BCCL) ಬೆಂಕಿಯನ್ನು ನಂದಿಸಲು ಮಾಡಿದ ಪ್ರಯತ್ನಗಳು ಇಲ್ಲಿಯವರೆಗೆ ಸೀಮಿತ ಯಶಸ್ಸನ್ನು ಕಂಡಿವೆ. 2009 ರಲ್ಲಿ, ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಝರಿಯಾ ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆ (JRDP) ಅನ್ನು ಪ್ರಾರಂಭಿಸಲಾಯಿತು. ಆದರೆ, ಬೆಂಕಿಯ ತೀವ್ರತೆ ಮತ್ತು ಹರಡುವಿಕೆಯು ಸಂಪೂರ್ಣವಾಗಿ ನಂದಿಸಲು ಅಸಾಧ್ಯವಾಗಿದೆ.

ಇಂದು, ಝಾರಿಯಾ ಅನಿಯಂತ್ರಿತ ಗಣಿಗಾರಿಕೆ ಮತ್ತು ಪರಿಸರ ನಿರ್ಲಕ್ಷ್ಯದ ಪರಿಣಾಮಗಳ ಜ್ಞಾಪನೆಯಾಗಿ ನಿಂತಿದೆ. ಅದರ ಹೊಗೆಯಲ್ಲಿ, ಕಲ್ಲಿದ್ದಲು ಮಾತ್ರವಲ್ಲ, ಜನರ ಭರವಸೆಗಳು, ಆರೋಗ್ಯ ಮತ್ತು ಭವಿಷ್ಯವೂ ಉರಿಯುತ್ತಿದೆ. ಇದು ನಗರದ ಅತ್ಯಂತ ದೊಡ್ಡ ದುರಂತವಾಗಿದೆ.