ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ರಾಷ್ಟ್ರೋತ್ಥಾನ @60: ವಿದ್ಯಯಾ ವಿಂದತೇ ಅಮೃತಂ !

ಸಮಾಜದ ಸ್ವಾಸ್ಥ್ಯ ಹಾಗೂ ಸಬಲತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಆಧುನಿಕತೆಯ ಭರಾಟೆಯ ನಡುವೆ, ನಶಿಸುತ್ತಿರುವ ಸಂಸ್ಕಾರಯುತ ಶಿಕ್ಷಣವನ್ನು ಮತ್ತೆ ಹಳಿಗೆ ತರಲು ಹಾಗೂ ಶಿಕ್ಷಣ, ಸಾಹಿತ್ಯ, ಸೇವೆ ಮತ್ತು ಆರೋಗ್ಯ ಎನ್ನುವ ನಾಲ್ಕು ರಂಗಗಳ ತಳಹದಿಯ ಮೇಲೆ, ಸಮಾಜದ ಉತ್ಥಾನ ಮತ್ತು ಉದ್ಧಾರದ ಉದ್ದೇಶದಿಂದ ಜನುಮ ತಾಳಿದ ರಾಷ್ಟ್ರೋತ್ಥಾನ ಸಂಸ್ಥೆಗೆ ಈಗ ಅರವತ್ತರ ಹರೆಯ!

ರಾಷ್ಟ್ರೋತ್ಥಾನ @60: ವಿದ್ಯಯಾ ವಿಂದತೇ ಅಮೃತಂ !

Profile Ashok Nayak May 30, 2025 9:05 AM

ಪ್ರಚಲಿತ

ರವೀ ಸಜಂಗದ್ದೆ

ಭಾರತಾಂಬೆಯ ಮಡಿಲ ಮಣ್ಣಿನ ಸೊಗಡು, ಸೊಬಗು ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳ ಮನಸು ಮತ್ತು ಹೃದಯದಲ್ಲಿ ತುಂಬಿದಾಗ ಅಂಥಾ ಮಕ್ಕಳು ಶ್ರೇಷ್ಠ ಜನಾಂಗವಾಗಿ ಹೊರ ಹೊಮ್ಮಲು ಸಾಧ್ಯವಾಗುವುದು. ಅನ್ಯಾನ್ಯ ಕಾರಣಗಳಿಂದ ಒಂದಷ್ಟು ಕುಗ್ಗುತ್ತಿರುವ ದೇಶದ ಅಂತಃ ಸತ್ವವನ್ನು ಮತ್ತೆ ಮೇಲೆತ್ತಿ, ಸದೃಢ ಸಶಕ್ತ, ಸುಶಿಕ್ಷಿತ ಪಡೆಯನ್ನು ನಿರ್ಮಿಸಲು ಸಂಸ್ಕೃತಿ ಯುಕ್ತ ಮತ್ತು ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ವಿದ್ಯಾದಾನವು ಭಾರತದ ನೆಲದ ವಿಶಿಷ್ಟ ಗುಣ. ಜಗತ್ತಿಗೆ ಲಕ್ಷಾಂತರ ವಿದ್ವಾಂಸರು ಮತ್ತು ಬುದ್ಧಿವಂತರನ್ನು ನೀಡಿದ, ಪ್ರೌಢಿಮೆಯ ಶಿಕ್ಷಣ ನೀಡುತ್ತಾ ಸಮಾಜದ ಸರ್ವಾಂಗೀಣ ಭೌತಿಕ, ಆಧ್ಯಾತ್ಮಿಕ ಸಾಧನೆಗೆ ಬೆಳಕಾಗುವ ನಿಟ್ಟಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಅಂಥಾ ಉತ್ಕೃಷ್ಟ ಕಲಿಕಾ ಸಂಸ್ಥೆಗಳ ಸಾಲಲ್ಲಿ ಅಗ್ರಜನಾಗಿ ನಿಲ್ಲುವುದು ರಾಷ್ಟ್ರೋತ್ಥಾನ ಪರಿಷತ್.

ಸಮಾಜದ ಸ್ವಾಸ್ಥ್ಯ ಹಾಗೂ ಸಬಲತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಆಧುನಿಕತೆಯ ಭರಾಟೆಯ ನಡುವೆ, ನಶಿಸುತ್ತಿರುವ ಸಂಸ್ಕಾರಯುತ ಶಿಕ್ಷಣವನ್ನು ಮತ್ತೆ ಹಳಿಗೆ ತರಲು ಹಾಗೂ ಶಿಕ್ಷಣ, ಸಾಹಿತ್ಯ, ಸೇವೆ ಮತ್ತು ಆರೋಗ್ಯ ಎನ್ನುವ ನಾಲ್ಕು ರಂಗಗಳ ತಳಹದಿಯ ಮೇಲೆ, ಸಮಾಜದ ಉತ್ಥಾನ ಮತ್ತು ಉದ್ಧಾರದ ಉದ್ದೇಶದಿಂದ ಜನುಮ ತಾಳಿದ ರಾಷ್ಟ್ರೋತ್ಥಾನ ಸಂಸ್ಥೆಗೆ ಈಗ ಅರವತ್ತರ ಹರೆಯ!

ವ್ಯಕ್ತಿ, ವ್ಯಕ್ತಿತ್ವ, ಉತ್ಕೃಷ್ಟ ಯುವ ಜನಾಂಗ ಮತ್ತು ಶ್ರೇಷ್ಠ ಸಮಾಜ ನಿರ್ಮಾಣದ ಜತೆಜತೆಗೆ ಸರಕಾರದಿಂದ ಯಾವುದೇ ಸವಲತ್ತು ಕೇಳದೇ, ಸರಕಾರವನ್ನು ಒಂದು ಚೂರೂ ಅವಲಂಬಿಸದೇ ಈ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಜತೆಗೆ ಸಮಾಜಕ್ಕೆ ಒಳ್ಳೆಯ, ಉತ್ತಮ, ಪೀಳಿಗೆಗಳು ನೆನಪಿಡುವ ಕೆಲಸವನ್ನು ಈ ಸಂಸ್ಥೆ ಸದ್ದಿಲ್ಲದೇ, ಪ್ರಚಾರ ಬಯಸದೇ ಕಳೆದ ಆರು ದಶಕಗಳಿಂದ ಮಾಡುತ್ತಿದೆ.

ಇದನ್ನೂ ಓದಿ: Ravi Sajangadde Column: ಅಶ್ವಿನ್‌, ರೋಹಿತ್‌, ಕೊಹ್ಲಿ- ಸಿ&ಬಿ ಗಂಭೀರ್‌ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಪೂರ್ತಿ ಮತ್ತು ಕೆಲವು ಮಹಾನುಭಾವರ ಸಮಾಜಮುಖಿ ಚಿಂತನೆಯ ಭಾಗವಾಗಿ 1965ರಲ್ಲಿ ಈ ಸಂಸ್ಥೆ ಸ್ಥಾಪಿತವಾಯಿತು. ರಾಷ್ಟ್ರೀಯ ವಿಚಾರಧಾರೆಗಳ ಶಿಕ್ಷಣದ ಜತೆಗೆ, ರಾಷ್ಟ್ರಪ್ರೇಮದ ಸಾಹಿತ್ಯ ಪ್ರಕಾರದಲ್ಲಿ ರಾಷ್ಟ್ರೋತ್ಥಾನ ನಿರಂತರ ಕೆಲಸ ಮಾಡು ತ್ತಿದೆ. ಅಶಕ್ತರಿಗೆ, ಆರ್ಥಿಕವಾಗಿ ಸಬಲರಲ್ಲದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕ್ಷೇತ್ರ ದಲ್ಲಿ ಸಹಾಯ-ಸಹಕಾರ ನೀಡುತ್ತಾ ಬಂದಿದೆ. ಇದೆಲ್ಲವೂ ರಾಷ್ಟ್ರೋತ್ಥಾನ ಸಂಸ್ಥೆಯ ದೇಶ ಸೇವಾ ಯಜ್ಞ!

ರಾಷ್ಟ್ರೋತ್ಥಾನ ಶಾಲೆಗಳು ಪಂಚಮುಖಿ ಶಿಕ್ಷಣದ ತತ್ವಗಳನ್ನು ಅಳವಡಿಸುವ ಮೂಲಕ ವಿದ್ಯಾರ್ಥಿ ಗಳ ಪಂಚಕೋಶಾತ್ಮಕ ವಿಕಾಸ ಅಂದರೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ. ದೇಶದ ಪ್ರಾಚೀನ, ಕಾಲಾತೀತ ರಾಷ್ಟ್ರೀಯ ಸಂಸ್ಕೃತಿ ಮತ್ತು ವೈಜ್ಞಾನಿಕ ಕಲಿಕಾ ಸಂಪ್ರದಾಯಗಳ ಮೂಲಕ ಇಲ್ಲಿ ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ. ಪರಂಪರೆಯಿಂದ ಬಂದಿರುವ ಸಾಂಪ್ರ ದಾಯಿಕ ಮತ್ತು ಶ್ರೇಷ್ಠ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಕಾರದ ಕಲಿಕೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಗುಣಮಟ್ಟದ ಮತ್ತು ಧನಾತ್ಮಕ ಪರಿವರ್ತನೆಯ ಶಿಕ್ಷಣವು ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಲಭ್ಯವಾಗುವಂತೆ ಮಾಡುವುದು ರಾಷ್ಟ್ರೋತ್ಥಾನದ ಗುರಿ. ಜತೆಗೆ ಇದರ ಪ್ರಮುಖ ಕಾಳಜಿಯೆಂದರೆ ಮಕ್ಕಳು, ಪೋಷಕರು, ಶಿಕ್ಷಕರು ತಮ್ಮ ಪರಿಧಿಯಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುವ ಮೂಲಕ ವ್ಯಕ್ತಿತ್ವ ಪರಿವರ್ತನೆಯ ಸನ್ಮಾರ್ಗದ ಮೂಲಕ ಸಮಾಜದ ಸಾಮಾಜಿಕ ಸತ್ಪರಿವರ್ತನೆಯನ್ನು ಖಚಿತಪಡಿಸುವುದೂ ಆಗಿದೆ.

ವಿದ್ಯಾರ್ಥಿ ಕೇಂದ್ರಿತ ಮತ್ತು ಆಕರ್ಷಕ-ಆಧುನಿಕ ಬೋಧನೆ, ಕಲಿಕಾ ವಾತಾವರಣ ಎಲ್ಲ ರಾಷ್ಟ್ರೋ ತ್ಥಾನ ಶಿಕ್ಷಣ ಸಂಸ್ಥೆಗಳ ಹೆಗ್ಗಳಿಕೆ. ಬಾಲ್ಯ ಶಿಕ್ಷಣ ಕೇಂದ್ರ, ಸಂಸ್ಥೆಗಳು, ರಾಜ್ಯ ಪಠ್ಯಕ್ರಮ ಶಾಲೆಗಳು, ಸಿಬಿಎಸ್‌ಸಿ ಶಾಲೆಗಳು ಮತ್ತು ಪಿಯುಸಿ ಕಾಲೇಜುಗಳೊಂದಿಗೆ ಆರಂಭವಾದ ಶಿಕ್ಷಣ ಯಜ್ಞವು ಈಗ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ, ಉತ್ಕೃಷ್ಟ ಸಂಶೋಧನಾಧಾರಿತ ಪಠ್ಯಪುಸ್ತಕ ಮತ್ತು ಬೋಧನಾ ಕ್ರಮದೊಂದಿಗೆ ಅತ್ಯುತ್ತಮ ಶಿಕ್ಷಕ ವೃಂದವನ್ನೂ ಸೃಷ್ಟಿಸಿ ಸಮಾಜಕ್ಕೆ ಅನನ್ಯ ಕೊಡುಗೆ ನೀಡು ತ್ತಿದೆ.

ರಾಷ್ಟ್ರೋತ್ಥಾನ ಶಿಕ್ಷಣ ವ್ಯವಸ್ಥೆಯ ಪರಿಧಿಯ ಕಿರುನೋಟ ಇಲ್ಲಿದೆ. ರಾಜ್ಯ ಪಠ್ಯಕ್ರಮದಡಿಯಲ್ಲಿ ರಾಜ್ಯದ ವಿವಿಧೆಡೆಯ 14 ಶಾಲೆಗಳಲ್ಲಿ 7000+ ವಿದ್ಯಾರ್ಥಿಗಳು ನುರಿತ ಮುನ್ನೂರು ಅಧ್ಯಾಪಕರ ಗರಡಿಯಲ್ಲಿ ಕಲಿಯುತ್ತಿದ್ದಾರೆ. ಇತರ 14 ಕಡೆಗಳಲ್ಲಿ ಸಿಬಿಎಸ್‌ಸಿ ಪಠ್ಯಕ್ರಮದ ಅಡಿಯಲ್ಲಿ 15000+ ವಿದ್ಯಾರ್ಥಿಗಳು 800ಕ್ಕೂ ಹೆಚ್ಚಿನ ಅನುಭವಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಚೆರ್ಕಾಡಿ ಗ್ರಾಮದ ಕೇಶವ ನಗರದಲ್ಲಿ ಇಪ್ಪತ್ತು ಎಕರೆ ವಿಶಾಲ ಪ್ರದೇಶದಲ್ಲಿ ಪ್ರಿ-ಕೆಜಿಯಿಂದ ಪಿಯುಸಿವರೆಗಿನ ಶಿಕ್ಷಣ ಒದಗಿ ಸಲು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಸಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಲೋಕಾ ರ್ಪಣೆಯಾಯಿತು. ಈ ವರ್ಷ ಪ್ರಿ-ಕೆಜಿಯಿಂದ ಎಂಟನೆಯ ತರಗತಿಯವರೆಗೆ ಹಾಗೂ ಪ್ರಥಮ ಪಿಯುಸಿ (PಇIಆ, PಇIಇಖ, ಇಟಞಞಛ್ಟ್ಚಿಛಿ) ತರಗತಿಗಳು ಆರಂಭವಾಗಿವೆ.

ಸುಮಾರು 800+ ಮಕ್ಕಳು ಈಗಾಗಲೇ ದಾಖಲಾತಿ ಮಾಡಿಸಿಕೊಂಡಿದ್ದಾರೆ. ಹತ್ತಿರದ ಪರಿಸರದಿಂದ ಶಿಕ್ಷಣ ಕೇಂದ್ರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ JEE, NEET, KCET, CA, CS, CLAT ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, scholarship ಜತೆಗೆ SSLC ಅಂಕ ಗಳನ್ನು ಆಧರಿಸಿ 100%ವರೆಗೂ ವಿದ್ಯಾರ್ಥಿ ವೇತನ ದೊರೆಯಲಿದೆ.

ಉಡುಪಿ ಪರಿಸರದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಉತ್ತಮ ಅವಕಾಶವಿದು. ಇದೇ ಮೇ ೩೦ರಂದು ವಿದ್ಯಾರಂಭ, ಅಕ್ಷರ ಪಾಠ ಸಮಾರಂಭಕ್ಕೆ ಶೃಂಗೇರಿ ಜಗದ್ಗುರುಗಳು ಆಗಮಿಸಿ ಶುಭಾಶೀರ್ವಾದ ನೀಡಲಿದ್ದಾರೆ. ರಾಷ್ಟ್ರೋತ್ಥಾನ ಪರಿವಾರಕ್ಕೆ ಮತ್ತೊಂದು ಹೊಸ ಕಟ್ಟಡಗಳು ಧಾರವಾಡದ ಮಮ್ಮಿಗಟ್ಟಿ ಹಾಗೂ ಸತ್ತೂರಿಲ್ಲಿ ನಿರ್ಮಾಣಗೊಂಡಿವೆ. ಮೊನ್ನೆ ಮೇ 23ರ ವೈಶಾಖ ಕೃಷ್ಣೈಕಾದಶಿ ಯಂದು ಈ ಹೊಸ ಕಟ್ಟಡಗಳು ಲೋಕಾರ್ಪಣೆಗೊಂಡವು.

ಇದರ ಜತೆಗೆ ಮೇ 28ರಂದು ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು ದಾವಣಗೆರೆ ಇದರ ನೂತನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಿಲಯಗಳ ಕಟ್ಟಡಗಳ ಉದ್ಘಾಟನೆ ನೆರವೇರಲಿದೆ. ಸಂಸ್ಕಾರ ಯುತ ಮತ್ತು ಮೌಲ್ಯಯುತ ಶಿಕ್ಷಣವನ್ನು ಸಮಾಜದ ಕೊನೆಯ ಹಂತದ ಜನರಿಗೂ ಕೈಗೆಟುಕುವ ಶುಲ್ಕದೊಡನೆ ನೀಡುವ ಸತ್ಕಾರ್ಯಕ್ಕೆ ಯೋಜನೆಯ ಈ ಬಾರಿಯ ಹಂತದಲ್ಲಿ ಹಲವು ಹೊಸ ಕೇಂದ್ರ ಮತ್ತು ಕಟ್ಟಡಗಳು ರಾಷ್ಟ್ರೋತ್ಥಾನ ಪರಿಷತ್ ಬಳಗಕ್ಕೆ ಸೇರಿಕೊಂಡು ಪರಿಷತ್ ಮತ್ತಷ್ಟು ಸದೃಢವಾಯಿತು.

ಕಾಲಾಂತರದಲ್ಲಿ ಭಾರತದ ಮೇಲೆ ನಡೆದ ಹಲವು ಆಕ್ರಮಣಗಳ ಹೊರತಾಗಿಯೂ ಭಾರತ ಇಷ್ಟು ಅಚಲವಾಗಿರಲು, ಸದೃಢವಾಗಿರಲು ಇಲ್ಲಿನ ಪರಂಪರಾಗತ ಶಿಕ್ಷಣ ವ್ಯವಸ್ಥೆಯೇ ಕಾರಣ. ಅಂಥಾ ಉತ್ಕೃಷ್ಟ ಬೋಧನಾ ಕ್ರಮವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಎಲ್ಲ ಶಿಕ್ಷಣ ಸಂಸ್ಥೆಗಳು ಚಾಚೂ ತಪ್ಪದೇ ಪಾಲಿಸುತ್ತಿವೆ. ಅದ್ಭುತ ವಿಚಾರ ಎಂದರೆ ಭಾರತದ ಮೇಲೆ ನಡೆದ ದಾಳಿಗಳಿಂದ ವೈರಿ ಪಡೆಗಳಿಗೆ ನಮ್ಮ ಕಟ್ಟಡಗಳು, ಶ್ರದ್ಧಾ ಕೇಂದ್ರಗಳು ಮತ್ತು ಒಂದಷ್ಟು ಜನರನ್ನು ನಿರ್ಮೂಲನೆ ಮಾಡಲಷ್ಟೇ ಸಾಧ್ಯವಾಯಿತು.

ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಉದಾತ್ತ ಮೌಲ್ಯ, ಚಿಂತನೆಗಳು ಮತ್ತು ಸನಾತನ ಧರ್ಮದ ಅನನ್ಯ ವಿಚಾರಗಳನ್ನು ಸಾಸಿವೆಯಷ್ಟೂ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಪ್ರತಿಯೊಂದು ದಾಳಿಯೂ ನಮ್ಮೆಲ್ಲರ ಅಸ್ಮಿತೆಯನ್ನು, ಅಂತಃಸತ್ವವನ್ನು ಮತ್ತಷ್ಟು ದೃಢವಾಗಿಸಿತು, ಉನ್ನತ ವಾಗಿಸಿತು! ಅದು ಸನಾತನ ಧರ್ಮದ ಶ್ರೇಷ್ಠತೆ, ಅಂಥಾ ಶ್ರೇಷ್ಠತೆಯ ಶೈಕ್ಷಣಿಕ ರೂಪವೇ ರಾಷ್ಟ್ರೋ ತ್ಥಾನ ಪರಿಷತ್!

ಈ ರಾಷ್ಟ್ರೋತ್ಥಾನ ಪರಿವಾರದ ಶಕ್ತಿ ಎಂದರೆ ಅದರ ಶ್ರೇಯೋಭಿವೃದ್ಧಿಗಾಗಿ ನಿರಂತರ ದುಡಿಯುವ ಹಲವಾರು ಸಜ್ಜನರು. ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರೋತ್ಥಾನದ ಉಸಿರು, ಅಸ್ಮಿತೆ, ನಾಡಿ ಮಿಡಿತ, ಹೃದಯ ಎಂದು ಕರೆಸಿಕೊಳ್ಳುವವರು ಅದರ ಕಾರ್ಯದರ್ಶಿಯಾಗಿ ಅದ್ಭುತವಾದ ಕೆಲಸ ಮಾಡುತ್ತಿರುವ ದಿನೇಶ್ ಹೆಗ್ಡೆ. ರಾಜ್ಯಾದ್ಯಂತ ರಾಷ್ಟ್ರೋತ್ಥಾನ ಪರಿವಾರದ ವಿಸ್ತಾರದಲ್ಲಿ ಅವರ ಕೊಡುಗೆ ಅಪಾರ. ಮಕ್ಕಳಿಗೆ ಅವರ ಭವಿಷ್ಯ ರೂಪಿಸುವ ಸಾಧನವಾಗಿ ಶಾಲೆಗಳು ಇರಬೇಕು ಎನ್ನುವ ಸದುದ್ದೇಶದಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸುವ ಗುರಿ ಇದೆ. ಶಿಕ್ಷಣ ಮತ್ತು ಸಮಾಜ ಇನ್ನೊಂದು ಎತ್ತರ ಮೇಲೇರಲು ಹಲವರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ದಾನಿಗಳು, ಸಜ್ಜನರು, ಮಹನೀಯರ ದೊಡ್ಡ ಬಳಗವೇ ಇರುವುದು ರಾಷ್ಟ್ರೋತ್ಥಾನ ಪರಿಷತ್ತಿನ ನಿಜವಾದ ಆಸ್ತಿ-ಶಕ್ತಿ!

ಆರೋಗ್ಯ, ಶಿಕ್ಷಣ, ಸಮಾಜಸೇವೆ, ರಾಷ್ಟ್ರೀಯ ಸಾಹಿತ್ಯ ಸ್ವಾವಲಂಬನೆ, ರಕ್ತದಾನ ಕ್ಷೇತ್ರದಲ್ಲಿ ರಾಷ್ಟ್ರೋತ್ಥಾನ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ. ಇವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಯಾರೂ ಮಾಲೀಕರು ಇಲ್ಲದಿದ್ದರೂ ಮಾಲೀಕತ್ವ ವಹಿಸಿಕೊಂಡ ಹಿತೈಷಿಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ನಿಜವಾದ ಆಸ್ತಿ. ಯಾರೋ ಕಟ್ಟಿzರೆ, ಯಾರೋ ಕೊಟ್ಟಿದ್ದಾರೆ, ಯಾರೋ ಮಾಡುತ್ತಿದ್ದಾರೆ ಎನ್ನುವ ವಿಚಾರ ಹೌದಾದರೂ ನಮ್ಮಿಂದ ಇಂಥಾ ವಿಚಾರಗಳಿಗೆ ಹೇಗೆ ಸಹಾಯ ಹಸ್ತ ಚಾಚಬಹುದು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕು.

ನಮ್ಮ ಕೈಲಾದ ಸಹಕಾರ ಎಲ್ಲರೂ ನೀಡಿದಾಗ ಇಂಥಾ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಿ, ಎಡೆಗಳಲ್ಲಿ ಇಂಥಾ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಸಂಸ್ಥೆಗಳು ಜನುಮ ತಾಳಲು ಸಾಧ್ಯ. ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದುದರ ಸ್ಮರಣಾರ್ಥ ಮತ್ತು ಕೊಡುಗೆಯಾಗಿ ನಮ್ಮ ಊರಿನ ಶಾಲೆ ಗಳಿಗೆ ಮತ್ತು ರಾಷ್ಟ್ರೋತ್ಥಾನ ಮುಂತಾದ ಸಮಾಜಮುಖಿ ಚಿಂತನೆಯ, ಲಾಭರಹಿತವಾಗಿ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳನ್ನು ನಮ್ಮ ಕೊಡುಗೆಗಳ ಮೂಲಕ ಉಳಿಸಿ, ಬೆಳೆಸುವ ಮಹತ್ತರ ಜವಾ ಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದಿನ ಜನಾಂಗಕ್ಕೆ ಆಸ್ತಿ ಮಾಡುವುದು ದೊಡ್ಡದಲ್ಲ; ನಮ್ಮನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಿಕೊಂಡು, ಸಾಮಾಜಿಕ ಆಸ್ತಿಯಾದ ಮುಂದಿನ ಜನಾಂಗವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಪಣ ತೊಡಬೇಕಾಗಿದೆ.

ಉತ್ತಮ ನಾಳೆಗಳನ್ನು ಮತ್ತು ಉತ್ತಮ ಜನಾಂಗವನ್ನು ರೂಪಿಸುವ ಕೈಂಕರ್ಯದಲ್ಲಿ ತೊಡಗುವ ಎಲ್ಲ ಸಂಘ-ಸಂಘಟನೆಗಳಿಗೂ ರಾಷ್ಟ್ರೋತ್ಥಾನ ಮಾದರಿ ಅಗ್ರಜ. ಇಂಥಾ ಪರಿಷತ್ತುಗಳು, ಇದರ ಹಿಂದೆ ದುಡಿಯುವ ಕೈಗಳು ನೂರ್ಮಡಿಯಾಗಲಿ. ಅರವತ್ತರ ಸಂಭ್ರಮದಲ್ಲಿ ಇರುವ ರಾಷ್ಟ್ರೋ ತ್ಥಾನ ಪರಿಷತ್ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತನ್ನ ಬಳಗಕ್ಕೆ ಸೇರಿಸಿಕೊಂಡು, ಸಂಸ್ಕಾರಯುತ ಮತ್ತು ಮೌಲ್ಯಯುತ ಶಿಕ್ಷಣ ಸಂಪದ್ಭರಿತವಾಗಿ ದೇಶದಗಲ ಪಸರಿಸಲಿ.

‘ವಿದ್ಯಯಾ ವಿಂದತೇ ಅಮೃತಂ’ ಅಂದರೆ ವಿದ್ಯಾಭ್ಯಾಸದ ಮೂಲಕ ಮನುಷ್ಯ (ವಿದ್ಯಾರ್ಥಿ) ಯಶಸ್ಸು ಗಳಿಸುತ್ತಾನೆ ಮತ್ತು ಆ ಮೂಲಕ ಪರಮಾನಂದ ಪಡೆಯುತ್ತಾನೆ. ಅಂಥಾ ಸಹಸ್ರಾರು ಪರಮಾನಂದಿಗಳನ್ನು ಮತ್ತು ರಾಷ್ಟ್ರ ಪ್ರೇಮಿಗಳನ್ನು ತಯಾರಿಸಿ ಸಮಾಜಕ್ಕೆ ಕೊಡುವ ರಾಷ್ಟ್ರೋ ತ್ಥಾನ ಪರಿಷತ್ತಿಗೆ ಮತ್ತದರ ಹಿಂದಿರುವ ಆರ್‌ಎಸ್‌ಎಸ್‌ನಂತಹ ಮುಂತಾದ ಧಿಃಶಕ್ತಿಗಳಿಗೆ ದೊಡ್ಡ ದೊಂದು ಸಲಾಂ!